ಜಾಹೀರಾತು ಜಗತ್ತಿನಲ್ಲಿ ಕಾಲು ಜಾರುವ ಮುನ್ನ ಎಚ್ಚರ


Team Udayavani, Dec 12, 2020, 9:00 AM IST

slip

“ಬನ್ನಿ ಬನ್ನಿ ಈ ಪ್ರೊಡಕ್ಟ್ ಅನ್ನು ಖರೀದಿಸಿ ಇದರಿಂದ ನಿಮ್ಮ ಬುದ್ಧಿಶಕ್ತಿ ಒಂದೇ ವಾರದಲ್ಲಿ ನಾಲ್ಕು ಪಟ್ಟು ಬೆಳೆಯುತ್ತದೆ ನೀವೇ ಈ ಜಗತ್ತಿನ ಬುದ್ಧಿವಂತ ವ್ಯಕ್ತಿಗಳಾಗುವಿರಿ’ ಎಂದೇ ಪ್ರಾರಂಭವಾಗುವ ಜಾಹೀರಾತುಗಳು ನಮ್ಮಲ್ಲಿ ಎಲ್ಲಿಲ್ಲದ ಆಸಕ್ತಿಯನ್ನು ಮೂಡಿಸುತ್ತವೆ.

ನಾವು ಇಂದು ಎಲ್ಲಿ ಹೋದರೂ ಈ ಜಾಹೀರಾತುಗಳು ನಮ್ಮ ನೆರಳಿನಂತೆ ನಾವು ಹೋದಲ್ಲಿ ಬಂದಲ್ಲಿ ಎಲ್ಲ ಕಡೆ ಕಾಣಿಸುತ್ತವೆ. ನಾವು ಬಳಸುವ ಸೂಜಿ, ದಾರದಿಂದ ಹಿಡಿದು ಆಕಾಶದಲ್ಲಿರುವ ವಿಮಾನದವರೆಗೆ ಜಾಹೀರಾತುಗಳು ಸಾಮಾನ್ಯ. ಹಾಗಾದರೆ ಈ ಜಾಹೀರಾತು ಎಂದರೇನು? ಅದನ್ನು ಯಾವ ಕಾರಣಕ್ಕಾಗಿ ಬಳಸಲಾಗುತ್ತದೆ? ಎಂದು ತಿಳಿದುಕೊಳ್ಳುವುದು ಪ್ರತೀ ಬಳಕೆದಾರನ ಕರ್ತವ್ಯ.

ಜಾಹೀರಾತುಗಳು ಇರುವುದು ವಸ್ತುಗಳನ್ನು ಜನರು ಹೆಚ್ಚೆಚ್ಚು ಪ್ರಮಾಣದಲ್ಲಿ ಖರೀದಿಸಲಿ ಎಂದು. ಒಂದು ವಸ್ತು ಕಾರ್ಖಾನೆಯಲ್ಲಿ ಉತ್ಪಾದನೆಯಾದಾಗ ಅದನ್ನು ಜನರಿಗೆ ಮನತಟ್ಟುವಂತೆ ಮುಟ್ಟಿಸುವ ಕಾರ್ಯವನ್ನು ಈ ಜಾಹೀರಾತು ಕಂಪೆನಿಗಳು ಮಾಡುತ್ತವೆ. ಅದು ಅಂತರ್ಜಾಲದ ಮೂಲಕ ಇರಬಹುದು ಇಲ್ಲವೇ ಕರಪತ್ರಗಳ ಮೂಲಕ ಇರಬಹುದು. ಜನರ ಆಕರ್ಷಣೆ ಅವರ ಮೊದಲ ಗುರಿ. ಅದರಲ್ಲಿ ಲಾಭಗಳಿಸುವುದು ಅವರ ಎರಡನೆ ಗುರಿಯಾಗಿರುತ್ತದೆ. ಅದಕ್ಕಾಗಿಯೇ ಅವರು ತಮ್ಮ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಗ್ರಾಹಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಹೀಗೆ ವಸ್ತುವಿನ ಮಾರಾಟಕ್ಕೆ ಮತ್ತು ಲಾಭಕ್ಕೆ ಈ ಜಾಹೀರಾತು ಅತ್ಯವಶ್ಯಕ ಎನಿಸಿಕೊಂಡಿವೆ.

