ಬಪ್ಪೂರು ರಸ್ತೆ ಕಾಮಗಾರಿಗೆ ಒತ್ತುವರಿ ಸಮಸ್ಯೆ!

| ಕಾಮಗಾರಿಗೆ 4.50 ಕೋಟಿ ರೂ.ವೆಚ್ಚ ನಿಗದಿ | ಮಳೆ ನಿಂತರೂ ಪುನಾರಂಭಗೊಳ್ಳದ ಕಾಮಗಾರಿ

Team Udayavani, Nov 3, 2020, 6:44 PM IST

rc-tdy-1

ಸಿಂಧನೂರು: ನಗರದ ಮೂಲಕ ಹಾದು ಹೋಗುವ ಜಿಲ್ಲಾಮುಖ್ಯರಸ್ತೆಯ ಸುಧಾರಣೆ ಕೆಲಸಕ್ಕೆ ರಸ್ತೆ ಬಲಭಾಗದಲ್ಲಿನ ಒತ್ತುವರಿ ಸಮಸ್ಯೆ ಕಂಟಕವಾಗಿದ್ದು, ತೆರವು ಕಾರ್ಯಾಚರಣೆಯ ಹೊಣೆ ಈಗ ಕಿತ್ತಾಟಕ್ಕೆ ಕಾರಣವಾಗಿದೆ.

ಜಿಲ್ಲಾ ಮುಖ್ಯರಸ್ತೆಯಾದರೂ ಅದರ ವ್ಯಾಪ್ತಿ ಎರಡು ಇಲಾಖೆಗಳಿಗೆ ಸೇರಿರುವುದರಿಂದ ಕಾಮಗಾರಿಗೆ ತೊಡಕು ಎದುರಾಗಿದೆ. ಭರದಿಂದ ಆರಂಭಿಸಲಾದ ಕೆಲಸವನ್ನು ದಿಢೀರ್‌ ಕೈ ಬಿಡಲಾಗಿದೆ. ಕೆಲಸ ಕೈ ಬಿಡುವುದಕ್ಕೆ ಮಳೆ ಕಾರಣವೆಂದು ಪಿಡಬ್ಲ್ಯುಡಿ ಇಲಾಖೆಯ ಮೂಲಗಳು ತಿಳಿಸಿದರೆ, ಅದರ ವಾಸ್ತವ ಚಿತ್ರಣವೇ ಬೇರೆಯೆಂಬ ಸಂಗತಿ ಚರ್ಚೆಗೆ ಕಾರಣವಾಗಿದೆ.

ರಸ್ತೆಗೆ ಒತ್ತುವರಿ ಮುಳುವು: ಸಿಂಧನೂರು- ಬಪ್ಪೂರು ಮಾರ್ಗದ ಮುಖ್ಯರಸ್ತೆ 21 ಕಿಮೀನಷ್ಟಿದೆ. ಇದರಲ್ಲಿ ನಗರ ವ್ಯಾಪ್ತಿಯಿಂದ ಬಪ್ಪೂರು ಮಾರ್ಗದ ಆರಂಭಿಕ 1 ಕಿಮೀ ರಸ್ತೆ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿದೆ. ಬಾಬು ಜಗಜೀವನರಾಂ ವೃತ್ತದಿಂದ ನಗರ ವ್ಯಾಪ್ತಿಯಲ್ಲಿ ಈ ರಸ್ತೆ ಆರಂಭವಾಗುತ್ತಿದ್ದು, ಇದರ ಬಲಭಾಗದ ಉದ್ದಕ್ಕೂ ಕಟ್ಟಡಗಳಿವೆ. ಈ ಪೈಕಿ ಕೆಲವು ಕಡೆಗಳಲ್ಲಿರಸ್ತೆ ಒತ್ತುವರಿಯಾಗಿದೆ. ನಗರ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಅನಧಿಕೃತ ಒತ್ತುವರಿ ಇರುವುದರಿಂದ ತೆರವು ಮಾಡಿಕೊಡುವಂತೆ ನಗರಸಭೆಯ ಬೆನ್ನು ಬೀಳಲಾಗಿದೆ. ಒತ್ತುವರಿ ಗುರುತಿಸುವಿಕೆ ಹೊರತುಪಡಿಸಿದರೆ, ಮುಂದಿನ ಪ್ರಕ್ರಿಯೆ ನಡೆದಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರಸಭೆಗೆ ಏ.24, 2020ರಂದು ಬರೆದ ಪತ್ರಕ್ಕೆ ಇದುವರೆಗೂ ಮೋಕ್ಷ ದೊರಕಿಲ್ಲ.

