ಶಾಸಕರದ್ದು ಬಾಲಿಶತನದ ಹೇಳಿಕೆ: ಕಳಲೆ ಕೇಶವಮೂರ್ತಿ


Team Udayavani, Oct 23, 2020, 4:38 PM IST

mysuru-tdy-1

ನಂಜನಗೂಡು: ಜುಬಿಲಿಯಂಟ್ಸ್‌ ಕಿಟ್‌ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು ನಿಜ ಎಂದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸಂಸದ ಪ್ರತಾಪ ಸಿಂಹ ನಿಜವನ್ನೇ ಹೇಳಿದ್ದಾರೆ. ಆ ಸತ್ಯಕ್ಕೆ ಸ್ಥಳೀಯ ಶಾಸಕರ ಉತ್ತರ ಮಾತ್ರ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

ಗುರುವಾರ ನಂಜನಗೂಡಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.2 ತಿಂಗಳ ಹಿಂದೆಯೇ ಮಾಜಿ ಲೋಕಸಭಾ ಸದಸ್ಯ ಆರ್‌.ಧ್ರುವನಾರಾಯಣ ಹಾಗೂ ತಾವು ಈ ಆಹಾರದ ಕಿಟ್‌ ಹಂಚಿಕೆಯಲ್ಲಿ ಭಾರೀ ಗೋಲ್‌ ಮಾಲ್‌ ನಡೆದಿದ್ದು ತನಿಖೆಯಾಬೇಕುಎಂದು ಹೇಳಿದ್ದನ್ನು ಮೆಲುಕು ಹಾಕಿದ ಅವರು, ನಾವು ಹೇಳಿದ್ದ ಸತ್ಯವನ್ನೇ ಈಗ ಬಿಜೆಪಿ ಸಂಸದ ಪ್ರತಾಪಸಿಂಹ್‌ ಪುಷ್ಟೀಕರಿಸಿದ್ದಾರೆಂದರು. ಅರ್ಥವಾಗಿಲ್ಲ:ಜುಬಿಲಿಯಂಟ್ಸ್‌ ಕಾರ್ಖಾನೆ ನಂಜನಗೂಡಿನ ಲ್ಲಿದ್ದ ಮಾತ್ರಕ್ಕೆ ಅದು ನಂಜನಗೂಡಿಗೆ ಸೀಮಿತ ವಲ್ಲ. ಅದು ವಿಶ್ವಮಟ್ಟದ ಔಷಧಿಕಾರ್ಖಾನೆ ಎಂಬುದನ್ನು ಮೊದಲು ಶಾಸಕರು ಅರಿಯಲಿ. ಕಾರ್ಖಾನೆ ನೌಕರರು ಹಬ್ಬಿಸಿದ ಸೋಂಕು ಕೇವಲ ನಂಜನಗೂಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ರಲಿಲ್ಲ. ಇದು ಇವರ ಬಾಲಿಶತನಕ್ಕೆ ಅರ್ಥ ವಾಗಬೇಕಲ್ಲ ಎಂದು ಕಟುಕಿದರು.

ಹಿಂಬಾಲಕರಿಗೆ:ಶಾಸಕರೇ ಒಪ್ಪಿಕೊಂಡ ಹಾಗೆಯೇ ಜುಬಿಲಿ ಯಂಟ್ಸ್‌ ನೀಡಿದ 50 ಸಾವಿರ ಆಹಾರದ ಕಿಟ್‌ ಹಂಚಿಕೆಯಾಗಿದ್ದು ನಿಜ. ಆದರೆ ಸಾರ್ವಜನಿಕರಿ ಗಲ್ಲ, ಬಡವರಿಗೂ ಅಲ್ಲ. ಶಾಸಕರ ಹಿಂಬಾಲಿಕರಿಗೆ ಮಾತ್ರ ಹಂಚಿಕೆಯಾಗಿದ್ದು ಸತ್ಯ ಎಂದು ಟೀಕಿಸಿದರು.

