ಮಾರ್ಗೋಳಿ : ಪಾಳುಬಿದ್ದ ಸಮಾಜ ಮಂದಿರ
ಡಾ| ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಬೇಡಿಕೆ
Team Udayavani, Nov 23, 2020, 2:09 AM IST
ಬಸ್ರೂರು: ಮಾರ್ಗೋಳಿ ಚರ್ಚ್ ಎದುರು ಇರುವ ಸಮಾಜ ಮಂದಿರ ಹಲವು ವರ್ಷಗಳಿಂದ ಮುಚ್ಚಿಯೇ ಇದ್ದು, ಈಗ ಶಿಥಿಲಗೊಂಡು ಪಾಳುಬಿದ್ದಿದೆ.
30 ವರ್ಷಗಳ ಹಿಂದೆ ನಿರ್ಮಾಣ
ಪ.ಜಾತಿ ಮತ್ತು ಹಿಂದುಳಿದ ವರ್ಗದವರ ಅನುಕೂಲಕ್ಕಾಗಿ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಇಲ್ಲಿ ಸಮಾಜ ಮಂದಿರ ನಿರ್ಮಾಣವಾಗಿತ್ತು. ಆದರೆ ಅನಂತರದಲ್ಲಿ ಇದರ ಬಳಕೆ ಹೆಚ್ಚಾಗಿ ಆಗಿಲ್ಲ. ಸದ್ಯ ಕಟ್ಟಡದ ಕಿಟಿಕಿಗಳು ಬಿದ್ದು ಹೋಗಿವೆ. ಬಾಗಿಲು, ಛಾವಣಿ ದುರ್ಬಲಗೊಂಡಿವೆ. ಮಂದಿರದ ಎದುರು ಬಾವಿ ಇದ್ದರೂ ನಿರುಪಯುಕ್ತವಾಗಿದೆ. ಮುಂಭಾಗದಲ್ಲಿ ಹುಲ್ಲು-ಗಿಡಗಂಟಿಗಳು ಬೆಳೆದಿವೆ. ಸಮಾಜ ಮಂದಿರ ಒಂದು ಪಾಳು ಬಿದ್ದ ಕಟ್ಟಡದ ರೀತಿ ಭಾಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜಮಂದಿರವನ್ನು ತೆಗೆದು ಅಂಬೇಡ್ಕರ್ ಭವನ ನಿರ್ಮಿಸ ಬೇಕೆಂಬ ಒತ್ತಾಸೆ ಇದೆ.
ಅಂಬೇಡ್ಕರ್ ಭವನಕ್ಕೆ ಆಗ್ರಹ
ಬಸ್ರೂರು ಸುತ್ತಮುತ್ತಲ ಗ್ರಾಮಗಳಲ್ಲಿ ಅಂಬೇಡ್ಕರ್ ಭವನ, ಸಮುದಾಯ ಭವನಗಳಿದ್ದರೂ ಬಸ್ರೂರಿನಲ್ಲಿ ಯಾವ ಭವನವೂ ನಿರ್ಮಾಣವಾಗಿಲ್ಲ. ಇಲ್ಲಿ 36 ಸೆಂಟ್ಸ್ ಸರಕಾರಿ ಜಾಗವಿದ್ದು, ಈ ಸಮಾಜ ಮಂದಿರದ ದುಃಸ್ಥಿತಿಯನ್ನು ಕಂಡು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗೋವಿಂದ ಮಾರ್ಗೋಳಿ ಅವರು ಈ ಸಮಾಜ ಮಂದಿರವನ್ನು “ಅಂಬೇಡ್ಕರ್ ಭವನ’ವನ್ನಾಗಿ ಮಾಡಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಂದಾಪುರ ಶಾಸಕರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಶೀಘ್ರ ಭವನ ನಿರ್ಮಿಸಿ
ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿ “ಅಂಬೇಡ್ಕರ್ ಭವನ’ ನಿರ್ಮಾಣಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕುಂದಾಪುರ ವಿಧಾನಸಭಾ ಸದಸ್ಯರ ಶಿಫಾರಸು ಪತ್ರವೂ ಬಂದಿರುತ್ತದೆ. ಶೀಘ್ರ ಅಂಬೇಡ್ಕರ್ ಭವನ ನಿರ್ಮಾಣವಾದರೆ ನಮಗೆ ಅನುಕೂಲ.
-ಗೋವಿಂದ ಮಾರ್ಗೋಳಿ, ಸಂಚಾಲಕ, ದ.ಸಂ.ಸ. ಕುಂದಾಪುರ
ಪ್ರಸ್ತಾವನೆ ಸಲ್ಲಿಕೆ
ಬಸ್ರೂರಿನ ಮಾರ್ಗೋಳಿಯಲ್ಲಿರುವ ಸಮಾಜ ಮಂದಿರವನ್ನು ಡಾ| ಬಿ.ಆರ್. ಅಂಬೇಡ್ಕರ್ ಭವನವನ್ನಾಗಿ ನಿರ್ಮಿಸುವ ಬಗ್ಗೆ ಪ್ರಸ್ತಾವವನ್ನು ಈಗಾಗಲೇ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
-ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಬಸ್ರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