ಪ್ರಭಾವದ ಶಂಕೆ: ಕುರುಕುಂದಾ, ತಿಡಿಗೋಳ, ನಿಡಿಗೋಳ, ಚಿರತನಾಳ, ಬೊಮ್ಮನಾಳ ಸೇರಿದಂತೆ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸಂಚಾರ ಕಷ್ಟವಾಗಿದ್ದು, ಜನ ನಿತ್ಯ ಯಾತನೆ ಅನುಭವಿಸುವಂತಾಗಿದೆ. ಲೋಕೋಪಯೋಗಿ ಇಲಾಖೆ 4.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಮುಂದಾಗಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು. ರಸ್ತೆಯ  ಎಡಭಾಗದಲ್ಲಿನ ಗೂಡಂಗಡಿ ಒತ್ತುವರಿಯನ್ನು ಸುಲಭವಾಗಿ ತೆರವುಗೊಳಿಸಲಾಗಿದೆ. ಜತೆಗೆ, ಕೆಲವು ಕಡೆ ಚರಂಡಿ ನಿರ್ಮಾಣ ಕೆಲಸ ಆರಂಭಿಸಲಾಗಿದೆ. ಆದರೆ, ರಸ್ತೆ ಬಲಭಾಗದಲ್ಲಿ ಮಾತ್ರ ಸಮಸ್ಯೆ ಕಾಣಿಸಿದೆ. ನಗರದ ಮುಖ್ಯರಸ್ತೆಗೆ ಹೊಂದಿಕೊಂಡೇ ಬಲಕ್ಕೆ ಕಟ್ಟಡಗಳು ಆರಂಭವಾಗಿರುವುದರಿಂದ ಕಾರ್ಯಾಚರಣೆಗೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆಂಬ ದೂರು ಕೇಳಿಬಂದಿವೆ. ಸಣ್ಣಪುಟ್ಟ ಡಬ್ಟಾಗಳನ್ನು ದಿಢೀರ್‌ ಎತ್ತಂಗಡಿ ಮಾಡಿಸುವ ಅಧಿಕಾರಿಗಳು ಬೃಹತ್‌ ಕಟ್ಟಡಗಳ ವಿಷಯದಲ್ಲಿ ಮೌನ ತಾಳಿದ್ದು ಯಾಕೆ? ಎಂಬ ಪ್ರಶ್ನೆ ಕೇಳಿಬಂದಿವೆ.

ಆರಂಭದಲ್ಲೇ ಕಳಪೆ ದೂರು: ಕೆಲಸ ಕೈಗೆತ್ತಿಕೊಂಡ ಗುತ್ತಿಗೆದಾರರು 200 ಮೀಟರ್‌ನಷ್ಟು ಚರಂಡಿ ನಿರ್ಮಿಸಿದ್ದಾರೆ. ಅಲ್ಲಲ್ಲಿ ವಿಸ್ತರಣೆ ಕೆಲಸವಾಗಿದೆ. ಕಿಮೀ 0.6ರಲ್ಲಿ ಮರಂ ಸಹ ಹಾಕಲಾಗಿದೆ. ಈ ಹಂತದಲ್ಲೇ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲವೆಂಬ ದೂರು ಸಲ್ಲಿಕೆಯಾಗಿವೆ. ಕೋಟ್ಯಂತರ ರೂ. ವೆಚ್ಚದ ಕೆಲಸವನ್ನು ಬೇಕಾಬಿಟ್ಟಿಯಾಗಿ ಕೈಗೊಂಡರೆ ಹೇಗೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ.

ಈ ನಡುವೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟು ಅಧಿಕಾರಿಗಳು ತಟಸ್ಥ ಧೋರಣೆ ತಳೆದಿದ್ದಾರೆ. ರಸ್ತೆಯ ಬಲಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾದು ಹೋಗಿದ್ದು, ಇದನ್ನು ಕೂಡ ತೆರವು ಮಾಡಬೇಕಿದೆ. ಭಾರಿ ನಿರೀಕ್ಷೆಯೊಂದಿಗೆ ಕೈಗೆತ್ತಿಕೊಳ್ಳಲಾದ ರಸ್ತೆ ಕೆಲಸಕ್ಕೆ ಆರಂಭದಲ್ಲಿಯೇ ಹಲವು ವಿಘ್ನ ಸುತ್ತಿಕೊಂಡಿದ್ದು, ಬಪ್ಪೂರು ಮಾರ್ಗದ ಹಳ್ಳಿಯ ನಿವಾಸಿಗಳು ತಗ್ಗುದಿನ್ನೆ ರಸ್ತೆಯಲ್ಲಿ ಹೊಯ್ದಾಡುತ್ತಲೇ ನಗರಕ್ಕೆ ಬರುವಂತಾಗಿದೆ.

ಕೆಲವು ಶೆಡ್‌, ಒಂದು ಕಟ್ಟಡ ಮಾತ್ರ ಒತ್ತುವರಿಯಾಗಿದೆ. ಮಾರ್ಕ್‌ ಹಾಕಿ ಕೊಟ್ಟಿದ್ದು, ಸಿಟಿ ವ್ಯಾಪ್ತಿ ಇರುವುದರಿಂದ ತೆರವುಗೊಳಿಸುವ ಅ ಧಿಕಾರ ನಗರಸಭೆಯವರಿಗೆ ಇದೆ. ಮತ್ತೂಮ್ಮೆ ಗಮನಕ್ಕೆ ತರಲಾಗುವುದು. ಮಳೆಯ ಕಾರಣಕ್ಕಷ್ಟೇ ನಿಲ್ಲಿಸಿದ್ದು, ವಾರದಲ್ಲೇ ಕಾಮಗಾರಿ ಆರಂಭಿಸಲಾಗುವುದು. – ಸಿ.ಎಸ್‌.ಪಾಟೀಲ್‌, ಎಇಇ, ಲೋಕೋಪಯೋಗಿ ಇಲಾಖೆ.

 

-ಯಮನಪ್ಪ ಪವಾರ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.