ಬಾಕ್ಸಿಂಗ್‌ ಡೇ ಟೆಸ್ಟ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ


Team Udayavani, Dec 21, 2020, 3:32 PM IST

ಬಾಕ್ಸಿಂಗ್‌ ಡೇ ಟೆಸ್ಟ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಅತ್ಯಂತ ಹಿನಾಯವಾಗಿ ಸೋತು ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದು ಮುಂದಿನ ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಭಾರತ ತಂಡದಲ್ಲಿ ಹಲವು ಬದಲಾವಣೆ ಸಂಭವಿಸುವುದು ಇಲ್ಲಿ ನಿರೀಕ್ಷಿತ.

ರಾಹುಲ್‌ ಸೇರ್ಪಡೆ

ಕಳಪೆ ಲಯದಲ್ಲಿರುವ ಆರಂಭಿಕನಾದ ಪೃಥ್ವಿ ಶಾ ಅವರನ್ನು ಮುಂದಿನ ಪಂದ್ಯಗಳಿಗೆ ಕೈ ಬಿಟ್ಟು ಈ ಸ್ಥಾನಕ್ಕೆ ಕನ್ನಡಿಗ ಕೆ. ಎಲ್‌. ರಾಹುಲ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಏಕೆಂದರೆ ಆಸೀಸ್‌ ನೆಲದಲ್ಲಿ ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. ಜತೆಗೆ ರಾಹುಲ್‌ ಸೇರ್ಪಡೆಯಿಂದ ಭಾರತಕ್ಕೆ ಉತ್ತಮ ಆರಂಭಿಕ ಜೋಡಿಯೂ ಲಭಿಸಿದಂತಾಗುತ್ತದೆ. ಐಪಿಎಲ್‌ನಲ್ಲಿಯೂ ಅಗರ್ವಾಲ್‌-ರಾಹುಲ್‌ ಜೋಡಿ ಉತ್ತಮ ಜತೆಯಾಟ ನಡೆಸಿದೆ. ಅದರಂತೆ ಇಲ್ಲಿಯೂ ಈ ಜೋಡಿಯಿಂದ ತಂಡಕ್ಕೆ ಉತ್ತಮ ಆರಂಭ ಸಿಗುವಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಅನೇಕ ಮಾಜಿ ಕ್ರಿಕೆಟಿಗರ ಅಭಿಪ್ರಾಯವೂ ಆಗಿದೆ.

ಗಿಲ್‌ಗೆ ಅವಕಾಶ

ಮೊದಲ ಪಂದ್ಯವನ್ನಾಡಿದ ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯಲ್ಲಿ ಭಾರತಕ್ಕೆ ವಾಪಸಾಗಲಿದ್ದು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಸ್ಥಾನಕ್ಕೆ ಯುವ ಆಟಗಾರ ಶುಭಮನ್‌ ಗಿಲ್‌ಗೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆಯಿದೆ. ಅಭ್ಯಾಸ ಪಂದ್ಯದಲ್ಲಿ ಗಿಲ್‌ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಜತೆಗೆ ನಿಂತು ಆಡುವ ಕೌಶಲವೂ ಗಿಲ್‌ ಅವರಲ್ಲಿದೆ. ಪ್ರಥಮ ದರ್ಜೆ ಮತ್ತು ರಣಜಿ ಕೂಟದಲ್ಲಿ ಗಿಲ್‌ ತೋರಿದ ಬ್ಯಾಟಿಂಗ್‌ ಪ್ರದರ್ಶನವೇ ಇದಕ್ಕೆ ಉತ್ತಮ ನಿದರ್ಶನ. ಆದ್ದರಿಂದ ವಿರಾಟ್‌ ಸ್ಥಾನಕ್ಕೆ ಗಿಲ್‌ ಅವರನ್ನು ಹೊರತು ಪಡಿಸಿ ಮತ್ಯಾವ ಆಟಗಾರನ ಆಯ್ಕೆ ಅಷ್ಟು ನ್ಯಾಯ ಒದಿಸುವ ಸಾಧ್ಯತೆ ತೀರ ಕಡಿಮೆ ಎಂದರು ತಪ್ಪಾಗಲಾರದು.

ರಹಾನೆಗೆ ಹೆಚ್ಚಿದ ನಾಯಕತ್ವದ ಜವಾಬ್ದಾರಿ

ವಿರಾಟ್‌ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡ ಅಜಿಂಕ್ಯ ರಹಾನೆ ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಟೀಕೆಗಳ ಬಗ್ಗೆ ತೆಲೆಕೆಡಿಸಿಕೊಳ್ಳದೆ ಮುಂದಿನ ಪಂದ್ಯಕ್ಕೆ ಮಾನಸಿಕವಾಗಿ ಸದೃಡತೆಯಿಂದ ಸಜ್ಜಾಗಬೇಕಿದೆ. ತಂಡದ ಆಟಗಾರರಲ್ಲಿ ಆತ್ಮವಿಶ್ವಾಸದ ನುಡಿಗಳನ್ನಾಡಿ ತಂಡವನ್ನು ಮುನ್ನಡೆಸಬೇಕಿದೆ. ಜತೆಗೆ ಬ್ಯಾಟಿಂಗ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಬೇಕಿದೆ.

