ಕಲಬುರಗಿ ಜಿಲ್ಲೆಗೆ ಬರಲಿದೆ ಮತ್ತೂಂದು ಸಿಮೆಂಟ್‌ ಕಂಪನಿ


Team Udayavani, Oct 29, 2020, 4:12 PM IST

ಕಲಬುರಗಿ ಜಿಲ್ಲೆಗೆ ಬರಲಿದೆ ಮತ್ತೂಂದು ಸಿಮೆಂಟ್‌ ಕಂಪನಿ

ಕಲಬುರಗಿ: ಜಿಲ್ಲೆಯಲ್ಲಿ ಖ್ಯಾತ ಸಿಮೆಂಟ್‌ ಕಂಪನಿಯೊಂದು ತನ್ನ ಘಟಕವೊಂದನ್ನು ಸ್ಥಾಪಿಸಲು ಮುಂದೆ ಬಂದಿದ್ದು, ಈಗ
ಸ್ಥಾಪನೆಗೆ ಸಿದ್ಧತೆಗಳು ನಡೆದಿವೆ. ಸೇಡಂ ತಾಲೂಕಿನ ಆಗ ಹೊಸಹಳ್ಳಿ ಮತ್ತು ಕೊಂಕನಹಳ್ಳಿ ಗ್ರಾಮಗಳ ಸಮೀಪ ಸುಮಾರು
120 ಹೆಕ್ಟೇರ್‌ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ. ದಾಲ್ಮಿಯಾ ಭಾರತ ಗ್ರೂಪ್‌ನವರು ಹೂಡಿಕೆಗೆ ಮುಂದೆ ಬಂದಿದ್ದು, ಜಿಲ್ಲೆಯಲ್ಲಿ ಸಿಮೆಂಟ್‌ ಕಾರ್ಖಾನೆ ಸ್ಥಾಪಿಸಲು ಒಲವು ತೋರಲಾಗುತ್ತಿದೆ. ಒಂದು ವೇಳೆ ಈ ಸಿಮೆಂಟ್‌
ಕಾರ್ಖಾನೆ ಸ್ಥಾಪನೆ ಅಂತಿಮಗೊಂಡರೆ ರಾಜ್ಯದಲ್ಲಿ ದಾಲ್ಮಿಯಾ ಗ್ರೂಪ್‌ನಿಂದ ಎರಡನೇ ಕಾರ್ಖಾನೆ ಸ್ಥಾಪಿಸಿದಂತೆ ಆಗಲಿದೆ.

ಈಗಾಗಲೇ ಬೆಳಗಾವಿಯಲ್ಲಿ ದಾಲ್ಮಿಯಾ ಸಿಮೆಂಟ್‌ ಕಾರ್ಖಾನೆ ಇದೆ. ಕಳೆದ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೈಗಾರಿಕ ಸಚಿವ ಜಗದೀಶ ಶೆಟ್ಟರ್‌ ಅವರು ದಾಲ್ಮಿಯಾ ಗ್ರೂಪ್‌ ಮತ್ತು ಭಾರತಿ ಎಂಟರ್‌ ಪ್ರೈಸಸ್‌ ಮುಖ್ಯಸ್ಥರೊಂದಿಗೆ
ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಕರ್ನಾಟಕ ಹೂಡಿಕೆ ಮತ್ತು ಉದ್ಯಮಿ ಸ್ನೇಹಿ ರಾಜ್ಯವಾಗಿದ್ದು, ಹೊಸ ಹೂಡಿಕೆ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದಿಸಲಾಗುವುದು ಎಂದು ಕಂಪನಿಗಳ ಮುಖ್ಯಸ್ಥರಿಗೆ ಭರವಸೆ ನೀಡಲಾಗಿದೆ.

ಇದನ್ನೂ ಓದಿ:ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

ದಾಲ್ಮಿಯಾ ಗ್ರೂಪ್‌ನವರು ಈಗಾಗಲೇ ರಾಜ್ಯದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಈಗ ಮುಖ್ಯಮಂತ್ರಿಗಳ ಮಾತುಕತೆ ನಂತರ ಮತ್ತೆ ಹೂಡಿಕೆಗೆ ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಸಿಮೆಂಟ್‌ ಕಾರ್ಖಾನೆ ಸ್ಥಾಪನೆಗಾಗಿ ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ ಎಂಬುದಾಗಿ ಕಂಪನಿಯ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

