ಕೋವಿಡ್ ಬಿಕ್ಕಟ್ಟಿನ ಕಾಲ ಇಂತಹ ಶಿಬಿರಗಳು ಅರ್ಥಪೂರ್ಣ: ಸಂತೋಷ್ ಶೆಟ್ಟಿ
Team Udayavani, Dec 30, 2020, 7:31 PM IST
ಪನ್ವೇಲ್, ಡಿ. 29: ನ್ಯೂ ಪನ್ವೇಲ್ ಕಾಂದಾ ಕಾಲನಿಯ ಕರಾವಳಿ ನ್ಪೋರ್ಟ್ಸ್ ಅಕಾಡೆಮಿ ಮತ್ತು ರಸಾಯನಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ಮೊಹೊಪಾಡಾ ಇವರ ಸಂಯುಕ್ತ ಆಯೋಜನೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರವು ಡಿ. 25ರಂದು
ಬೆಳಗ್ಗೆ 8.30ರಿಂದ ಮಧ್ಯಾಹ್ನದವರೆಗೆ ನ್ಯೂ ಪನ್ವೇಲ್ ಪಶ್ಚಿಮದ ಸೆಕ್ಟರ್-10, ಕಾಂದಾ ಕಾಲನಿಯ ನೀಲ್ ಆರ್ಚಿಡ್ನ ಮಂಗಳೂರ್ ಟ್ಯೂಟೋರಿಯಲ್ಸ್ ಶಾಪ್ ನಂಬರ್-14ರಲ್ಲಿ ನಡೆಯಿತು.
ಶಿಬಿರವನ್ನು ಪನ್ವೇಲ್ನ ಪ್ರಸಿದ್ಧ ವೈದ್ಯ ಡಾ| ದೀಪಕ್ ಪುರೋಹಿತ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಪಿಸಿಎಂಸಿ ಪನ್ವೇಲ್ ಇದರ ಸಭಾಪತಿ, ನಗರ ಸೇವಕ ಸಂತೋಷ್ ಜಿ. ಶೆಟ್ಟಿ ಮಾತನಾಡಿ, ಕರಾವಳಿ ನ್ಪೋರ್ಟ್ಸ್
ಅಕಾಡೆಮಿ ಮತ್ತು ರಸಾಯನಿ ಸೋಶಿ ಯಲ್ ಆ್ಯಂಡ್ ಕಲ್ಚರಲ್ ಅಸೋ ಸಿ ಯೇಶನ್ ಸಂಯುಕ್ತ ಆಯೋಜನೆ ಯಲ್ಲಿ ನಡೆದ ಕಾರ್ಯ ಕ್ರಮವು ಅರ್ಥ ಪೂರ್ಣ ವಾಗಿದೆ. ಇಂದಿನ ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿ ಯಲ್ಲಿ ಇಂತಹ ಸಮಾಜಪರ ವೈದ್ಯಕೀಯ ಸೇವೆ ಇತರ ಸಂಘ- ಸಂಸ್ಥೆಗಳಿಗೆ ಮಾದರಿ ಯಾಗಿದೆ. ಇಂತಹ ಕಾರ್ಯಕ್ರಮ ಗಳಲ್ಲಿ ತುಳು, ಕನ್ನಡಿ ಗರು ಪಾಲ್ಗೊಂಡು ಇದರ ಸದುಪಯೋ ಗವನ್ನು ಪಡೆದು ಕೊಂಡರೆ ಮಾತ್ರ ಕಾರ್ಯ ಕ್ರಮಗಳ ಆಯೋಜನೆ ಸಾರ್ಥ ಕವಾ ಗುತ್ತದೆ. ಸಂಸ್ಥೆ ಗಳಿಂದ ಇನ್ನಷ್ಟು ಸಮಾಜಪರ ಕಾರ್ಯ ಗಳು ನಡೆಯಲಿವೆ. ಅದಕ್ಕೆ ಬೇಕಾಗುವ ಸಹಾಯ, ಸಹಕಾರ ಸದಾ ಇದೆ ಎಂದು ಶುಭ ಹಾರೈಸಿದರು.
ಗೌರವ ಅತಿಥಿಗಳಾಗಿ ಕಾಂದಾಕಾಲನಿಯ ಬಿಜೆಪಿ ಅಧ್ಯಕ್ಷ, ನಗರ ಸೇವಕ ಏಕನಾಥ್ ಗಾಯಕ್ವಾಡ್, ಕರ್ನಾ ಟಕ ಸಂಘ ಪನ್ವೇಲ್ ಅಧ್ಯಕ್ಷ ಧನಂಜಯ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಅತಿಥಿ-ಗಣ್ಯರನ್ನು ಹಾಗೂ ವೈದ್ಯಾಧಿಕಾರಿಗಳನ್ನು ಉಭಯ ಸಂಸ್ಥೆಗಳ ಪದಾಧಿಕಾರಿಗಳು ಪುಷ್ಪಗುತ್ಛ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕರಾವಳಿ ನ್ಪೋರ್ಟ್ಸ್
ಅಕಾಡೆಮಿ ಕಾರ್ಯಾಧ್ಯಕ್ಷ ಮಹಾಬಲ ಟಿ. ಶೆಟ್ಟಿ ರಸಾ ಯನಿ, ಅಧ್ಯಕ್ಷ ಮಹೇಶ್ ಹೆಗ್ಡೆ, ಗೌರವ ಕಾರ್ಯದರ್ಶಿ ಕೆ. ತಾರಾನಾಥ ಶೆಟ್ಟಿ ಕಡೆಕಾರ್, ಕೋಶಾಧಿಕಾರಿ ಸುರೇಶ್ ಎಂ. ಶೆಟ್ಟಿ ಖಾಂದಾಕಾಲನಿ, ಉಪಾಧ್ಯಕ್ಷರಾದ ವಿನೋದ್ ವಿ. ಕಾಮತ್ ಮತ್ತು ವಿಕಾಸ್ ಪಾಟೀಲ್, ಜತೆ ಕಾರ್ಯ ದರ್ಶಿ ನಾಗರಾಜ್ ಪಾಲ್, ಜತೆ ಕಾರ್ಯದರ್ಶಿ ಪ್ರಸಾದ್ ದಲಾಲ್, ಗಣೇಶ್ ಶೆಟ್ಟಿ ಖಾಂದಾಕಾಲನಿ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ರಸಾಯನಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ತುಳು, ಕನ್ನಡಿಗರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶಿಬಿರದಲ್ಲಿ ಪ್ರಸಿದ್ಧ ವೈದ್ಯರಾದ ನೇತ್ರ ತಜ್ಞ ಗಣೇಶ್ ಶೆಟ್ಟಿ, ಡಾ| ಆರತಿ ಮಲಿಕ್, ಡಾ| ಉಮೇಶ್ ಅಮುರುಟ್ಕರ್ ಅವರು ಪಾಲ್ಗೊಂಡು ಸಹಕರಿಸಿದರು. ಶಿಬಿರದಲ್ಲಿ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ, ಪಥೊಲಜಿ ಟೆಸ್ಟ್, ಸಿಬಿಸಿ, ಬ್ಲಿಡ್, ಶುಗರ್ ಟೆಸ್ಟ್, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಿತು. ತುಳು, ಕನ್ನಡಿಗರು ಸಹಿತ ನೂರಾರು ಮಂದಿ ಪಾಲ್ಗೊಂಡು ಉಚಿತ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಅಲ್ಲದೆ ಪರಿಸರದ ಅನೇಕ ಮಂದಿ ರಕ್ತದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್