ಇದನ್ನೂ ಓದಿ:ಗೆಲ್ಲಬೇಕಾದರೆ ಈ ತಕ್ಷಣ ರಾಹುಲ್ ದ್ರಾವಿಡ್‌ರನ್ನು ಆಸ್ಟ್ರೇಲಿಯಕ್ಕೆ ಕಳಿಸಿಕೊಡಿ!

ಜಡೇಜ ಮರುಪ್ರವೇಶ?

ತಂಡದಲ್ಲಿ ಕಾಡುತ್ತಿರುವ ಆಲ್‌ರೌಂಡರ್‌ ಸಮಸ್ಯೆಗೆ ರವೀಂದ್ರ ಜಡೇಜ ಆಯ್ಕೆ ಉತ್ತಮ ಪರಿಹಾರವಾಗಿದೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಜಡೇಜ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಮುಂದಿನ ಪಂದ್ಯಕ್ಕೆ ಹನುಮ ವಿಹಾರಿ ಬದಲು ಜಡೇಜ ಅವರು ಅವಕಾಶ ಪಡೆಯುವುದು ಬಹುತೇಕ ಖಾತ್ರಿ. ಜಡೇಜ ಲಭ್ಯತೆಯಿಂದ ಸ್ಪಿನ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗ ಮತ್ತಷ್ಟು ಸದೃಢಗೊಳ್ಳಲಿದೆ.

ಶಮಿ ಸ್ಥಾನಕ್ಕೆ ಸಿರಾಜ್‌ ಸೂಕ್ತ

ಕಳೆದ ಪಂದ್ಯದಲ್ಲಿ ಗಯಾಳಾಗಿ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಮೊಹಮ್ಮದ್‌ ಶಮಿ ಸ್ಥಾನಕ್ಕೆ ಸಿರಾಜ್‌ ಅವರನ್ನು ಆಡಿಸಿದರೆ ಉತ್ತಮ. ಅಭ್ಯಾಸ ಪಂದ್ಯದಲ್ಲಿ ಸಿರಾಜ್‌ ಉತ್ತಮ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸ ಮೂಡಿಸಿದ್ದಾರೆ. ಉಳಿದಂತೆ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಾಹಾ ಬದಲಿಗೆ ಪಂತ್‌ಗೆ ಅವಕಾಶ ನೀಡಿದರೂ ತಪ್ಪಾಗಲಾರದು. ಪಂತ್‌ ಕಳೆದ ಆಸೀಸ್‌ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ ಜತೆಗೆ ಅಭ್ಯಾಸ ಪಂದ್ಯದಲ್ಲಿಯೂ ಶತಕ ಸಿಡಿಸಿ ಮಿಂಚಿದ್ದರು. ಸಾಹಾ ಕೀಪಿಂಗ್‌ ಹೊರತುಪಡಿಸಿ ಬ್ಯಾಟಿಂಗ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸುತ್ತಿದ್ದು ತಂಡಕ್ಕೆ ಹಿನ್ನಡೆಯಾಗಿದೆ ಆದ್ದರಿಂದ ಪಂತ್‌ಗೆ ಆಡುವ ಅವಕಾಶ ನೀಡಬೇಕೆನ್ನುವುದು ಹಲವರ ಅಭಿಪ್ರಾಯವಾಗಿದೆ.

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ

ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೆ ಒಂದು ಪಂದ್ಯವನ್ನು ಸೋತಿದೆ. ಮುಂದಿನ ಪಂದ್ಯಕ್ಕೆ ವಿರಾಟ್‌, ಅನುಪಸ್ಥಿತಿ. ಕ್ವಾರಂಟೈನ್‌ ವಾಸದಲ್ಲಿರುವ ರೋಹಿತ್‌ ಶರ್ಮ ಕೂಡ ದ್ವಿತೀಯ ಟೆಸ್ಟ್‌ ಆಡುವುದ ಅನುಮಾನ ಆದ್ದರಿಂದ ಭಾರತಕ್ಕೆ ಅನುಭವಿ ಆಟಗಾರರ ಕೊರತೆ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಸೋಲಿಗೆ ಅನೇಕ ಕ್ರಿಕೆಟಿಗರಿಂದ ದೊಡ್ಡಮಟ್ಟದಲ್ಲಿ ಟೀಕೆಯೂ ವ್ಯಕ್ತವಾಗುತ್ತಿದೆ.

ಇದೆಲ್ಲವನ್ನು ಮೆಟ್ಟಿನಿಂತು ಭಾರತ ಹೊಸ ಹುರುಪಿನೊಂದಿಗೆ ಮುಂದಿನ ಪಂದ್ಯದಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ಎದುರಾಳಿಗಳ ವಿರುದ್ಧ ತಿರುಗಿ ಬೀಳಬೇಕಿದೆ. ಒಂದೊಮ್ಮೆ ಭಾರತ ಈ ಪಂದ್ಯವನ್ನು ಸೋತರೆ ಸರಣಿ ಗೆಲ್ಲುವ ಹೋರಾಟವೊಂದನ್ನು ಅರ್ಧ ದಾರಿಲ್ಲಿಯೇ ಕೊನೆಗೊಳಿಸಲಿದೆ ಎನ್ನಲಡ್ಡಿಯಿಲ್ಲ. ಗೆದ್ದರೆ ಹೋರಾಟ ಜಾರಿಯಲ್ಲಿರಲಿದೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.