ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ


Team Udayavani, Oct 20, 2020, 1:46 AM IST

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಶತಮಾನದಲ್ಲಿ ಆಕ್ಟಿಕ್‌ನಲ್ಲಿನ ಮಂಜುಗಡ್ಡೆಯ ಪದರವು ಕರಗುತ್ತಿದೆ ಎಂಬ ಅಂಶವನ್ನು ನ್ಯಾಷನಲ್‌ ಸ್ನೋ ಆ್ಯಂಡ್‌ ಐಸ್‌ ಡೇಟಾ ಸೆಂಟರ್‌ ಬಹಿರಂಗಪಡಿಸಿದೆ. ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಂಜಿನ ಗಡ್ಡೆಗಳು 14 ಲಕ್ಷ ಎಕರೆಗಳಷ್ಟು ತಗ್ಗಿವೆ ಎಂದು ವರದಿ ಹೇಳಿದೆ. ಇದೇ ವೇಳೆ, ಹವಾಮಾನ ವೈಪರೀತ್ಯವನ್ನು ತಡೆಯದೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಪ್ರಾಣಿ ಪ್ರಪಂಚ ಹೇಗೆ ವಿನಾಶದತ್ತ ಸಾಗಲಿದೆ ಎಂಬುದನ್ನು ನ್ಯಾಚುರಲಿಸ್ಟ್‌ ಸ್ಟೀವ್‌ ಬ್ಯಾಕ್‌ಶಲ್‌ ಕಲ್ಪಿಸಿಕೊಂಡಿದ್ದಾರೆ. ತಾಪಮಾನ ಹೆಚ್ಚಳ, ನಿರ್ಗಲ್ಲುಗಳ ಕರಗುವಿಕೆ, ಸಮುದ್ರದ ಉಷ್ಣತೆ ಏರಿಕೆಯಿಂದ ಆಕ್ಟಿìಕ್‌ನ ಪ್ರಾಣಿಗಳ ದೇಹಸ್ಥಿತಿಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂಬುದನ್ನು ವಿವರಿಸಿದ್ದಾರೆ. ಅವರ ಊಹೆ ಹೀಗಿದೆ:

ಹಿಮ ಕರಡಿಯ ಬಣ್ಣ ಬದಲು
2040ರ ವೇಳೆಗೆ ಆಕ್ಟಿìಕ್‌ನಲ್ಲಿ ಮಂಜು ಕಾಣೆಯಾಗುತ್ತದೆ. ಹಿಮಕರಡಿಗಳು ಒಂದೋ ಹಸಿವಿನಿಂದ ಸಾಯುತ್ತವೆ ಅಥವಾ ದೀರ್ಘ‌ಕಾಲ ಈಜುತ್ತಾ ಕೊನೆಗೊಂದು ದಿನ ಮುಳುಗಿ ಸಾಯುತ್ತವೆ. ಹೇಗೋ ಭೂಪ್ರದೇಶ ತಲುಪುವ ಬೆರಳೆಣಿಕೆಯ ಕರಡಿಗಳು, ತಮ್ಮ ಶುಭ್ರ ಶ್ವೇತವರ್ಣ ಕಳೆದುಕೊಂಡು ಬೂದು ಬಣ್ಣಕ್ಕೆ ತಿರುಗಬಹುದು. ಯಾವುದೋ ತ್ಯಾಜ್ಯದ ರಾಶಿಯಲ್ಲಿ ಆಹಾರ ಹುಡುಕುತ್ತಾ ದಿನಕಳೆಯಬಹುದು.

