ಎಂಆರ್‌ಪಿಎಲ್‌ಗ‌ೂ ಸರಬರಾಜಾಗಲಿದೆ ಗೇಲ್‌ ಗ್ಯಾಸ್‌

ಮಂಗಳೂರಿಗೆ ಪೈಪ್‌ಲೈನ್‌ನಲ್ಲಿ ಬಂದ ನೈಸರ್ಗಿಕ ಅನಿಲ

Team Udayavani, Nov 23, 2020, 6:12 AM IST

ಎಂಆರ್‌ಪಿಎಲ್‌ಗ‌ೂ ಸರಬರಾಜಾಗಲಿದೆ ಗೇಲ್‌ ಗ್ಯಾಸ್‌

ಮಂಗಳೂರಿನ ಎಂಸಿಎಫ್ ಆವರಣದಲ್ಲಿರುವ ಅನಿಲ ಸ್ವೀಕರಣಾ ಸ್ಥಾವರ.

ಮಂಗಳೂರು: ರಾಜ್ಯವ್ಯಾಪಿ ತೈಲ ಸರಬರಾಜು ಮಾಡುವ ಮಂಗಳೂರಿನ ಎಂಆರ್‌ಪಿಎಲ್‌ಗ‌ೂ ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪೆನಿಯಾದ ಗೇಲ್‌ (ಇಂಡಿಯಾ) ಲಿ. ವತಿಯಿಂದ ನೈಸರ್ಗಿಕ ಅನಿಲ ಸರಬರಾಜಾಗಲಿದೆ. ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಬರುವ ನೈಸರ್ಗಿಕ ಅನಿಲವನ್ನು ಸೋಮವಾರ ದಿಂದ ಎಂಸಿಎಫ್‌ ಸಂಸ್ಥೆಯು ಸ್ವೀಕರಿಸಿದ ಅನಂತರ ಮುಂದಿನ ದಿನಗಳಲ್ಲಿ ಮಂಗಳೂರು- ಉಡುಪಿ ನಗರ ಸೇರಿದಂತೆ ಎಂಆರ್‌ಪಿಎಲ್‌ಗ‌ೂ ಪ್ರತ್ಯೇಕ ಪೈಪ್‌ಲೈನ್‌ಗಳಲ್ಲಿ ಸರಬರಾಜಾಗಲಿದೆ.

 ಎಂಆರ್‌ಪಿಎಲ್‌ಗೆ ಏಕೆ?
ಎಂಆರ್‌ಪಿಎಲ್‌ನಲ್ಲಿ ಪ್ರತಿದಿನ 2,500 ಟನ್‌ ಎಲ್‌ಪಿಜಿ ಉತ್ಪಾದನೆಯಾಗಿ ಅಲ್ಲಿಂದಲೇ ರಾಜ್ಯಾದ್ಯಂತ ಅನಿಲ ಸರಬರಾಜು ಆಗುತ್ತಿದೆ. ಜತೆಗೆ ಅಲ್ಲಿನ ಸ್ಥಾವರದ ಬಳಕೆಗಾಗಿ ಕಚ್ಚಾತೈಲದಿಂದ ಗ್ಯಾಸ್‌ ಉತ್ಪಾದನೆ ಮಾಡಿ “ಫೀಡ್‌’ (ಸ್ಥಾವರದ ಕಚ್ಚಾ ವಸ್ತು) ಮಾಡಲಾಗುತ್ತಿತ್ತು. ಆದರೆ ನೈಸರ್ಗಿಕ ಅನಿಲ ಲಭಿಸಿದ ಬಳಿಕ ಅನಿಲದಿಂದ ನೇರವಾಗಿ ಫೀಡ್‌ ಮಾಡಲು ಸಾಧ್ಯ. ಜತೆಗೆ ಎಂಆರ್‌ಪಿಎಲ್‌ನಲ್ಲಿಯೇ ಎಲ್‌ಎಸ್‌ಎಚ್‌ಎಸ್‌ ಎಣ್ಣೆ ಉಪಯೋಗಿಸಿ ಇಂಧನ ಉತ್ಪಾದಿಸಲಾಗುತ್ತಿತ್ತು. ನೈಸರ್ಗಿಕ ಅನಿಲ ಬಂದ ಮೇಲೆ ಎಣ್ಣೆಯ ಬಳಕೆಯೂ ತಪ್ಪಲಿದೆ. ಹೈಡ್ರೋಜನ್‌ ಘಟಕ ಸೇರಿದಂತೆ ಸ್ಥಾವರದ ಇತರ ನಿರ್ವಹಣೆಯ ಇಂಧನವಾಗಿಯೂ ನೈಸರ್ಗಿಕ ಅನಿಲ ಬಳಕೆಯಾಗಲಿದೆ.

