ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ; ಮಹತ್ವಾಕಾಂಕ್ಷೆಯೇ ಮುಳುವಾಯಿತೇ?


Team Udayavani, Nov 27, 2020, 6:14 AM IST

Bank

ಸಾಂದರ್ಭಿಕ ಚಿತ್ರ

ಕಳೆದ ಮೂರು ವರ್ಷಗಳಿಂದ ಅತೀವ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಾ ಬಂದಿದ್ದ ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ಅನ್ನು, ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಏಕೆ ಈ ಬ್ಯಾಂಕ್‌ ಇಂಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು ಎನ್ನುವ ಮಾಹಿತಿ ಇಲ್ಲಿದೆ…

ಸ್ಥಾಪನೆಯ ಉದ್ದೇಶವೇನಿತ್ತು?
1926ರಲ್ಲಿ ತಮಿಳುನಾಡಿನ ಕರೂರಿನ 7 ಉದ್ಯಮಿಗಳು ಲಕ್ಷ್ಮೀ ವಿಲಾಸ್‌ ವಿತ್ತ ಸಂಸ್ಥೆಯನ್ನು ಸ್ಥಾಪಿಸಿದರು. ಕರೂರ್‌ ಸುತ್ತಮುತ್ತಲಿನ ರೈತರು, ಚಿಕ್ಕಪುಟ್ಟ ವ್ಯಾಪಾರಿಗಳ ಅಗತ್ಯಗಳನ್ನು ಈಡೇರಿಸುವುದೇ ಮೂಲ ಉದ್ದೇಶವಾಗಿತ್ತು. 1958ರಲ್ಲಿ ಈ ಸಂಸ್ಥೆಗೆ ಬ್ಯಾಂಕಿಂಗ್‌ ಲೈಸೆನ್ಸ್‌ ದೊರೆಯಿತು. 2019ರ ವೇಳೆಗೆ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ 19 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 566 ಶಾಖೆಗಳು ಮತ್ತು 918 ಎಟಿಎಂಗಳನ್ನು ಹೊಂದಿತ್ತು.

ಕುಸಿದ ವಿಶ್ವಾಸಾರ್ಹತೆ
ಲಕ್ಷ್ಮೀ ವಿಲಾಸ್‌ಬ್ಯಾಂಕ್‌ ಪಿಸಿಎ ಚೌಕಟ್ಟಿನಡಿ ಬಂದ ಒಂದು ತಿಂಗಳ ನಂತರ, ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ನೊಂದಿಗೆ ಲೀನವಾಗುವುದಕ್ಕೆ ಅನುಮತಿ ಕೋರಿತಾದರೂ ಆರ್‌ಬಿಐ ಅನುಮತಿ ನೀಡಲಿಲ್ಲ. ಮುಂದೆ ತಾನು ಕ್ಲಿಕ್ಸ್‌ ಕ್ಯಾಪಿಟಲ್‌ನೊಂದಿಗೆ ವಿಲೀನದ ಮಾತುಕತೆ ನಡೆಸುತ್ತಿರುವುದಾಗಿ ಘೋಷಿಸಿತು. ಆದರೆ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ಎಷ್ಟೊಂದು ಜಟಿಲತೆಯಲ್ಲಿ ಸಿಲುಕಿದೆ ಎನ್ನುವುದು ಅರಿವಾದದ್ದೇ ಹಿಂದೆ ಸರಿಯಿತು ಕ್ಲಿಕ್ಸ್‌ ಕ್ಯಾಪಿಟಲ್‌.

