ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಬಾಳು ಹಸುರಾಗಿಸಿದ ಸ್ವಸಹಾಯ ಸಂಘ ; ಸಮಗ್ರ ಕೃಷಿ ಆಧಾರ

Team Udayavani, Oct 28, 2020, 4:56 AM IST

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಬೆಳ್ತಂಗಡಿ: ಬಡತನ ನಿರ್ಮೂಲನೆಗೆ ಭಾರತ ಸರಕಾರ ಗ್ರಾಮೀ ಣಾಭಿವೃದ್ಧಿ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಸಾಕಾರಗೊಳಿಸಿದೆ. ಮಹಿಳೆಯರ ಸಶಕ್ತೀಕರಣಕ್ಕೆ ಸ್ವಸಹಾಯ ಸಂಘಗಳ ಬಲವರ್ಧನೆಗೊಳಿಸಿ ಬಡತನ ನಿರ್ಮೂಲನೆಗೆ ತಂದ‌ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ದಡಿ ನೆರವು ಪಡೆದ ಬೆಳಾಲಿನ ಮಹಿಳೆಯರ ಸ್ವಸಹಾಯ ಗುಂಪೊಂದು ಕೃಷಿ ಚಟುವ ಟಿಕೆಯಲ್ಲಿ ಸಾಧನೆ ಮೆರೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದೊಂಪದ ಪಲ್ಕೆ ಆಸುಪಾಸಿನ ಮಹಿಳೆಯರ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರು ಬಾಳೆ ತೋಟ ಬೆಳೆದು ಬೆಳಾಲು ಗ್ರಾಮಕ್ಕೆ ಪ್ರೇರಣೆಯಾಗಿದ್ದಾರೆ. ಸಂಘದ ಮೇಲುಸ್ತುವಾರಿಯಾಗಿರುವ ಮಧುರಾ ಬೆಳಾಲು ಗ್ರಾ.ಪಂ. ಮಟ್ಟದ ಒಕ್ಕೂಟಕ್ಕೂ ಅಧ್ಯಕ್ಷೆ. ಹರಿಣಾಕ್ಷಿ ಕಾರ್ಯ ದರ್ಶಿಯಾಗಿದ್ದು, ಭವ್ಯಾ, ಯಶೋದಾ, ವನಿತಾ, ಸೀತಾಲಕ್ಷ್ಮೀ ಮತ್ತು ಕಮಲಾ ಅವರನ್ನೊಳಗೊಂಡ ಗುಂಪು ಮಾದರಿ ಕೃಷಿ ಕಾಯಕದಲ್ಲಿ ಯಶಸ್ವಿಯಾಗಿದೆ.

ಉದ್ಯೋಗವಿಲ್ಲ ಎಂದು ಕೊರಗುವ ಬದಲು ಬಾಳೆ ಕೃಷಿ ಮಾಡುವ ಮುಂದಾ ಲೋಚನೆಯೊಂದಿಗೆ ಕಾರ್ಯ ನಿರತರಾಗಿ ಒಂದೂವರೆ ವರ್ಷಗಳಿಂದ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯ ಸ್ವಸಹಾಯ ಗುಂಪುಗಳ ಪೈಕಿ ಸಕ್ರಿಯ ಹಾಗೂ ಪರಿಣಾಮಕಾರಿ ಗುಂಪು ಎಂಬ ಗೌರವಕ್ಕೂ ಪಾತ್ರವಾಗಿದೆ.

ಲೀಸ್‌ಗೆ ಜಮೀನು
ಸ್ವಸಹಾಯ ಗುಂಪಿನ ಸ‌ದಸ್ಯರಲ್ಲಿ ಓರ್ವರಾದ ಕಮಲಾ ಅವರಿಂದ ವರ್ಷಕ್ಕೆ 20 ಸಾವಿರ ರೂ.ಗೆ ಎರಡು ವರ್ಷದ ಅವಧಿಗೆ ಒಂದು ಎಕ್ರೆ ಜಮೀನು ಲೀಸ್‌ಗೆ ಪಡೆದಿದ್ದಾರೆ. ಜಮೀನನ್ನು ಜೆಸಿಬಿ ಮುಖೇನ ಹದ ಮಾಡಿ ಬಾಳೆ ತೋಟ ನಿರ್ಮಿಸಿದ್ದಾರೆ. 1,000 ಸಾವಿರ ಕ್ಯಾವಂಡೀಸ್‌, 500 ನೇಂದ್ರ ಸೇರಿ 1,500 ಬಾಳೆ ಬೆಳೆದಿದ್ದಾರೆ. 38 ರೂ. ನಂತೆ ಗಿಡಗಳನ್ನು ಬೆಂಗಳೂರಿನಿಂದ ತರಿಸಿಕೊಡುವಲ್ಲಿ ಎನ್‌ಆರ್‌ಎಲ್‌ಎಂ ಸಹಕರಿಸಿದೆ.