ಭ್ರಷ್ಟಾಚಾರದ ವಿರುದ್ಧ ಸತ್ಯ ಹೇಳಿದರೆ ಕ್ಷೇತ್ರಕ್ಕೆ ಅಪಮಾನ ಎಂದರೆ ಕುಂಬಳ ಕಾಯಿ ಕಳ್ಳ ಎಂದರೆ ಮೈ ಪರಚಿಕೊಂಡ ಹಾಗೆ ಎಂದು ಕೇಶವಮೂರ್ತಿಹಾಲಿ ಶಾಸಕರ ಮಾತಿಗೆ ಕಿಡಿಕಾರಿದರು. ಅಪ್ರಾಮಾಣಿಕತೆಯ ವಿಷಯ ಬಂದಾಗ ತಾತ ಬಸವಲಿಂಗಪ್ಪ ಮಾವ ಶ್ರೀನಿವಾಸ್‌ ಪ್ರಸಾದರಕವಚ ಧರಿಸಲು ಹೊರಡುವ ಹರ್ಷವರ್ಧನ ಮೊದಲು ಕಿಟ್‌ ಅವ್ಯಹಾರದ ತನಿಖೆ ಮಾಡಿಸಲಿ. ಕ್ಷೇತ್ರದ ಎಷ್ಟು ಮನೆಗೆ ಇವರು ಪಡೆದಿರುವಜುಬಿಲಿಯಂಟ್ಸ್‌ ಕಿಟ್‌ ತಲುಪಿದೆ. ಹಿಂಬಾಲಕರಿಗೆಷ್ಟು ತಲುಪಿದೆ ಎಂಬ ಹೂರಣ ಹೊರಬರಲಿ ಎಂದು ಒತ್ತಾಯಿಸಿದರು.

ತನಿಖೆ ಮೊಟಕು:ಪ್ರಾಮಾಣಿಕ ಅಧಿಕಾರಿ ಹರ್ಷಗುಪ್ತರ ತನಿಖೆ ಸ್ಥಗಿತವಾಗಲು ಕಿಟ್‌ ಹಂಚಿಕೆ ಗೋಲ್‌ಮಾಲ್‌ ಅವ್ಯವಹಾರವೇಕಾರಣ. ತನಿಖೆ ಪೂರ್ಣವಾಗಿದ್ದರೆ ಇವರಹುಳುಕು ಬಯಲಾಗುತ್ತಿತ್ತು. ಅದಕ್ಕಾಗಿಯೇ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.ಪ್ರತಾಪ ಸಿಂಹ ಹೇಳಿದ್ದು ಅಕ್ಷರಶಃ ಸತ್ಯ. ಸತ್ಯ ಹೇಳಲು ಯಾವುದೇ ಕ್ಷೇತ್ರ ಪರಿಧಿ ಬೇಕೇ. ಶಾಸಕರು ಮೊದಲು ಬಾಲಿಶತನದ ಹೇಳಿಕೆ ನಿಲ್ಲಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಕಾಂಗ್ರೆಸ್‌ ನಗರಾಧ್ಯಕ್ಷ ಸಿ. ಎಂ.ಶಂಕರ್‌, ಗ್ರಾಮಾಂತರ ಅಧ್ಯಕ್ಷ ಮಹೇಶ ಕುರಹಟ್ಟಿ , ಹುಲ್ಲಳ್ಳಿ ಘಟಕದ ಅಧ್ಯಕ್ಷ ಶ್ರೀಕಂಠನಾಯಕ, ನಗರಸಭಾ ಸದಸ್ಯರಾದ ಗಂಗಾಧರ್‌, ಸ್ವಾಮಿ, ಗಾಯತ್ರಿ, ಮುಖಂಡರಾದ ರಾಮಲಿಂಗು, ಸಿದ್ದಲಿಂಗಪ್ಪ ಮತ್ತಿತರರಿದ್ದರು.

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.