ಉಡುಪಿ ಜಿಲ್ಲೆಯಲ್ಲಿ ಭೂಮಿ ಸರ್ವೇಗೆ ಗ್ರಹಣ

ಅರ್ಜಿಗಳು ವಿಲೇವಾರಿಗೆ ಬಾಕಿ; ಸರ್ವೇದಾರರಿಗೆ ಹೆಚ್ಚಿದ ಒತ್ತಡ

Team Udayavani, Nov 8, 2020, 1:27 PM IST

ಉಡುಪಿ ಜಿಲ್ಲೆಯಲ್ಲಿ ಭೂಮಿ ಸರ್ವೇಗೆ ಗ್ರಹಣ

ಸಾಂದರ್ಭಿಕ ಚಿತ್ರ

ಉಡುಪಿ, ನ. 7: ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಳೆದೆರಡು ತಿಂಗಳಿನಿಂದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಭೂ ಸರ್ವೇ ಕೆಲಸ ಮಂದಗತಿಯಲ್ಲಿ ಸಾಗುತ್ತಿದ್ದು, ಸಾವಿರಾರು ಅರ್ಜಿಗಳು ಸರ್ವೇ ನಡೆಸಲು ಬಾಕಿ ಉಳಿದಿವೆ.

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಭೂಮಿ ಸರ್ವೇ ಕಾರ್ಯ ಆಮೆ ನಡಿಗೆ ಯಲ್ಲಿದೆ. ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸು ತ್ತಿರುವ ಮಾಲಕರಿಗೆ ಮತ್ತೂಂದು ಕಂಟಕ ಎದುರಾಗಿದೆ. ಕೋವಿಡ್‌-19 ಬಳಿಕ ಭೂಮಿ ಮಾರಾಟ, ವಿಭಾಗ ಪತ್ರ ಸೇರಿದಂತೆ ವಿವಿಧ ಕೆಲಸಗಳಿಗೆ ಬೇಕಾಗಿರುವ ಮುಖ್ಯ ಸರ್ವೇ ಕೆಲಸಕ್ಕೆ ಗ್ರಹಣ ಹಿಡಿದಿದೆ.

ಉಡುಪಿ ಜಿಲ್ಲೆಯಲ್ಲಿ ಈ ವರೆಗೆ ಕುಂದಾಪುರ 3,460, ಉಡುಪಿ 1,757, ಕಾರ್ಕಳ 1,600, ಬ್ರಹ್ಮಾವರ 2,082, ಕಾಪು 1,525 , ಹೆಬ್ರಿ 654, ಬೈಂದೂರು 2,389 ಅರ್ಜಿಗಳು ಸರ್ವೇಗೆ ಬಾಕಿ ಇವೆ. ಅಕ್ಟೋಬರ್‌ ತಿಂಗಳಿನಲ್ಲಿ 3,660 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 2,865 ಅರ್ಜಿಗಳ ಸರ್ವೇ ಕಾರ್ಯ ರ್ಪೂಗೊಂಡಿವೆ.

ಬಾಕಿ ಯಾಕೆ? : ಜಿಲ್ಲೆಯಲ್ಲಿ ಸರಕಾರದ 25, ಖಾಸಗಿ 49 ಸರ್ವೇದಾರರಿದ್ದಾರೆ. ಪ್ರಸ್ತುತ ಡಿಜಿಟಲ್‌ ಆಕಾರ್‌ ಬಂದ್‌ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಸಿಬಂದಿ ಸರ್ವೇ ಜತೆ ಜತೆಗೆ ಆಕಾರ್‌ ಬಂದ್‌ ಡಿಜಿಟಲೀಕರಣ ಕೆಲಸ ವನ್ನು ಮಾಡುತ್ತಿರುವುದರಿಂದ ತಿಂಗಳ ಅರ್ಜಿಗಳು ಬಾಕಿಯಾಗುತ್ತಿದೆ ಎಂದು ಸಿಬಂದಿ ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿ ಏರಿಕೆ :  ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಬಳಿಕ ಸರ್ವೇಗೆ ಅರ್ಜಿ ಹಾಕು ವವರ ಸಂಖ್ಯೆ ಶೇ. 80ರಷ್ಟು ಏರಿಕೆಯಾಗಿದೆ.ಬೇರೆ ಬೇರೆ ಕಡೆಗಳಿಂದ ಜಿಲ್ಲೆಗೆ ಆಗಮಿಸುವವರಲ್ಲಿ ಕೆಲವರು ಜಾಗದ ಮಾರಾಟ ಸೇರಿದಂತೆ ಇತರ ಕೆಲಸಗಳಿಗೆ ಅರ್ಜಿಯನ್ನು ಹಾಕುತ್ತಿದ್ದಾರೆ. ಇದರಿಂದ ಇವುಗಳ ಸಂಖ್ಯೆ ಏಕಾಏಕಿಯಾಗಿ ಏರಿಕೆಯಾಗಿದೆ. ಸಾಮಾನ್ಯವಾಗಿ ನವೆಂಬರ್‌ ಬಳಿಕ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುತ್ತದೆ.