ಬಾಳೆ ಗಿಡ ನೆಟ್ಟ ಏಳು ತಿಂಗಳಲ್ಲಿ ಕ್ಯಾವಂಡೀಸ್‌ ತಳಿ ಗೊನೆ ಬಿಟ್ಟಿದೆ. ಜೈವಿಕ ಗೊಬ್ಬರ ಜತೆಗೆ ಕಾಯಿ ಸಂಪದ್ಭರಿತವಾಗಿ ಬೆಳೆಯಲು ಗೊನೆಯ ಹೂ ತೆಗೆದು ಕಡಲೆ ಹಿಟ್ಟು, ಬೆಲ್ಲ, ಗೋಮಯ, ಗೋಮೂತ್ರ ಬಳಸಿ ನಿರ್ಮಿಸಿದ ಜೀವಾಮೃತ ಕಟ್ಟಲಾಗಿದೆ. ಕಾಡುಪ್ರಾಣಿಗಳ ಹಾವಳಿ ತಪ್ಪಿಸುವ ಸಲುವಾಗಿ 50 ಸಾವಿರ ರೂ. ವ್ಯಯಿಸಿ ಸೋಲಾರ್‌ ಬೇಲಿ ನಿರ್ಮಿಸಿದ್ದಾರೆ.

ಬೇಕಿದೆ ಮಾರುಕಟ್ಟೆ
ಸಾವಯವ ಕೃಷಿಗೆ ಬೇಡಿಕೆ ಉತ್ತಮ ವಾಗಿದ್ದರೂ ಮಾರುಕಟ್ಟೆ ಒದಗಿಸುವುದು ಸವಾಲಾಗಿದೆ. ಹಲವೆಡೆ ಮಾತುಕತೆ ನಡೆಸಿದರೂ ಸೂಕ್ತ ಬೆಲೆ ದೊರೆಯುವ ಬಗ್ಗೆ ಆತಂಕ ಇವರಲ್ಲಿದೆ. ಈಗಾಗಲೇ ವಿತರಕರಲ್ಲಿ ಮಾತುಕತೆ ನಡೆಸಲಾಗಿದ್ದು, ನೇರವಾಗಿ ಸ್ಥಳೀಯ ಮಾರುಕಟ್ಟೆ ದೊರೆತಲ್ಲಿ ಲಾಭದಾಯಕವಾಗಲಿದೆ. ಇಷ್ಟು ಮಾತ್ರವಲ್ಲದೆ ಸದಸ್ಯರು ಟೈಲರಿಂಗ್‌, ಎಂಬಾùಡರಿ, ಜೇನು ಸಾಕಣೆ, ತರಕಾರಿ ಬೆಳೆ, ಅಣಬೆ ಕೃಷಿ ಮತ್ತು ಮೀನು ಮರಿ ಸಾಕಾಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಣಬೆ ಬೆಳೆಯ ತರಬೇತಿ ಪಡೆದು ಅನೇಕ ಪ್ರಯೋಗಗಳ ಮೂಲಕ ಸ್ಥಳೀಯ ಮಾರುಕಟ್ಟೆಯನ್ನು ಇವರೇ ಬೆಳೆಸಿರುವುದು ಸಾಧನೆ. ಈ ಮೂಲಕ ಸುತ್ತಮುತ್ತ ಹತ್ತಾರು ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಜಿಲ್ಲಾದ್ಯಂತ ಅನೇಕ ಕೃಷಿಕರು ಇವರ ಬೆಳೆನಿರ್ವಹಣೆ ಕುರಿತು ಮಾಹಿತಿ ಪಡೆಯುವ ಜತೆಗೆ ಸಲಹೆ ನೀಡುತ್ತಿದ್ದಾರೆ. ನಮಗೆ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್‌ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಯಾನಂದ್‌ ತರಬೇತಿ ನೀಡಿದ್ದಾರೆ ಎಂದು ಬೆಳಾಲು ಗ್ರಾ.ಪಂ. ಒಕ್ಕೂಟ ಅಧ್ಯಕ್ಷೆ ಮಧುರಾ ಹರ್ಷ ವ್ಯಕ್ತಪಡಿಸಿದ್ದಾರೆ.

