ದಂಡಿನ ಮಾರಮ್ಮ ದೇಗುಲ ಹುಂಡಿ ದರೋಡೆ
Team Udayavani, Dec 19, 2020, 7:01 PM IST
ಸಾಂದರ್ಭಿಕ ಚಿತ್ರ
ಗುಂಡ್ಲುಪೇಟೆ: ತಾಲೂಕಿನ ಚನ್ನವಡೆಯನಪುರ ಗ್ರಾಮದ ದಂಡಿನ ಮಾರಮ್ಮ ದೇವಸ್ಥಾನ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ನಗನಾಣ್ಯ ದರೋಡೆ ಮಾಡಿರುವ ಘಟನೆ ಜರುಗಿದೆ.
ಗ್ರಾಮದ ಹೊರವಲಯದಲ್ಲಿರುವ ದಂಡಿನ ಮಾರಮ್ಮನವರ ದೇವಸ್ಥಾನದ ಹುಂಡಿಯನ್ನು ವರ್ಷಕ್ಕೊಮ್ಮೆ ತೆರೆಯುವ ಪದ್ಧತಿಯಿದ್ದು, ಪ್ರತಿ ವರ್ಷವೂ ಲಕ್ಷಾಂತರ ರೂ.ನಗದು ಸಂಗ್ರಹವಾಗು ತ್ತದೆ. ಅಲ್ಲದೆ ಭಕ್ತರು ಚಿನ್ನದ ತಾಳಿ ಹಾಗೂ ಆಭರಣಗಳನ್ನು ಗೋಲಕದೊಳಗೆ ಹಾಕಿ ತಮ್ಮ ಹರಕೆ ತೀರಿಸುವುದು ಇಲ್ಲಿನ ವಾಡಿಕೆಯಾಗಿದೆ.
ಕಳೆದ ಒಂದು ವರ್ಷದಿಂದಲೂ ಗೋಲಕ ತೆರೆಯದ ಬಗ್ಗೆ ಮಾಹಿತಿ ಪಡೆದ ಕಳ್ಳರು ಹುಂಡಿ ಯನ್ನು ಒಡೆದು ನಗನಾಣ್ಯಗಳನ್ನು ದೋಚಿದ್ದಾರೆಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್ಐ ಕೃಷ್ಣಕಾಂತಕೋಳಿ, ಎಎಸ್ಐ ದೊರೆರಾಜ್, ಮುಖ್ಯಪೇದೆ ಮಲ್ಲಿಕಾರ್ಜುನ ಭೇಟಿ ನೀಡಿಪರಿಶೀಲಿಸಿದರು. ಸ್ಥಳಕ್ಕೆ ತಜ್ಞರನ್ನು ಕರೆಸಿ ಬೆರಳಚ್ಚುಗುರುತುಗಳನ್ನು ಸಂಗ್ರಹಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ, ಇಬ್ಬರ ಬಂಧನ :
ಯಳಂದೂರು: ಪಟ್ಟಣದ ಹಳೆ ಉಪಖಜಾನೆಕಾರ್ಯಾಲಯದ ಮುಂಭಾಗ ಗುರುವಾರ ರಾತ್ರಿ ಅಕ್ರಮವಾಗಿ ಸಾಗಿ ಸುತ್ತಿದ್ದ ಇಬ್ಬರನ್ನು ಪೊಲೀಸರುಬಂಧಿಸಿ, ಮದ್ಯ ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 209ರ ಗೌತಮ್ ಬಡಾ ವಣೆಯ ಬಳಿ ಇರುವ ಹಳೆ ಉಪಖಜಾನೆ ಮುಂಭಾಗ ಸ್ಕೂಟರ್ನಲ್ಲಿ ತಾಲೂಕಿನ ಚಂಗಚಹಳ್ಳಿಯ ಶಿವರಾಜು ಹಾಗೂ ಪ್ರಕಾಶ್ ಯಳಂದೂರು ಪಟ್ಟಣದಿಂದತಮ್ಮ ಗ್ರಾಮಕ್ಕೆ ಮದ್ಯ ಸಾಗಿಸುತ್ತಿದ್ದರು. ಖಚಿತ ಮಾಹಿತಿಮೇರೆಗೆ ಡಿವೈಎಸ್ಪಿ ಜಿ. ನಾಗರಾಜು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ9 ಲೀಟರ್ನ96 ಮದ್ಯದ ಪೌಚ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಪಿಎಸ್ಐ ಎನ್.ಕರಿಬಸಪ್ಪ, ಎಎಸ್ಐ ಪರಶಿಮೂರ್ತಿ, ರಂಗಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