ವಚನ ಸಾಹಿತ್ಯಕ್ಕಿದೆ ವಿಶ್ವ ಮಾರ್ಗದರ್ಶನ ಶಕ್ತಿ
Team Udayavani, Oct 28, 2020, 3:48 PM IST
ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಶರಣರು ತಮ್ಮ ಅನುಭವದ ಮೂಲಕ ರಚಿಸಿದ ವಚನ ಸಾಹಿತ್ಯಕ್ಕೆ ಇಡೀ ವಿಶ್ವಕ್ಕೆ ಮಾರ್ಗದರ್ಶನಮಾಡುವ ಶಕ್ತಿ ಇದೆ ಎಂದು ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅಂತಾರಾಷ್ಟ್ರೀಯ ಧರ್ಮ ಕೇಂದ್ರದ ವತಿಯಿಂದ ನಗರದ ಹರಳಯ್ಯ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ 41ನೇ ಲಿಂಗವಂತ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಲ್ಯಾಣ ಕ್ರಾಂತಿ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವರ್ಗ-ವರ್ಣ, ಜಾತಿ, ಮೇಲು-ಕೀಳು ಎಲ್ಲವನ್ನೂ ಮೀರಿಸುವ ಮಾನವೀಯ ಸಾಹಿತ್ಯವಾಗಿದೆ ಎಂದರು. ಜಾತೀಯತೆ ನಿರ್ಮೂಲನೆಗೆ ಶರಣರು ದೊಡ್ಡ ಹೋರಾಟ ಮಾಡಿ ಯಶಸ್ಸು ಸಾಧಿ ಸಿದ್ದಾರೆ. ಅವರ ಆಶಯಗಳು, ತ್ಯಾಗ-ಬಲಿದಾನ ಹುಸಿ ಹೋಗದಂತೆ ಅನ್ಯ ಆಚರಣೆ ಬಿಟ್ಟು ಬಸವತತ್ವದ ಆಚರಣೆ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಮಹಾರಾಷ್ಟ್ರದ ಜಾಲನಾ ಮೆಡಿಕಲ್ ಕಾಲೇಜಿನ ಡಾ| ಅಮರನಾಥ ಸೋಲಪುರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನ ಎಲ್ಲ ಕ್ರಾಂತಿಗಳತಾಯಿ ಬೇರು ಕಲ್ಯಾಣ ಕ್ರಾಂತಿ. ಎಲ್ಲ ಕುಲ, ಜಾತಿ,ಧರ್ಮಗಳು ಸೇರಿಕೊಂಡು ಭೇದ-ಭಾವವಿಲ್ಲದೇಅಭಿವ್ಯಕ್ತಪಡಿಸಲು ಸ್ವಾತಂತ್ರÂ ಸಿಕ್ಕಿತು. ಬಸವಣ್ಣನವರ ನೇತೃತ್ವದಲ್ಲಿ ಎಲ್ಲರೂ ಕೂಡಿಕೊಂಡು ಬಹುದೊಡ್ಡ ಕ್ರಾಂತಿ ಮಾಡಿದ್ದರು ಎಂದರು.
ಹರಳಯ್ಯ ಗವಿಯ ಶ್ರೀ ಡಾ| ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಶರಣರ ತತ್ವಗಳು ವಿಶ್ವ ಮಾನವ ತತ್ವಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ ಜನಾಂಗ ನಿರ್ಮಾಣವಾಗಬೇಕು. ಆಯುಧಪೂಜೆಯಾಗದೇ ಇಷ್ಟಲಿಂಗ ಯೋಗ ಮಾಡಬೇಕು ಎಂದರು. ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದರು.
ಈ ವೇಳೆ ಬಸವರಾಜ ಬಾಲಿಕಿಲೆ, ಗುರುಪಾದಪ್ಪ ಪಾಟೀಲ, ಶ್ರೀಕಾಂತ ಮೋದಿ, ಸಾರಿಗೆ ಅಧಿ ಕಾರಿ ಸಂಜೀವಕುಮಾರ ವಾಡೇಕರ್ ಇತರರು ಇದ್ದರು. ರವೀಂದ್ರ ಕೊಳಕೂರ ಸ್ವಾಗತಿಸಿದರು. ಪ್ರೊ| ವಿಜಯಲಕೀÒ$¾ಗಡ್ಡೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