ಏನಿದು ಎನ್‌ಆರ್‌ಎಲ್‌ಎಂ ಯೋಜನೆ?
ಪ್ರತೀ ಬಿಪಿಎಲ್‌ ಕುಟುಂಬದ ಕನಿಷ್ಠ ಒಬ್ಬ ಮಹಿಳೆಯನ್ನು ಸ್ವ-ಸಹಾಯ ಸಂಘಗಳ ಸಮೂಹದಲ್ಲಿ ಸೇರಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಬಡಕುಟುಂಬಗಳನ್ನು ಅಭಿವೃದ್ಧಿ ಪಡಿಸುವುದೇ ಎನ್‌ಆರ್‌ಎಲ್‌ಎಂ ಯೋಜನೆಯ ಮೂಲ ಉದ್ದೇಶ. ಕನಿಷ್ಠ 10-15 ಮಹಿಳೆಯರನ್ನು ಹೊಂದಿರುವ ಸ್ವಸಹಾಯ ಸಂಘಗಳು ಎನ್‌ಆರ್‌ಎಲ್‌ಎಂ ಯೋಜನೆಯ ಪಂಚಸೂತ್ರ ಮತ್ತು ದಶಸೂತ್ರಗಳಿಗೆ ಅಣುಗುಣವಾಗಿ ಸಕ್ರಿಯವಾಗಿರಬೇಕು. 15 ಸಾವಿರ ರೂ.ನಿಂದ ಲಕ್ಷ ರೂ.ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಈಗಾಗಲೇ ದ.ಕ. ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯು ಸ್ವಸಹಾಯ ಗುಂಪುಗಳನ್ನು ಸಕ್ರಿಯವಾಗಿ ಮಾಡಿದ್ದಲ್ಲದೆ ಗ್ರಾ.ಪಂ. ಮಟ್ಟದ 167 ಒಕ್ಕೂಟ, ವಾರ್ಡ್‌ ಮಟ್ಟದಲ್ಲಿ 692 ಒಕ್ಕೂಟ, 5,122 ಸಂಜೀವಿನಿ ಸ್ವಸಹಾಯ ಸಂಘಗಳು ಹಾಗೂ 60 ಸಾವಿರ ಮಹಿಳಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಗೆ ಮಾದರಿ
ಬೆಳಾಲು ಗ್ರಾ.ಪಂ. ಸಂಜೀವಿನಿ ಸ್ವಸಹಾಯ ಒಕ್ಕೂಟ ಜಿಲ್ಲೆಗೆ ಮಾದರಿಯಾಗಿದೆ. ತರಬೇತಿ, ಮೂಲ ಸೌಕರ್ಯ ಉದ್ದೇಶಗಳಿಗೆ ರಾಜ್ಯದ ಆರು ಒಕ್ಕೂಟಗಳ ಪೈಕಿ ಬೆಳಾಲು ಒಕ್ಕೂಟಕ್ಕೆ 9.6 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದು ಜಿಲ್ಲೆಯ ಸೊÌàದ್ಯೋಗ ಬಯಸುವ ಮಹಿಳೆಯರಿಗೆ ಪ್ರೇರಣೆಯಾಗಿದೆ.
-ಮಧುಕುಮಾರ್‌ ಆರ್‌., ಯೋಜನಾ ನಿರ್ದೇಶಕರು ದ.ಕ.ಜಿ.ಪಂ. ಮಂಗಳೂರು

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.