ಲಾಭವೇನು?
“ಉದಯವಾಣಿ’ಯ ಜತೆಗೆ ಮಾತನಾಡಿದ ಎಂಆರ್‌ಪಿಎಲ್‌ನ ಕಾರ್ಪೊರೇಟ್‌ ಕಮ್ಯುನಿಕೇಶನ್‌ನ ಜಿಎಂ ರುಡೋಲ್ಫ್ ನೊರೋನ್ಹಾ ಅವರು, “ಎಂಆರ್‌ಪಿಎಲ್‌ ಸ್ಥಾವರದಲ್ಲಿ ಇಂಧನ ಹಾಗೂ ಫೀಡ್‌ ಬಳಕೆಗಾಗಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಗ್ಯಾಸ್‌ ಬಳಕೆಯಿಂದ ಸಲ#ರ್‌ ಅಂಶ ಗಣನೀಯ ಪ್ರಮಾಣದಲ್ಲಿ ಕಡಿಮೆ ಯಾಗಿ ಪರಿಸರಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿಯೂ ನೈಸರ್ಗಿಕ ಅನಿಲ ಲಾಭದಾಯಕವಾಗಲಿದೆ. ಶೀಘ್ರ ಅನಿಲ ಸರಬರಾಜು ಆಗಲಿದೆ ಎಂದರು.

5750 ಕೋ.ರೂ. ವೆಚ್ಚ
ಕೊಚ್ಚಿ-ಮಂಗಳೂರು ಮಧ್ಯೆ ಒಟ್ಟು 444 ಕಿ.ಮೀ. ಉದ್ದದ ಪೈಪ್‌ಲೈನ್‌ನ ಕೆಲಸವನ್ನು 2,915 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಭೂಸ್ವಾಧೀನದಲ್ಲಿ ಆದ ವಿಳಂಬದಿಂದಾಗಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗಿತ್ತು. ಇದರಿಂದಾಗಿ ಯೋಜನಾ ವೆಚ್ಚವೂ 5,750 ಕೋಟಿ ರೂ.ಗೆ ಏರಿತು.

ಕೊಚ್ಚಿಯಿಂದ 90 ಕಿ.ಮೀ.
ಉತ್ತರಕ್ಕೆ ಕುಟ್ಟನಾಡುವರೆಗೆ 2019ರಲ್ಲೇ ಗ್ಯಾಸ್‌ ಲಭ್ಯವಾಗಿದ್ದರೆ, 354 ಕಿ.ಮೀ. ದೂರದ ಕಣ್ಣೂರು ವರೆಗೆ ಪೈಪ್‌ಲೈನ್‌ ಬಳಕೆಗೆ ಸಿದ್ಧ ಗೊಂಡಿದೆ. ಪ್ರಸ್ತುತ ಕೊಚ್ಚಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು ಅಲ್ಲಿನ ಪ್ರತಿ ದಿನದ ಬೇಡಿಕೆ 3.8 ದಶಲಕ್ಷ ಘನ ಮೀಟರ್‌ ಆಗಿದೆ.

ಮಂಗಳೂರಿನ ಬೇಡಿಕೆ
ಮಂಗಳೂರಿನಲ್ಲಿ 2.5 ದಶಲಕ್ಷ ಘನ ಮೀಟರ್‌ ಅನಿಲ ಬೇಡಿಕೆಯ ನಿರೀಕ್ಷೆಯನ್ನು ಗೇಲ್‌ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.

ಮಂಗಳೂರಿಗೆ ಬಂತು ಗೈಲ್‌ ಗ್ಯಾಸ್‌
ಬಹುನಿರೀಕ್ಷಿತ ನೈಸರ್ಗಿಕ ಅನಿಲ ಮೊದಲ ಬಾರಿಗೆ ರವಿವಾರ ಸಂಜೆಯೇ ಮಂಗಳೂರಿಗೆ ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಸರಬರಾಜಾಗಿದೆ. ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್‌ ಸಂಸ್ಥೆಗೆ ಸೋಮವಾರದಿಂದ ಅನಿಲ ಪೂರೈಕೆ ಅಧಿಕೃತವಾಗಿ ಆರಂಭವಾಗುವ ನಿರೀಕ್ಷೆಯಿದೆ. ವಾರದ ಹಿಂದಷ್ಟೇ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಕ್ಲಿಷ್ಟಕರವಾಗಿದ್ದ ಪೈಪ್‌ ಅಳವಡಿಕೆ ಕಾರ್ಯ ಮುಗಿದಿತ್ತು.

ಟಾಪ್ ನ್ಯೂಸ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.