ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ
Team Udayavani, Dec 1, 2020, 3:29 PM IST
ಸಿಂಧನೂರು: ದಢೇಸುಗೂರಿನ ತುಂಗಭದ್ರಾ ನದಿ ದಂಡೆಯ ಶಿವನ ದೇಗುಲದ ಬಳಿ ಆಯೋಜಿಸಿರುವ 12 ದಿನಗಳ ತುಂಗಭದ್ರಾ ಪುಷ್ಕರೋತ್ಸವದಲ್ಲಿ ಸೋಮವಾರ ತುಂಗಭದ್ರಾ ಆರತಿಯುಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಪ್ರತಿ ದಿನವೂ ನಡೆಯುವ ಆರತಿ ಹಾಗೂ ಪಿಂಡ ಪ್ರಧಾನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಕಾರ್ತಿಕ ಸೋಮವಾರದಂದು ಕೂಡ ವಿಶೇಷವಾಗಿ ತಂಗಭದ್ರಾ ಆರತಿಯನ್ನು ವೀಕ್ಷಿಸಲು ಹೆಚ್ಚಿನ ಭಕ್ತರು ಸೇರಿದ್ದರು. ನದಿ ತಟದಲ್ಲಿ ನಕ್ಷತ್ರ ಆರತಿ, ಪಂಚ ಆರತಿ,ಜಲ ಆರತಿ, ದ್ವಿಹಾರತಿ, ತ್ರಿಹಾರತಿಗಳನ್ನು ಬೆಳಗಲಾಯಿತು. ಅರ್ಚಕರು ವೇದಘೋಷ ಮೊಳಗಿಸಿದರು.
ವಿಶೇಷ ಸನ್ಮಾನ: ತುಂಗಭದ್ರಾ ಪುಷ್ಕರದ 11ನೇ ದಿನದ ನಿಮಿತ್ತ ಪುಷ್ಕರ ಉತ್ಸವ ಸಮಿತಿ ವತಿಯಿಂದ ಹಲವರನ್ನು ಸನ್ಮಾನಿಸಲಾಯಿತು. ಎಂ.ಸಿ.ಅಂಕಯ್ಯ, ವೈ.ನರೇಂದ್ರನಾಥ, ನಲ್ಲಾ ವೆಂಕಟೇಶ್ವರರಾವ್, ಬಳ್ಳಾರಿಯ ಪಶುವೈದ್ಯಾಧಿ ಕಾರಿ ರಾಜಶೇಖರ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಹ ಪ್ರಾಧ್ಯಾಪಕಿ ಕೃಷ್ಣವೇಣಿ, ಕೋಟಿ ಬೂದಿಹಾಳ ಕ್ಯಾಂಪ್, ಮಲ್ಲಿನವೆಂಕಟೇಶ್ವರರಾವ್, ಜಿ.ಗುನ್ನೇಶ್ವರರಾವ್, ನೆಕ್ಕಂಟಿ ನಾಗೇಶ್ವರರಾವ್, ಕಮ್ಮಾವಾರಿ ಸಂಘದ ಅಧ್ಯಕ್ಷ ಮುರುಳಿಕೃಷ್ಣ, ನಿರ್ದೇಶಕತಾಳೂರಿ ರಾಮಕೃಷ್ಣ, ಖಜಾಂಚಿ ಕರಟೂರಿ ವೆಂಕಟೇಶ್ವರರಾವ್, ಪಿ.ಸತ್ಯಬಾಬು, ಕೆ.ಗಣಪತಿ, ಜಯರಾಂ, ಕಾನುಮೆಲ್ಲಿಕೃಷ್ಣಮೂರ್ತಿ, ವಾಸು ಪಿಡಬ್ಲ್ಯಡಿ ಕ್ಯಾಂಪ್, ಹನುಮರೆಡ್ಡಿ ಗೋಪಾಲಕೃಷ್ಣ, ಸಾಯಿರಾಮಕೃಷ್ಣ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕಮ್ಮಾವಾರಿ ಸಂಘದ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