ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಲು ಸೂಚನೆ
Team Udayavani, Nov 18, 2020, 5:08 PM IST
ಆಳಂದ: ಕೇಂದ್ರೀಯ ವಿದ್ಯಾಲಯ ಬಳಿಬಸ್ ನಿಲ್ದಾಣ ಸ್ಥಾಪಿಸಲು ಶೀಘ್ರವೇ ಸ್ಥಳ ಒದಗಿಸುವಂತೆ ತಹಶೀಲ್ದಾರ್ಗೆ ಕೇಳಿಕೊಳ್ಳಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕೋವಿಡ್-19 ಹರಡಿದ ಹಿನ್ನೆಲೆಯಲ್ಲಿ ಹಾಗೂ ತಮ್ಮಅನಾರೋಗ್ಯದ ನಿಮಿತ್ತ ಅನೇಕ ಕೆಲಸಗಳನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ. ಇನ್ಮುಂದೆ ಪ್ರಸ್ತಾಪಿತ ಕಾರ್ಯಗಳಿಗೆ ಮರುಜೀವ ನೀಡಲು ಮುಂದಾಗಿದ್ದೇನೆ ಎಂದರು.
ಬಹುದಿನಗಳ ಬೇಡಿಕೆಯಾದ ಹೊಸ್ ಚೆಕ್ಪೋಸ್ಟ್ನಿಂದ ಎಚ್ಕೆಇ ಪದವಿ ಕಾಲೇಜು ಮಾರ್ಗದ ತಡಕಲ್ ರಸ್ತೆ ವರೆಗೆ ವರ್ತುಲ (ಬೈಪಾಸ್) ರಸ್ತೆ ನಿರ್ಮಾಣಕ್ಕೆ ಎರಡು ಕೋಟಿ ರೂ. ಇಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ ಎಂದು ಹೇಳಿದರು.
ಉಮರಗಾ ರಸ್ತೆಯ ತೆಲಾಕುಣಿ ಮಾರ್ಗದಲ್ಲಿ ಈ ಹಿಂದೆ ಮಿನಿ ವಿಧಾನಸೌಧಕ್ಕೆ ನೀಡಿದ ಜಾಗದಲ್ಲಿ ಬಸ್ ನಿಲ್ದಾಣ ಸ್ಥಾಪಿಸಬೇಕು ಎನ್ನುವಉದ್ದೇಶವಿತ್ತು. ಆದರೆ ಆ ಸ್ಥಳವನ್ನು ಮಾಲೀಕರು ವಾಪಸ್ ಪಡೆದಿದ್ದಾರೆ. ಚೆಕ್ ಪೋಸ್ಟ್ ಹತ್ತಿರ ಸಂತೋಷ ಗುತ್ತೇದಾರ ಎನ್ನುವರು ಎರಡು ಎಕರೆ ನಿವೇಶನ ನೀಡಲು ಮುಂದೆ ಬಂದಿದ್ದಾರೆ. ಇದು ಪಟ್ಟಣದಿಂದದೂರವಾಗುತ್ತದೆ. ಅಲ್ಲದೇ ಬಸ್ ನಿಲ್ದಾಣಕ್ಕೆ ಕನಿಷ್ಠ 10 ಎಕರೆ ನಿವೇಶನ ಅಗತ್ಯವಿದೆ. ಈಗಿರುವ ಬಸ್ ನಿಲ್ದಾಣ ಹತ್ತಿರ, ಎಪಿಎಂಸಿ ನಿವೇಶನದಲ್ಲೇ ನಿಲ್ದಾಣ ಸ್ಥಾಪಿಸಬೇಕು ಎಂದರೆ ಸದ್ಯ ನಿವೇಶನ ಕೋರ್ಟ್ನಲ್ಲಿ ವ್ಯಾಜ್ಯವಿದೆ. ಹೀಗಾಗಿ ಸೂಕ್ತ ಸ್ಥಳ ದೊರೆತರೆ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರೀಯ ವಿದ್ಯಾಲಯಕ್ಕೆ ಚಿತಲಿ ಪಾಟಿಯ ಹತ್ತಿರ ಅಥವಾ ಕಲಬುರಗಿ ಮಾರ್ಗದ ಡೋಗಾಳ ಹತ್ತಿರದ ನಿವೇಶನದಲ್ಲಿ ಬಸ್ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ. ಎರಡರಲ್ಲಿ ಒಂದು ಸ್ಥಳ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಅತಿಯಾದ ಮಳೆಯಿಂದ ತಾಲೂಕಿನ 190 ಮನೆಗಳಿಗೆ ಹಾನಿಯಾಗಿದೆ. ಈ ಪ್ರಯುಕ್ತ 12.90ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಬೆಳೆ ಹಾನಿ ಡಾಟಾಎಂಟ್ರಿ ಕಾರ್ಯ ಪ್ರಗತಿಯಲಿದೆ. ಈಗಾಗಲೇ 42 ಸಾವಿರ ರೈತರ ಹಾನಿಯನ್ನು ದಾಖಲಿಸಲಾಗಿದೆ. ಇನ್ನಷ್ಟು ಬಾಕಿ ನೋಂದಣಿ ಮುಗಿದ ಮೇಲೆ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಬರಲಿದೆ ಎಂದರು.
ಪುರಸಭೆ ಅಧ್ಯಕ್ಷೆ ರಾಜೇಶ್ರೀ ಶ್ರೀಶೈಲ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಸದಸ್ಯ ಶ್ರೀಶೈಲ ಪಾಟೀಲ, ಬಿಜೆಪಿ ಅಧ್ಯಕ್ಷ ಆನಂದ ಪಾಟೀಲ, ಶಿವಪುತ್ರಪ್ಪ ಬೆಳ್ಳೆ, ಮಲ್ಲಣ್ಣಾ ನಾಗೂರೆ, ಅಪ್ಪಾಸಾಬ ಗುಂಡೆ, ವಿಜಯಕುಮಾರ ಕೋಥಳಿಕರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