ಉಡುಪಿಯ ನಂದನ್‌ಕೃಷ್ಣ ನೌಕಾಪಡೆ ಸಬ್‌ ಲೆಫ್ಟಿನೆಂಟ್‌


Team Udayavani, Dec 22, 2020, 6:19 AM IST

ಉಡುಪಿಯ ನಂದನ್‌ಕೃಷ್ಣ ನೌಕಾಪಡೆ ಸಬ್‌ ಲೆಫ್ಟಿನೆಂಟ್‌

ಉಡುಪಿ: ದೊಡ್ಡಣಗುಡ್ಡೆ ಮೂಲದ ನಂದನ್‌ಕೃಷ್ಣ ಈಗ ನೌಕಾಪಡೆಯಲ್ಲಿ ಸಬ್‌ ಲೆಫ್ಟಿನೆಂಟ್‌ ಹುದ್ದೆ ಅಲಂಕರಿಸಿದ್ದಾರೆ.

ಕೇರಳದ ನಿವೃತ್ತ ಡಿವೈಎಸ್‌ಪಿ ಶ್ರೀರಾಮ್‌ ಮತ್ತು ಗಾಯತ್ರಿ ದಂಪತಿಯ ಏಕಮಾತ್ರ ಪುತ್ರ ನಂದನ್‌ಕೃಷ್ಣ ಕೇರಳದ ಪಯ್ಯನೂರಿನಲ್ಲಿ ತರಬೇತಿಯನ್ನು ಪಡೆದು ನವೆಂಬರ್‌ನಲ್ಲಿ ನೌಕಾಪಡೆಯ ಸಬ್‌ ಲೆಫ್ಟಿನೆಂಟ್‌ ಆಗಿ ಸೇವೆ ಆರಂಭಿಸಿದ್ದಾರೆ. ಪ್ರಸ್ತುತ ಅವರ ಕಾರ್ಯಕ್ಷೇತ್ರ ಗುಜರಾತ್‌ ರಾಜ್ಯದ ಜಾಮ್‌ನಗರದ ಐಎನ್‌ಎಸ್‌ ವಲ್ಸುರದಲ್ಲಿದೆ.

ಆಜಾನುಬಾಹು ವ್ಯಕ್ತಿತ್ವದ ನಂದನ್‌ಕೃಷ್ಣ ಅವರಿಗೆ ಇನ್ನೂ 21ರ ಎಳೆ ಹರೆಯ. ಅಳಿಕೆಯಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿದ ನಂದನ್‌ಕೃಷ್ಣ ಅವರು ನಾಲ್ಕು ವರ್ಷ ನೌಕಾಪಡೆಯಲ್ಲಿ ತರಬೇತಿ ಪಡೆದರು. ಅವರಿಗೆ ತಂದೆಯವರ ಪೊಲೀಸ್‌ ಕರ್ತವ್ಯ ಮತ್ತು ದೊಡ್ಡಪ್ಪ ಶ್ರೀಧರ ಕಾರ್ಣಿಕ್‌ ಅವರ ನೌಕಾಪಡೆಯ ಸೇವೆ ಸ್ಫೂರ್ತಿ ನೀಡಿದೆ.

ಶ್ರೀಧರ ಕಾರ್ಣಿಕ್‌ ಅವರು ಕಾರವಾರದ ನೌಕಾ ನೆಲೆಯಲ್ಲಿ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ್ದರು. ಇವರು ಗುಜರಾತ್‌ನಲ್ಲಿ ಭೂಕಂಪ ಉಂಟಾದಾಗ ಪರಿಹಾರ ಕಾರ್ಯದಲ್ಲಿ ತೋರಿದ ಸಾಧನೆ ಗಾಗಿ ಅತ್ಯುನ್ನತವಾದ ನೌಕಾ ಸೇನಾ ಪದಕವನ್ನು ಪಡೆದವರು. ಕಾರವಾರದಲ್ಲಿ ಕಮಾಂಡರ್‌ ಆಗಿದ್ದಾಗ ನೌಕಾ ನೆಲೆಗೆ ಹೋಗಿ ಅಲ್ಲಿನ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ಕಂಡಿದ್ದರು. ತಂದೆ ಶ್ರೀರಾಮ್‌ ಅವರಿಗೆ ಕೇರಳ ಸರಕಾರದ ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ಬಂದಿದೆ.

ಮೂಲತಃ ಕಾಸರಗೋಡು ಜಿಲ್ಲೆ ಬಾಯಾರು ಮೂಲದವರಾದ ಶ್ರೀರಾಮ್‌ ಅವರು ನಿವೃತ್ತಿ ಬಳಿಕ ಉಡುಪಿಗೆ ಬಂದು ನೆಲೆಸಿದ್ದಾರೆ. ಸೇನಾ ಕ್ಷೇತ್ರದಲ್ಲಿ ಶಿಸ್ತಿನ ಜೀವನವಿರುತ್ತದೆ. ನಮ್ಮ ಭವಿಷ್ಯವನ್ನು ಹೇಗೆ ರೂಪಿಸಿ ಕೊಳ್ಳಬೇಕು ಎಂಬ ನಿಖರತೆ ಇರುತ್ತದೆ. ದೇಶ ಸೇವೆಗೆ ಬಹಳಷ್ಟು ಅವಕಾಶಗಳಿರುತ್ತವೆ. ತಂದೆಯವರ ಪೊಲೀಸ್‌ ಕಾರ್ಯಕ್ಷಮತೆ ಮತ್ತು ದೊಡ್ಡಪ್ಪನವರ ನೌಕಾಪಡೆಯ ಕಾರ್ಯದಕ್ಷತೆ ನನ್ನ ಮೇಲೆ ಪರಿಣಾಮ ಬೀರಿತು. ಹೀಗಾಗಿ ನಾನು ನೌಕಾಪಡೆಯನ್ನು ಸೇರಿದ್ದೇನೆ.
– ನಂದನ್‌ಕೃಷ್ಣ.

ಟಾಪ್ ನ್ಯೂಸ್

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.