ಮಾಳನೂರ ಕೆರೆ ನೀರಿನ ಸಂಗ್ರಹಮಟ್ಟ ಪರಿಶೀಲನೆ
Team Udayavani, Nov 14, 2020, 7:08 PM IST
ತಾಳಿಕೋಟೆ: ಪಟ್ಟಣದ ಜನರಿಗೆ ಮೂರು ದಿನಗಳಿಂದ ಕುಡಿಯುವ ನೀರಿನ ತೊಂದರೆಯಾಗಿರುವುದನ್ನು ಗಮನಿಸಿದ ಪುರಸಭೆ ನೂತನ ಅಧ್ಯಕ್ಷ ಸಂಗಮೇಶ ಇಂಗಳಗಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶುಕ್ರವಾರ ನೀರು ಸರಬರಾಜು ಮಾಡುವ ಮಾಳನೂರ ಕೆರೆಗೆ ಭೇಟಿ ನೀಡಿ ಪಂಪ್ಸೆಟ್ ದುರಸ್ತಿ ಕಾರ್ಯವನ್ನು ವಿಕ್ಷೀಸಿದರಲ್ಲದೇ ಕೂಡಲೇಕಾರ್ಯವನ್ನು ಬೇಗನೆ ಮುಗಿಸಿನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ ಎಂದು ಉಪಸ್ಥಿತ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಮೋಟರ್ನಲ್ಲಿ ಸವಕಳಿಯಿಂದಾಗಿ ದುರಸ್ತಿಗೆ ಬಂದಿದೆ. ಮೂರು ದಿನಗಳಿಂದ ಸತತ ಹಗಲು ರಾತ್ರಿಯನ್ನದೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಸಂಜೆಯ ಹೊತ್ತಿಗೆ ಸಂಪೂರ್ಣದುರಸ್ತಿ ಮುಗಿಯಲಿದೆ. ಶನಿವಾರಪಟ್ಟಣದ ಜನರಿಗೆ ಎಂದಿನಂತೆ ನೀರು ಪೂರೈಕೆಯಾಗಲಿದೆ ಎಂದು ನೀರು ಸರಬರಾಜು ಮೇಲ್ವಿಚಾರಕ ಶಂಕರಗೌಡ ಬಿರಾದಾರ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಮಾತನಾಡಿ, ಕೇರ್ ಸಿಟಿ ಮತ್ತು ಕುಡಿಯುವ ನೀರಿನಯೋಜನೆ ವತಿಯಿಂದ 20 ಲಕ್ಷ ರೂ. ತೆಗೆದಿಡಲಾಗಿದೆ. ಕೆಲ ಪಂಪ್ಸೆಟ್ಗಳು ಹಳೆಯದಾಗಿರುವದನ್ನು ಪದೇ-ಪದೇದುರಸ್ತಿಗೆ ಬರುತ್ತಿವೆ. ಅವುಗಳನ್ನು ಬದಲಿಸುವುದು ಅಗತ್ಯವಿದೆ. ಅವುಗಳನ್ನು ಖರೀದಿಸಿ ಬದಲಿಸಿದರೆತೊಂದರೆ ತಪ್ಪಲಿದೆ. ಅದಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮುತ್ತಪ್ಪಣ್ಣ ಚಮಲಾಪುರ, ಜೈಸಿಂಗ್ ಮೂಲಿಮನಿ, ಮುದಕಣ್ಣಬಡಿಗೇರ, ಮೈಹಿಬೂಬ ಲಾಹೋರಿ, ಉಮರಶ್ಯಾ ಮಕಾಂದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