ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ
Team Udayavani, Dec 28, 2020, 7:48 AM IST
28-12-2020
ಮೇಷ: ಅತೀ ಮಹತ್ವದ ಕೆಲಸಕಾರ್ಯಗಳಿಗಾಗಿ ಧನ ವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ನಿಮ್ಮ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫಲವಾಗಲಿದೆ. ವ್ಯಯಾಧಿಕ್ಯವಿದ್ದು ಚಿಂತಿತರಾಗುವಿರಿ.
ವೃಷಭ: ನಿಮ್ಮ ಮನಸ್ಥಿತಿ ಸರಿ ಇರದೆ ಚಡಪಡಿಕೆ ಇರುತ್ತದೆ. ಆರೋಗ್ಯಭಾಗ್ಯವು ಸ್ವಲ್ಪ ಸರಿಯಾದರೂ ತಲೆ ಬಿಸಿ ಕಮ್ಮಿ ಇರದು. ಪಿತ್ತಾಧಿಕ್ಯದಿಂದ ಶರೀರದಲ್ಲಿ ಏರುಪೇರು ಕಂಡು ಬರುವುದು.
ಮಿಥುನ: ಮಂಗಲ ಕಾರ್ಯ ಹಾಗೂ ಧಾರ್ಮಿಕ ಕಾರ್ಯವು ಜರಗುವುದು. ಆದಾಯದ ವೃದ್ಧಿ ಇರುತ್ತದೆ. ಮನೆಯಲ್ಲಿ ಪತ್ನಿಯೊಂದಿಗೆ ವೈಮನಸ್ಸು ತಲೆದೋರಬಹುದು. ಶಿಕ್ಷಣ ರಂಗದವರಿಗೆ ಅಭಿವೃದ್ಧಿ ಇದೆ.
ಕರ್ಕ: ವೃತ್ತಿಪರರಿಗೆ ವರ್ಗಾವಣೆಯ ಕುರಹು ಕಂಡು ಬಂದೀತು. ಸ್ವಲ್ಪ ಮಟ್ಟಿಗೆ ವಿತ್ತ ಚಿಂತನೆಯು ಕಾಡಬಹುದು. ಪುಣ್ಯ ಕಾರ್ಯ ಸಹಭಾಗಿಯಾಗುವ ಸಮಯವು ನಿಮಗೆ ಬಂದೀತು. ಶುಭವಾರ್ತೆ ಇದೆ.
ಸಿಂಹ: ಮಾತು ಕಡಿಮೆ ಇರಲಿ. ಕೃಷಿ, ನೀರು ಉದ್ದಿಮೆ ಆಹಾರಪದಾರ್ಥಗಳ ವೃತ್ತಿಯವರಿಗೆ ಕಿರಿಕಿರಿ ಇರುತ್ತದೆ. ಧನಹಾನಿ ಸಂಭವ ಇರುತ್ತದೆ. ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ.
ಕನ್ಯಾ: ವಿಲಾಸಿ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬಂದೀತು. ನಿಮಗೆ ಬರುವ ಹಣವು ವಿಳಂಬ ತಂದೀತು. ಜ್ವರ, ಶೀತ ಭಾದೆಯು ಕಾಡಲಿದೆ. ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚು ಕಂಡೀತು.
ತುಲಾ: ನೀವು ಕೈಗೊಂಡ ಕಾರ್ಯವು ಶೀಘ್ರವಾಗಿ ಫಲ ಕೊಟ್ಟೀತು. ಹಿರಿಯರಿಗೆ ಶುಶ್ರೂಷೆ ಯಾ ಒಡವೆ ವಸ್ತುಗಳ ಖರೀದಿ ಬಂದೀತು. ವಾಹನ ಖರೀದಿ ಯಾ ಬದಲಿಸುವ ಸಂಭವವಿರುತ್ತದೆ.
ವೃಶ್ಚಿಕ: ಕೆಳ ವರ್ಗದವರ ಪೀಡೆಯಿಂದ ಬೇಸರ ಕಂಡು ಬಂದೀತು. ಸ್ತ್ರೀಸೌಖ್ಯ, ಕೀರ್ತಿವೃದ್ಧಿ, ನ್ಯಾಯಾಲಯದಲ್ಲಿ ವಾಗ್ವಾದ ಇದ್ದೀತು. ಸಂತತಿ ವಿಷಯದಲ್ಲಿ ಅನಾರೋಗ್ಯವು ಕಂಡು ಬಂದೀತು. ಜಾಗ್ರತೆ ಮಾಡಿರಿ.
ಧನು: ಎಲ್ಲಾ ವಿಷಯಗಳಲ್ಲೂ ಉತ್ಸಾಹಿತರಾಗಿದ್ದ ನಿಮಗೆ ಸಾಮಾಜಿಕ ಸ್ಥಾನಮಾನಗಳು ಲಭಿಸಲಿದೆ. ಕ್ರೀಡಾಪಟುಗಳಿಗೆ ಇದು ಯಶಸ್ಸಿನ ಕಾಲವಾದೀತು. ಇತರರ ಚುಚ್ಚು ಮಾತಿಗೆ ಕಿವಿಗೊಡದಿರಿ.
ಮಕರ: ಆರೋಗ್ಯದ ಬಗ್ಗೆ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಶತ್ರು ಭಯವು ಕಂಡು ಬರಲಿದೆ. ನೀವು ಕೈಗೊಂಡ ಕಾರ್ಯವು ನಿರಾತಂಕವಾಗಿ ಮುನ್ನಡೆ ಕಂಡೀತು. ಶುಭವಿದೆ.
ಕುಂಭ:ನಿಮಗೆ ಸ್ಥಾನ ಪ್ರಾಪ್ತಿಯ ಸೂಚನೆ ತೋರಿದರೂ ಕೊನೆಗೆ ನಿರಾಶೆ ಕಾಡೀತು. ಪಿತೃ ವಾಕ್ಯಪರಿಪಾಲನೆಗಾಗಿ ಧನವ್ಯಯ ಕಂಡು ಬಂದೀತು. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ತಾಳ್ಮೆ ಇರಲಿ.
ಮೀನ: ಸ್ಥಾನಮಾನ, ಗೌರವಾದಾರಗಳು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಾರ್ಯ ನಿಮಿತ್ತ ದೂರ ಪಯಣ ಕಂಡು ಬಂದೀತು. ಆಹಾರ ವಿಚಾರದಲ್ಲಿ ಸಂಯಮ ಮೀರಿದಲ್ಲಿ ಹೊಟ್ಟೆಗೆ ಅನಾರೋಗ್ಯ ಖಂಡಿತ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
MUST WATCH
ಹೊಸ ಸೇರ್ಪಡೆ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್