ಹುಬ್ಬಳ್ಳಿಯಲ್ಲಿ ಮಂಜು ಕವಿದ ವಾತಾವರಣ: 25 ನಿಮಿಷ ಸುತ್ತಾಡಿ ಲ್ಯಾಂಡ್ ಆದ ವಿಮಾನ
Team Udayavani, Oct 8, 2020, 12:15 PM IST
ಹುಬ್ಬಳ್ಳಿ: ಗುರುವಾರ ಬೆಳಗ್ಗೆ ಮುಸುಕಿನ ವಾತಾವರಣವಿದ್ದ ಪರಿಣಾಮ ಮುಂಬಯಿ-ಹುಬ್ಬಳ್ಳಿ ಇಂಡಿಗೋ ವಿಮಾನ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿ, ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಮುಂಬಯಿಯಿಂದ ಬೆಳಗ್ಗೆ 8:00 ಗಂಟೆಗೆ 65 ಪ್ರಯಾಣಿಕರೊಂದಿಗೆ ಸರಿಯಾದ ಸಮಯಕ್ಕೆ ನಗರಕ್ಕೆ ಆಗಮಿಸಿದ ಇಂಡಿಗೊ ವಿಮಾನ, ಆಕಾಶದಲ್ಲಿ ಸುಮಾರು 4 ಕಿಮೀ ಅಂತರದಲ್ಲಿ ಮಂಜು ಕವಿದ ವಾತಾವರಣ ಇದುದ್ದರಿಂದ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿತು. ಮುಸುಕಿದ್ದ ಮಂಜು ತಿಳಿಯಾದ ಮೇಲೆ ಎಟಿಸಿ ಸಿಗ್ನಲ್ ದೊರೆತ ಕೂಡಲೇ 8:23 ಗಂಟೆಗೆ ಸುರಕ್ಷಿತವಾಗಿ ರನ್ ವೇ ಗೆ ಇಳಿಯಿತು.
ಇದನ್ನೂ ಓದಿ:ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ನಂತರ ವಿಮಾನ ಹತ್ತು ನಿಮಿಷ ತಡವಾಗಿ 8:50 ಗಂಟೆಗೆ ಮರಳಿ ಮುಂಬಯಿಗೆ 70 ಪ್ರಯಾಣಿಕರೊಂದಿಗೆ ಯಾನ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು