ದೇಶದ ಮೊದಲ ಸೀ ಪ್ಲೇನ್ ಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷ, ಪ್ರಯಾಣ ದರ ಎಷ್ಟು?
ಮೋದಿ ಅವರು ಪ್ರಯಾಣ ಬೆಳೆಸಿದ್ದು 40 ನಿಮಿಷದಲ್ಲಿ ಏಕತಾ ಪ್ರತಿಮೆ ಸ್ಥಳದಲ್ಲಿ ಬಂದಿಳಿದಿತ್ತು.
Team Udayavani, Oct 31, 2020, 3:39 PM IST
ಅಹಮದಾಬಾದ್:ಗುಜರಾತಿನ ಸಾಬರಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ತಲುಪುವ ದೇಶದ ಮೊದಲ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಅಕ್ಟೋಬರ್ 31, 2020) ಚಾಲನೆ ನೀಡಿದ್ದಾರೆ.
ಕೇವಾಡಿಯಾದ ಸರ್ದಾರ್ ಸರೋವರ ಡ್ಯಾಮ್ ಸಮೀಪದಿಂದ ಎರಡು ಇಂಜಿನ್ ಗಳ ಸೀ ಪ್ಲೇನ್ ಸೇವೆಯನ್ನು ಉದ್ಘಾಟಿಸಿದರು. ವಿಧ್ಯುಕ್ತವಾಗಿ ಆರಂಭಗೊಂಡ ಮೊದಲ ಸೀ ಪ್ಲೇನ್ ಸಾಬರಮತಿ ನದಿ ತೀರದಿಂದ ಹೊರಟು ಕೇವಾಡಿಯಾದ ಏಕತಾ ಮೂರ್ತಿ ಇರುವ ಸ್ಥಳದಲ್ಲಿ ಲ್ಯಾಂಡ್ ಆಗಿರುವುದಾಗಿ ವರದಿ ತಿಳಿಸಿದೆ.
19 ಸೀಟುಗಳನ್ನು ಹೊಂದಿರುವ ಈ ಸೀ ಪ್ಲೇನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣ ಬೆಳೆಸಿದ್ದು 40 ನಿಮಿಷದಲ್ಲಿ ಏಕತಾ ಪ್ರತಿಮೆ ಸ್ಥಳದಲ್ಲಿ ಬಂದಿಳಿದಿತ್ತು. ಅಹಮದಾಬಾದ್ ನ ಸಾಬರಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಮೂರ್ತಿ ಇರುವ ಕೇವಾಡಿಯಾಕ್ಕೆ 200 ಕಿಲೋ ಮೀಟರ್ ದೂರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 40 ಕಿ.ಮೀ ಪ್ರಯಾಣಿಸಿದ ಎಂಟರ ಬಾಲಕ
ಏನಿದು ಸೀ ಪ್ಲೇನ್?
ಸೀ ಪ್ಲೇನ್ ಸೇವೆ ದೇಶದಲ್ಲಿಯೇ ಪ್ರಥಮವಾಗಿದ್ದು, ಇದು 19 ಆಸನಗಳನ್ನು ಹೊಂದಿದೆ. ಸೀ ಪ್ಲೇನ್ ನೀರು ಮತ್ತು ನೆಲದ ಮೇಲಿಂದ ಹಾರಾಟ ನಡೆಸಬಲ್ಲದು. ಎರಡು ಮಾದರಿಯ ಸೀ ಪ್ಲೇನ್ ಹಾರಾಟ ನಡೆಸಲಿದ್ದು, ಒಂದರಲ್ಲಿ 19 ಆಸನ, ಮತ್ತೊಂದರಲ್ಲಿ 12 ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದೆ.
ಸೀ ಪ್ಲೇನ್ ಪ್ರಯಾಣ ದರ ಎಷ್ಟು?
200 ಕಿಲೋ ಮೀಟರ್ ಸೀ ಪ್ಲೇನ್ ನಲ್ಲಿ ಒಬ್ಬರು ಪ್ರಯಾಣಿಸಬೇಕಾದರೆ 4,800 ರೂಪಾಯಿ ಟಿಕೆಟ್ ದರ ಇದೆ. ಇದು ಒಂದು ಬಾರಿಯ ಪ್ರಯಾಣಕ್ಕೆ ತಗಲುವ ದರವಾಗಿದೆ. ಅಕ್ಟೋಬರ್ 30ರಿಂದ ಸೀ ಪ್ಲೇನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಸೀ ಪ್ಲೇನ್ ಅಹಮದಾಬಾದ್ ನ ಸಾಬರಮತಿ ನದಿ ತೀರದಿಂದ 10.15ಕ್ಕೆ ಹೊರಡಲಿದ್ದು, ಕೇವಾಡಿಯಾದ ಏಕತಾ ಪ್ರತಿಮೆ ಬಳಿ 10.45ಕ್ಕೆ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