ಮೊರಟೋರಿಯಂ ಹಾಗೂ ವಿಲೀನ
ಇದೇ ನವೆಂಬರ್‌ 17ರಂದು ಕೇಂದ್ರ ಸರಕಾರ ಆರ್‌ಬಿಐ ಶಿಫಾರಸಿನ ಮೇರೆಗೆ ಲಕ್ಷಿ$¾à ವಿಲಾಸ್‌ಬ್ಯಾಂಕ್‌ ಲಿಮಿಟೆಡ್‌ ಅನ್ನು ಮೊರಟೋರಿಯಂಗೆ ಒಳಪಡಿದೆ. ಇದರನ್ವಯ ಈ ಬ್ಯಾಂಕಿನ ಗ್ರಾಹಕರು ಡಿಸೆಂಬರ್‌ 16ರವರೆಗೆ ಕೇವಲ 25 ಸಾವಿರ ರೂಪಾಯಿ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಹಣದ ಅಗತ್ಯವಿದ್ದವರು, ಆರ್‌ಬಿಐಗೆ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಹಕರ ಠೇವಣಿ ಮೊತ್ತ ಸುರಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿತ್ತು. ಈಗ ಕೇಂದ್ರ ಸಚಿವ ಸಂಪುಟವು ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ಅನ್ನು ಡಿಬಿಎಸ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದು, ಕೇಂದ್ರದ ಈ ನಿರ್ಧಾರದಿಂದ 20 ಲಕ್ಷ ಠೇವಣಿದಾರರು ಮತ್ತು ನಾಲ್ಕು ಸಾವಿರ ಉದ್ಯೋಗಿಗಳಿಗೆ ಭದ್ರತೆ ಸಿಗಲಿದೆ ಎನ್ನಲಾಗಿದೆ.

ಎಡವಿದ್ದೆಲ್ಲಿ?
ಚಿಕ್ಕ ಉದ್ದಿಮೆಗಳ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಾ ಸುಸ್ಥಿತಿಯಲ್ಲೇ ಸಾಗಿದ್ದ ಬ್ಯಾಂಕ್‌ ತನ್ನ ಗಮನವನ್ನು ಬೃಹತ್‌ ಉದ್ದಿಮೆಗಳತ್ತ ಹರಿಸಲು ನಿರ್ಧರಿಸಿದಾಗಲೇ ಸಮಸ್ಯೆ ಆರಂಭವಾಯಿತು. 2016-2017 ರಲ್ಲಿ ಲಕ್ಷ್ಮೀ ವಿಲಾಸ್‌ಬ್ಯಾಂಕ್‌ ರ್ಯಾನ್‌ ಬ್ಯಾಕ್ಸಿ ಮತ್ತು ಫೋರ್ಟಿಸ್‌ ಹೆಲ್ತ್‌ಕೇರ್‌ನ ಅಂದಿನ ಪ್ರಮೋಟರ್‌ಗಳಾದ ಮಲ್ವಿಂದರ್‌ ಸಿಂಗ್‌ ಮತ್ತು ಶಿವಿಂದರ್‌ ಸಿಂಗ್‌ಗೆ 794 ಕೋಟಿ ರೂಪಾಯಿಗಳ ಸಾಲ ನೀಡಿತು. ಆದರೆ, ಆ ಸಾಲ ಅದಕ್ಕೆ ಹಿಂದಿರುಗಲೇ ಇಲ್ಲ. ಪರಿಣಾಮವಾಗಿ ಅದು ಕೆಟ್ಟ ಸಾಲವಾಗಿ ಬದಲಾಯಿತು. ಇದನ್ನು ಸರಿದೂಗಿಸುವ ಭರದಲ್ಲಿ ಬ್ಯಾಂಕ್‌ ತನ್ನ ಖಜಾನೆಯಲ್ಲಿದ್ದ ರೆಲಿಗೇರ್‌ ಫಿನ್ವೆಸ್ಟ್‌ ಸಂಸ್ಥೆಯ ಸ್ಥಿರ ಠೇವಣಿಯ ಹಣವನ್ನೇ ಒತ್ತೆ ಹಾಕಿಕೊಂಡಿತ್ತು. ಇದರ ಅರಿವಾಗಿ ರೆಲಿಗೇರ್‌ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ವಿರುದ್ಧ ಪ್ರಕರಣ ದಾಖಸಿಲಿತು. ಪ್ರಕರಣ ದಾಖಲಾಗುತ್ತಿದ್ದಂತೆಯೇ, ಆರ್‌ಬಿಐ ಮಧ್ಯಪ್ರವೇಶಿಸಿತು. 2019ರಲ್ಲಿ ಆರ್‌ಬಿಐ “”ಹೊಸ ಸಾಲಗಳನ್ನು ನೀಡಬಾರದು ಮತ್ತು ಎಲ್ಲಿಯೂ ಶಾಖೆಗಳನ್ನು ತೆರೆಯಬಾರದೆಂದು” ಆದೇಶಿಸಿ ಪ್ರಾಂಪ್ಟ್ ಕರೆಕ್ಟಿವ್‌ ಆ್ಯಕ್ಷನ್‌
(ಪಿಸಿಎ) ಜಾರಿಮಾಡಿತು.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.