ಹೊಸ ತಾಲೂಕುಗಳಿಗೆ ಸಮಸ್ಯೆ :  ಜಿಲ್ಲೆಯ ಹೊಸ ತಾಲೂಕು ಸೇರಿದಂತೆ ಇತರ ತಾಲೂಕುಗಳಿಗೆ ಹೊಸದಾಗಿ ಸರ್ವೇ ದಾರರ ನೇಮಕವಾಗಿಲ್ಲ. ಇತರ ತಾಲೂಕಿನ ವರನ್ನು ಹೊಸ ತಾಲೂಕಿಗೆ ನಿಯುಕ್ತಿ ಗೊಳಿಸಲಾಗಿದೆ. ಅರ್ಜಿಗಳನ್ನು ವಿಲೇವಾರಿ ಮಾಡಲು ಇದೀಗ ತಿಂಗಳು ಹಿಡಿಯ್ತುವೆ.

ಹೆಚ್ಚಿದ ಒತ್ತಡ :  ತಿಂಗಳಿಗೆ ಸರಕಾರಿ ನಿಯಮಾನುಸಾರ ಒಬ್ಬ ಸರಕಾರಿ ಸರ್ವೇದಾರರ ಸರಾಸರಿ 23 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಆದರೆ ಪ್ರಸ್ತುತ ಕೆಲಸದ ಒತ್ತಡದಿಂದ ತಿಂಗಳಿಗೆ ಸರಕಾರಿ ಸರ್ವೇದಾರರು 35ರ ವರೆಗೆ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ವರ್ಗಾವಣೆಗೆ ಉತ್ಸಾಹ :  ರಾಜ್ಯದಲ್ಲಿ ಸರ್ವೇದಾರರ ಕೊರತೆ ಇದೆ. ಕಳೆದ ವರ್ಷ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಇಲಾಖೆಯಿಂದ ಆಹ್ವಾನಿಸಲಾಗಿತ್ತು. ಪರೀಕ್ಷೆ ದಿನ ನಿಗದಿ ಯಾಗಿತ್ತು. ಆದರೆ ಕೋವಿಡ್‌ನಿಂದಾಗಿ ಪರೀಕ್ಷೆ ರದ್ದಾಗಿದೆ. ಜಿಲ್ಲೆಯಲ್ಲಿ ಸರ್ವೇದಾರ ರಾಗಿ ಆಯ್ಕೆಯಾಗುವ ಇತರ ಜಿಲ್ಲೆಯವರು ವರ್ಷವಾಗುವುದರೊಳಗಾಗಿ ವರ್ಗಾವಣೆ ಯಾಗುತ್ತಿರುವುದರಿಂದ ಸರ್ವೇದಾರರ ಸಂಖ್ಯೆ ಕಡಿಮೆ ಇದೆ.

ಅರ್ಜಿಗಳ ಸಂಖ್ಯೆ ಹೆಚ್ಚಳ : ಜಿಲ್ಲೆಯಲ್ಲಿ ಪ್ರಸ್ತುತ ಭೂಮಿಸರ್ವೇಗೆ ಅರ್ಜಿಗಳಸಂಖ್ಯೆ ಇದೀಗ ಹೆಚ್ಚಿದೆ.ಇನ್ನೂ ಹೊಸದಾಗಿ ಘೋಷಣೆಯಾದ ತಾಲೂಕುಗಳಿಗೆ ಬೇರೆ ತಾಲೂಕಿನ ಸರ್ವೇದಾರರನ್ನುನಿಯುಕ್ತಿಗೊಳಿಸಲಾಗಿದೆ. -ರವೀಂದ್ರ, ಭೂ ದಾಖಲೆ ಉಪ ನಿರ್ದೇಶಕ ಉಡುಪಿ

 

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.