ಈ ರಾಶಿಯವರಿಗಿಂದು ಅನಿರೀಕ್ಷಿತವಾಗಿ ಧನಲಾಭ ಕಂಡು ಬಂದೀತು
Team Udayavani, Dec 10, 2020, 7:47 AM IST
10-12-2020
ಮೇಷ: ಆದ್ಯಾತ್ಮಿಕ ಚಿಂತನೆಯು ನಿಮ್ಮಲ್ಲಿದ್ದರೂ ಅದರ ಬಗ್ಗೆ ಅತೀ ಹೆಚ್ಚು ತಲೆಕೆಡಿಸಿಕೊಳ್ಳುವವರು ನೀವಲ್ಲ. ಸದಾ ಎಲ್ಲಾ ವಿಷಯದಲ್ಲೂ ನೇತೃತ್ವ ವಹಿಸುವಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ದಿನಾಂತ್ಯ ಶುಭವಿದೆ.
ವೃಷಭ: ಅಲಂಕಾರ ಪ್ರಿಯ, ಶಿಸ್ತುಬದ್ಧತೆ ಹಾಗೂ ಕಲೆಗಳಲ್ಲಿ ಪಾಂಡಿತ್ಯವುಳ್ಳ ನೀವು ಅತೀ ಎತ್ತರಕ್ಕೆ ಏರಿದವರಲ್ಲ. ನಿಮ್ಮ ಮಾತುಕತೆ ನಡತೆಯು ಇತರರನ್ನು ಆಕರ್ಷಿಸುವುದು. ಆರೋಗ್ಯದಲ್ಲಿ ಏರುಪೇರು.
ಮಿಥುನ: ಬಹುಜನರ ಒಡನಾಟದಿಂದ ಪ್ರೀತಿ ವಿಶ್ವಾಸವನ್ನು ಪಡೆದಿರುತ್ತಾರೆ. ಬಂಧುಗಳೊಂದಿಗೆ ನಿಷ್ಠುರ ಮಾಡುವುದು ಉತ್ತಮವಲ್ಲ . ನಿಮ್ಮ ರಹಸ್ಯವನ್ನು ಕಾಪಾಡಿಕೊಂಡರೆ ಉತ್ತಮ. ಕಿರು ಸಂಚಾರವಿರುತ್ತದೆ.
ಕರ್ಕ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಕೂಡಿ ಬಂದೀತು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಅದೃಷ್ಟದಿಂದ ನಾನಾ ರೀತಿಯಲ್ಲಿ ಸಂಪತ್ತು ಒಟ್ಟುಗೂಡಲಿದೆ. ಖರ್ಚುವೆಚ್ಚದಲ್ಲಿ ನಿಗಾ ವಹಿಸಿರಿ.
ಸಿಂಹ: ಅನಿರೀಕ್ಷಿತವಾಗಿ ಧನಲಾಭ ಕಂಡು ಬಂದೀತು. ನಿಮ್ಮ ಆತ್ಮಸ್ಥೆರ್ಯ ಹಾಗೂ ದೃಢ ನಿರ್ಧಾರಗಳಿಂದ ನೀವು ಮುನ್ನಡೆಯುವಿರಿ. ಅಧೈರ್ಯದ ಹೆಜ್ಜೆ ಹಾಕದಿರಿ. ನಿಮ್ಮ ಸಂಬಂಧಿಕರಿಂದ ಸಹಾಯ ಒದಗಿ ಬರಲಿದೆ.
ಕನ್ಯಾ: ದೈಹಿಕವಾಗಿ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಗೃಹದಲ್ಲಿ ಶುಭಮಂಗಲ ಕಾರ್ಯವು ನಡೆದು ಸಂತಸ ತಂದೀತು. ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿ ತಂದೀತು. ನಿಶ್ಚಿಂತೆಯಾಗಿರುವುದು.
ತುಲಾ: ನಿರುದ್ಯೋಗಿಗಳಿಗೆ ಆಕಸ್ಮಿಕ ಉದ್ಯೋಗದ ಲಾಭವಿರುತ್ತದೆ. ವಿಚಾರಶೀಲರಿಗೆ ಉತ್ತಮ ಪ್ರಶಂಸೆಯ ಕಾಲವಿದು. ಉದರಸಂಬಂಧಿ, ವಾತ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಆರ್ಥಿಕವಾಗಿ ಅಭಿವೃದ್ಧಿ ಇದೆ.
ವೃಶ್ಚಿಕ: ಹಿತಶತ್ರುಗಳು ನಿಮ್ಮ ಕೆಲಸ ಕಾರ್ಯಗಳಿಗೆ ತಡೆಯೊಡ್ಡಲಿದ್ದಾರೆ. ಉದರ ಸಂಬಂಧಿ ಹಾಗೂ ಮೂತ್ರಾಶಯದ ಬಗ್ಗೆ ಜಾಗ್ರತೆ ಮಾಡಿರಿ. ಹೆಚ್ಚಿನ ಶುಭಫಲಗಳೇ ಕಣ್ಣ ಮುಂದೆ ಬರಲಿದೆ. ಶುಭ ವಾರ್ತೆ ಇದೆ.
ಧನು: ಕೃಷಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶ್ರಮಜೀವಿಗಳಿಗೆ ನಾನಾ ರೀತಿಯ ತೊಂದರೆಗಳು ಕಂಡುಬರಲಿದೆ. ವೈಯಕ್ತಿಕ ಆಗುಹೋಗುಗಳಲ್ಲಿ ಚಿಂತಿತರಾಗದೆ ಮುನ್ನಡೆಯಿರಿ. ಶ್ರೀದೇವರ ರಕ್ಷೆ ಇದೆ.
ಮಕರ: ಉದ್ಯೋಗಿಗಳಿಗೆ, ನಿರುದ್ಯೋಗಿಗಳಿಗೆ ತಾಳ್ಮೆ ಸಮಾಧಾನದಿಂದ ಮುನ್ನಡೆಯಬೇಕಾಗುತ್ತದೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಪುಣ್ಯಸ್ಥಳಗಳ ಭೇಟಿಯ ಯೋಗವಿದೆ. ಶುಭವಾರ್ತೆ ಶ್ರವಣ.
ಕುಂಭ: ಆರ್ಥಿಕವಾಗಿ ಆದಾಯವು ನಿರಂತರ ಹರಿದು ಬರಲಿದೆ. ಬಂಧು ಹಾಗೂ ಮಿತ್ರರಿಂದ ಒತ್ತಡಗಳು ಕಂಡುಬರಲಿದೆ. ದುಡುಕು ನಿರ್ಧಾರದಿಂದ ನಗೆಪಾಟಲಿಗೆ ಈಡಾಗುವ ಸಾಧ್ಯತೆ ಕಂಡುಬರುವುದು.
ಮೀನ: ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕೀರ್ತಿ, ಪ್ರತಿಷ್ಠೆ, ಸ್ಥಾನಮಾನಗಳು ನಿಮಗೆ ಸಂತಸ ತಂದಾವು. ದಾನ, ಧರ್ಮಾದಿಗಳಲ್ಲಿ ಧನವ್ಯಯವಾದರೂ ಸಂತೃಪ್ತಿ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