ಹಳೆಯದ್ದಕ್ಕೆ ಮರು ಜೀವ?: ದಾಲ್ಮಿಯಾ ಗ್ರೂಪ್‌ನವರು ಈ ಹಿಂದೆಯೇ ಸೇಡಂ ತಾಲೂಕಿನಲ್ಲಿ ಸಿಮೆಂಟ್‌ ಕಂಪನಿ ಸ್ಥಾಪನೆಗೆ
ಮುಂದೆ ಬಂದಿದ್ದರು. ವಾರ್ಷಿಕ 4 ಮಿಲಿಯನ್‌ ಟನ್‌ ಸಿಮೆಂಟ್‌ ಉತ್ಪಾದನಾ ಕಾರ್ಖಾನೆ ಮತ್ತು 45 ಮೇಗಾ ವ್ಯಾಟ್‌ ಸಾಮರ್ಥ್ಯದ
ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಸಿಮೆಂಟ್‌ ಕಾರ್ಖಾನೆಗೆ 2008ರ ಮೇನಲ್ಲಿ ಅನುಮೋದನೆ ಸಹ
ನೀಡಲಾಗಿತ್ತು. ಆಗ ಮುಖ್ಯಮಂತ್ರಿಯಾಗಿ ಯುಡಿಯೂರಪ್ಪನವರೇ ಇದ್ದರು. ಹೀಗಾಗಿ ಈಗ ಇದೇ ಯೋಜನೆಗೆ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕ್ಷುಲ್ಲಕ ವಿಚಾರಕ್ಕೆ ಜಗಳ : ಚಾಕುವಿನಿಂದ ಇರಿದು ವೃದ್ಧನ ಕೊಲೆ

ಆಗ ಹೊಸಹಳ್ಳಿ ಮತ್ತು ಕೊಂಕನಹಳ್ಳಿ ಗ್ರಾಮಗಳ ಸಮೀಪ ಸುಮಾರು 120 ಹೆಕrೇರ್‌ ಪ್ರದೇಶದಲ್ಲಿ ಕಾರ್ಖಾನೆ
ಉದ್ದೇಶಿಸಲಾಗಿತ್ತು. ಎರಡೂ ಗ್ರಾಮಗಳಲ್ಲಿ ಜಮೀನು ಅಂತಿಮಗೊಳಿಸಲಾಗಿತ್ತು. ಕಾರ್ಖಾನೆಗೆ ಕಾಗಿಣಾ ನದಿಯಿಂದ ಪೂರೈಕೆಗೆ
ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಅಹವಾಲು ಸಭೆ ನಡೆಸಲಾಗಿತ್ತು. ಆದರೆ, ಸಾರ್ವಜನಿಕ ಅಹವಾಲು ಸಭೆಯಲ್ಲಿ ಗ್ರಾಮಸ್ಥರು ಮತ್ತು ಕಂಪನಿಯವರು ನಡುವೆ ಒಮ್ಮತ ಏರ್ಪಡದೇ ಗದ್ದಲ ಉಂಟಾಗಿತ್ತು. ಆಗ
ಪೊಲೀಸರು ಗಾಳಿಯಲ್ಲಿ ಗುಂಡು ಸಹ ಹಾರಿಸಿ ಸಭೆಯನ್ನು ನಿಯಂತ್ರಿಸಿದ್ದರು. ತದನಂತರ 60ಕ್ಕೂ ಹೆಚ್ಚು ಜನರ ಮೇಲೆ
ಪೊಲೀಸ್‌ ಪ್ರಕರಣ ದಾಖಲಾಗಿತ್ತು. ನಂತರ ರೈತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿತ್ತು.

ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದಾಲ್ಮಿಯಾ ಗ್ರೂಪ್‌ನವರಿಗೆ ಆಹ್ವಾನ ನೀಡಲಾಗಿದೆ. ಹೊಸ ಹೂಡಿಕೆ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವ ಕುರಿತು ಭರವಸೆ ನೀಡಲಾಗಿದೆ. ಹೂಡಿಕೆ ಪ್ರಸ್ತಾವನೆ ಬಂದ ನಂತರ ಯೋಜನೆಗಳ ಸ್ಪಷ್ಟ ನೀಲಿನಕ್ಷೆ ಗೊತ್ತಾಗಲಿದೆ.
– ಜಗದೀಶ ಶೆಟ್ಟರ್‌, ಬೃಹತ್‌ ಕೈಗಾರಿಕಾ ಸಚಿವ

ರೈತರ ಹಾಗೂ ಕಂಪನಿ ನಡುವೆ ಮಾತುಕತೆ ವಿಫ‌ಲವಾಗಿದ್ದರಿಂದ ಘಟಕ ಸ್ಥಾಪನೆ ಕೈ ಬಿಟ್ಟಂತಾಗಿದೆ. ಗಲಾಟೆಯಾದ ನಂತರ 60ಕ್ಕೂ ಹೆಚ್ಚು ರೈತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ತಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ ವಾಪಸ್‌ ಪಡೆಯಲಾಗಿದೆ. ಘಟಕ ಸ್ಥಾಪನೆ ಬಗ್ಗೆ ಈಗ ಯಾವುದೇ ಮಾಹಿತಿ ಇಲ್ಲ.
– ಡಾ| ಶರಣಪ್ರಕಾಶ ಪಾಟೀಲ್‌, ಮಾಜಿ ಸಚಿವ

ಈಗಾಗಲೇ ಶೇ.90ರಷ್ಟು ಭೂಮಿ ಕಂಪನಿ ಒಡೆತನದಲ್ಲಿದೆ. ಸರ್ಕಾರದ ಮಟ್ಟದಲ್ಲಿ ಒಪ್ಪಂದ ಆದ ನಂತರ ರೈತರೊಂದಿಗೆ ಅಹವಾಲು ಸಭೆ ನಡೆಸಲು ಮುಂದಾಗಲಾಗುವುದು.
– ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕ

– ರಂಗಪ್ಪ ಗಧಾರ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.