ಮಹಾನ್‌ ತಪಸ್ವಿಯಾಗಿದ್ದ ಡಾ| ರಾಮರಾವ್‌

ಘಮಸುಬಾಯಿ ತಾಂಡಾದಲ್ಲಿ ಅಸ್ಥಿಪೂಜೆ ದರ್ಶನ

Team Udayavani, Nov 12, 2020, 3:26 PM IST

ಮಹಾನ್‌ ತಪಸ್ವಿಯಾಗಿದ್ದ ಡಾ| ರಾಮರಾವ್‌

ಔರಾದ: ಬಂಜಾರಾ ಸಮಾಜದ ಧರ್ಮಗುರು,ಮಹಾತಪಸ್ವಿ ಡಾ| ರಾಮರಾವ್‌ ಮಹಾರಾಜ್‌ ಪೌರಾದೇವಿರವರ ಅಸ್ಥಿ ಪೂಜೆ ದರ್ಶನ, ಮಂದಿರದ ಶಂಕುಸ್ಥಾಪನೆ, ಗೋಮಾತಾ ಪೂಜೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಬುಧವಾರ ಔರಾದ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿ ನಡೆದವು.

ಸಚಿವ ಪ್ರಭು ಚವ್ಹಾಣ ಮಾತನಾಡಿ, ರಾಮರಾವ್‌ ಮಹಾರಾಜರು ಸಂತ ಸೇವಾಲಾಲ್‌ ಮಹಾರಾಜರ ನಂತರದ ಬಂಜಾರಾ ಸಮುದಾಯದ ಏಕೈಕಧರ್ಮಗುರುವಾಗಿದ್ದರು. 10ನೇ ವಯಸ್ಸಿಗೆ ಸನ್ಯಾಸ  ದೀಕ್ಷೆ ಸ್ವೀಕರಿಸಿದ ಶ್ರೀಗಳು ಅಂತಿಮ ದಿನದವರೆಗೂನಿರಾಹಾರಿ ಮತ್ತು ಮಹಾನ್‌ ತಪಸ್ವಿಯಾಗಿದ್ದರು. ನಾನು ಅವರ ಪರಮ ಭಕ್ತ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದಲೇ ರಾಜಕೀಯದಲ್ಲನನಗೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಮಹಾರಾಷ್ಟ್ರದ ಶಾಸಕ ತುಶಾರ್‌ ರಾಠೊಡ ಮಾತನಾಡಿ, ಬಂಜಾರಾ ಭಾಷೆಗೆ ಈಗಲೂ ಲಿಪಿಯಿಲ್ಲ.ಮಾತಿನ ಮೂಲಕವೇ ಸಂದೇಶ ನೀಡುತ್ತಿದ್ದರು. ಅವರ ಸಂದೇಶ ಮತ್ತು ಆಶೀರ್ವಾದದಿಂದ ಸಮುದಾಯದಜನರು ಪ್ರಗತಿ ಹೊಂದುವಂತಾಗಿದೆ ಎಂದರು.

ಮಹಾರಾಷ್ಟ್ರದ ಎಂಎಲ್‌ಸಿ ಹರಿಭವ್‌ ರಾಠೊಡ್‌ಮಾತನಾಡಿ, ಬಾಲಬ್ರಹ್ಮಚಾರಿ ಆಗಿದ್ದ ಮಹಾರಾಜರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. ಮುಖ್ಯವಾಗಿ ತಾಂಡಾಗಳಿಗೆ ಭೇಟಿ ನೀಡಿ, ಜನರನ್ನು ಸರಿದಾರಿಗೆ ತಂದರು. ಅವರ ಸದಾಶಯ ಮುಂದುವರಿಸಲು ಸಚಿವ ಚವ್ಹಾಣ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಮುಖಂಡ ಬಾಪುರಾವ್‌ ರಾಠೊಡಮಾತನಾಡಿದರು. ಮಾಜಿ ಶಾಸಕ ಸುಭಾಶಕಲ್ಲೂರ ಮಾತನಾಡಿ, ಮಹಾರಾಜರಿಗೆ ಬಂಜಾರ ಸಮುದಾಯವಷ್ಟೇ ಅಲ್ಲ ಇಡೀ ಮಾನವ ಕುಲವೇ ಅವರ ಭಕ್ತರಾಗಿದ್ದರು ಎಂದರು.

ಈ ವೇಳೆ ಬಾಬು ಹೊನ್ನಾನಾಯಕ್‌, ರಾಮಶೆಟ್ಟಿ ಪನ್ನಾಳೆ, ಕಾಶಿನಾಥ ಜಾಧವ್‌, ಗಿರೀಶ ಒಡೆಯರ್‌, ಮಾರುತಿ ಚವ್ಹಾಣ, ಮಾಣಿಕ ಚವ್ಹಾಣ, ಸುರೇಶ ಭೋಸ್ಲೆ, ಯಶೋಧಾ ರಾಠೊಡ್‌, ಬಸವರಾಜಪವಾರ್‌, ರಮೇಶ ದೇವಕತ್ತೆ, ವಸಂತ ಬಿರಾದಾರ, ಸಚಿನ್‌ ರಾಠೊಡ್‌ ಇದ್ದರು.

ಸಸಿ ನೆಡುವ ಕಾರ್ಯಕ್ರಮ :  ಬೆಳಗ್ಗೆ ರಾಮರಾವ್‌ ಮಹಾರಾಜರ ಅಸ್ಥಿಪೂಜೆಮತ್ತು ದರ್ಶನ ಕಾರ್ಯಕ್ರಮ, ಬಳಿಕ ಗೋಮಾತಾ ಪೂಜೆ ನಡೆಯಿತು. ಅಲ್ಲದೇ ರಾಮರಾವ್‌ ಮಹಾರಾಜರ ಸ್ಮರಣಾರ್ಥ ಸಸಿನೆಡುವ ಕಾರ್ಯಕ್ರಮ ನಡೆಯಿತು. ರಾಮರಾವ್‌ಮಹಾರಾಜರ ಮಂದಿರದ ಭೂಮಿ ಪೂಜೆ ನಂತರ ಶ್ರದ್ಧಾಂಜಲಿ ಸಭೆ ನಡೆಯಿತು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.