ಪಫಿನ್‌ಗೂ ತಟ್ಟಲಿದೆ ಬಿಸಿ
ಅಟ್ಲಾಂಟಿಕ್‌ ಸಾಗರದಲ್ಲಿ ಕಂಡುಬರುವ ದೊಡ್ಡ ಕೊಕ್ಕಿನ ಹಕ್ಕಿಯಿದು. ನೀರಿನ ತಾಪಮಾನ ಹೆಚ್ಚುವ ಕಾರಣ ಪಫಿನ್‌ಗಳು ಆಕ್ಟಿìಕ್‌ನ ಉತ್ತರ ಭಾಗದತ್ತ ಸಂಚರಿಸಬಹುದು. ಸಾಮಾನ್ಯವಾಗಿ ಒಂದು ಋತುವಿನಲ್ಲಿ ಈ ಹಕ್ಕಿಗಳ ಕೊಕ್ಕು ಪ್ರಖರ ಬಣ್ಣಕ್ಕೆ ತಿರುಗುತ್ತದೆ. ಆದರೆ ಹವಾಮಾನ ವೈಪರೀತ್ಯ ದಿಂದಾಗಿ ಈ ಪ್ರಕ್ರಿಯೆಯೇ ಸ್ಥಗಿತಗೊಳ್ಳಬಹುದು. ಕೊಕ್ಕು ಮತ್ತು ರೆಕ್ಕೆಗಳ ಬಣ್ಣ ಪೇಲವವಾಗಬಹುದು.

ಕುಗ್ಗಲಿದೆ ಕಡಲ ಸಿಂಹ
ಸೀಲ್‌ ಜಾತಿಯ ಕಡಲ ಪ್ರಾಣಿ ವಾಲಸ್‌ನ ದೇಹದ ಬಣ್ಣ ಕಡುಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಿನ್ನಲು ಆಹಾರವಿಲ್ಲದೇ ಇದರ ಗಾತ್ರ ಕುಗ್ಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಮಂಜುಗಡ್ಡೆಯಿಂದ ಹೊರಬರಲು ಸಹಾಯಮಾಡುವಂಥ ಇದರ ಕೋರೆಹಲ್ಲುಗಳಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇತರೆ ಪ್ರಾಣಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲಷ್ಟೇ ಈ ಹಲ್ಲುಗಳು ಬಳಕೆಯಾಗಬಹುದು.

ಸಣಕಲಾಗುವ ನರಿ
ಬದಲಾದ ಹೊಸ ಜಗತ್ತಿನಲ್ಲಿ ಬದುಕುಳಿಯುವ ಸಲುವಾಗಿ ನರಿಗಳ ದೇಹದ ಗಾತ್ರವೇ ಬದಲಾಗಲಿದೆ. ಉಷ್ಣತೆ ಹೆಚ್ಚುತ್ತಾ ಹಸಿರು ಹೊದಿಕೆಯ ನೆಲವೂ ಮರುಭೂಮಿ ಯಂತಾಗುವ ಕಾರಣ, ನರಿಗಳ ಕಿವಿಗಳು ದೊಡ್ಡದಾಗುತ್ತಾ, ಕಾಲುಗಳು ಉದ್ದವಾಗುತ್ತಾ ಸಾಗಲಿದೆ. ಹಸಿವಿನಿಂದಾಗಿ ಹೊಟ್ಟೆಯು ಬೆನ್ನಿಗೆ ಅಂಟಲಿದೆ, ದೇಹವು ಸಣಕಲಾಗಲಿದೆ.

ಲೋಳೆ ಮೀನಿಗೆ ಹೆಚ್ಚು ಶಕ್ತಿ
ತಾಪಮಾನ ಏರಿಕೆಯು ಎಲ್ಲ ಪ್ರಾಣಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದರೆ, ಅಚ್ಚರಿಯೆಂಬಂತೆ ಲೋಳೆ ಮೀನು(ಜೆಲ್ಲಿ ಫಿಶ್‌) ಮಾತ್ರ ಉಷ್ಣತೆ ಹೆಚ್ಚಿರುವ ನೀರಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಲಿದೆ. ಅವುಗಳ ಗಾತ್ರವೂ ಹಿಗ್ಗಲಿದ್ದು, ಇನ್ನಷ್ಟು ವಿಷಯುಕ್ತವಾಗಲಿವೆ. ಅಂದರೆ, ಈ ಮೀನುಗಳು ಬಾಟಲ್‌ನೋಸ್‌ ಡಾಲ್ಫಿನ್‌ಗಳಂಥ ಬೃಹದಾಕಾರದ ಮೀನುಗಳನ್ನೂ ಬೇಟೆಯಾಡುವಷ್ಟು ಶಕ್ತಿ ಗಳಿಸಲಿವೆ.

ಟಾಪ್ ನ್ಯೂಸ್

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.