ಆದರೆ ಕೆಲವೊಂದು ಜಾಹೀರಾತುಗಳು ಎಷ್ಟೊಂದು ಆಕರ್ಷಕವಾಗಿರುತ್ತದೆಯೆಂದರೆ ಜನರು ಅದರ ಮೋಡಿಗೆ ಆಕಸ್ಮಿಕವಾಗಿ ಸಿಲುಕಿ ಹೋಗುತ್ತಾರೆ. ಜಾಹೀರಾತು ಕಂಪೆನಿಗಳ ಗುರಿ ವಸ್ತುಗಳ ಮಾರಾಟ ಮತ್ತು ಲಾಭ ಅಷ್ಟೇ. ಅದಕ್ಕಾಗಿ ಅವರು ದೇವರುಗಳ ಹೆಸರಿನಿಂದ ಹಿಡಿದು ಜನರು ಇಷ್ಟ ಪಡುವ ಸಿನೆಮಾ ನಾಯಕ-ನಾಯಕಿಯರನ್ನು ಜಾಹೀರಾತಿಗಾಗಿ ಬಳಸಿಕೊಳ್ಳುತ್ತಾರೆ. ಅದನ್ನು ನೋಡಿದ ನಾವು ನಮ್ಮ ನಾಯಕ-ನಾಯಕಿಯರು ಬಳಸುವಂಥ ವಸ್ತುಗಳನ್ನೇ ಖರೀದಿಸಲು ಮುಂದಾಗುತ್ತೇವೆ. ಅವರು ತೋರಿಸುವ ದೃಶ್ಯವನ್ನು ನೋಡಿ ನಮಗೆ ನಾವೇ ಪಂಗನಾಮ ಎಳೆದುಕೊಳ್ಳುತ್ತವೆ. ಜಾಹೀರಾತು ಬಂದಾಗ ಅದನ್ನು ನೋಡಿ ಅಲ್ಲಿರುವಂಥ ವಸ್ತುಗಳನ್ನು ಮನೆಗೆ ತಂದು ಬಳಸಿದಾಗಲೆ ಗೊತ್ತಾಗುವುದು ಅದರ ನೈಜ ಸ್ವರೂಪ. ಈ ಜಾಹೀರಾತು ಜಗತ್ತು ಒಂದು ದೂರದ ಬೆಟ್ಟವಿದ್ದಂತೆ ಅದರ ಹತ್ತಿರಕ್ಕೆ ಹೋದಾಗಲೇ ಅದನ್ನು ಹತ್ತಿದಾಗಲೆ ನಮಗೆ ಕಲ್ಲು, ಮುಳ್ಳು, ಮಣ್ಣು ಇವುಗಳ ಪರಿಚಯವಾಗುವುದು.

ಹಾಗಾಗಿ ನಾವು ಯಾವುದೇ ವಸ್ತುವನ್ನು ಖರೀದಿಸುವಾಗ ಜಾಹೀರಾತುಗಳಿಗೆ ಅಥವಾ ಅಲ್ಲಿ ಬರುವ ನೆಚ್ಚಿನ ವ್ಯಕ್ತಿಗಳಿಗೆ ಮರುಳಾಗದೆ ನಮ್ಮ ಜಾಣ್ಮೆಯಿಂದ ವಸ್ತುಗಳನ್ನು ಖರೀದಿಸಬೇಕು. ವಸ್ತುಗಳಿಗೆ ಬರುವ ಜಾಹೀರಾತುಗಳಲ್ಲಿ ಎಷ್ಟು ಸತ್ಯವಿದೆ ಎಷ್ಟು ಮಿಥ್ಯವಿದೆ ಎಂದು ಯೋಚಿಸಿ ಮುಂದುವರಿಯಬೇಕು. ಬೇರೆಯವರು ನಮ್ಮ ತಲೆಗೆ ಟೋಪಿ ಹಾಕುವ ಮೊದಲು ನಾವು ಅದರ ಬಗ್ಗೆ ಅರಿಯಬೇಕು. ಯಾವುದೇ ವಸ್ತುವಿನ ಬಗ್ಗೆ ಜಾಹೀರಾತುಗಳು ಬಂದಾಗ ಅದನ್ನು ವೀಕ್ಷಿಸಿ ಪರಿಶೀಲಿಸಿ ಅನಂತರ ಮುಂದುವರಿಯುವುದು ಒಳ್ಳೆಯದು.


ಮಧುರಾ ಭಟ್‌, ಎಸ್‌ಡಿಎಂ ಕಾಲೇಜು, ಉಜಿರೆ 

ಟಾಪ್ ನ್ಯೂಸ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.