ಮುಂಬಯಿ: ಚರ್ಮ ದಾನದಲ್ಲಿ ಶೇ. 90ರಷ್ಟು ಇಳಿಕೆ
Team Udayavani, Dec 30, 2020, 7:41 PM IST
ಮುಂಬಯಿ, ಡಿ. 29: ಕಳೆದ ವರ್ಷಕ್ಕೆ ಹೋಲಿ ಸಿದರೆ ಕಳೆದ ಒಂಬತ್ತು ತಿಂಗಳಲ್ಲಿ ಮುಂಬಯಿಯಲ್ಲಿ ಚರ್ಮ ದಾನವು ಶೇ. 90ರಷ್ಟು ಕಡಿಮೆಯಾಗಿದೆ. ಕೋವಿಡ್ ಸೋಂಕು ಜತೆಗೆ ಚರ್ಮ ದಾನದ ಬಗ್ಗೆ ಅರಿವಿನ ಕೊರತೆ ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ತೀವ್ರ ವಾದ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕು ಪ್ರಾರಂಭವಾಗುವ ಮೊದಲು ತಿಂಗಳಿಗೆ ಸುಮಾರು 20 ಚರ್ಮ ದಾನಗಳನ್ನು ಪಡೆಯುತ್ತಿದ್ದೆವು, ಆದರೆ ಈಗ ಅದು 4ಕ್ಕೆ ಇಳಿದಿದೆ ಎಂದು ನ್ಯಾಶನಲ್ ಬರ್ನ್ಸ್ ಸೆಂಟರ್ನ ವೈದ್ಯಕೀಯ ನಿರ್ದೇಶಕ ಡಾ| ಸುನೀಲ್ ಕೆಸ್ವಾನಿ ಹೇಳಿದ್ದಾರೆ.
ನಗರವು ಮೊದಲ ಕೋವಿಡ್ ಪ್ರಕರಣವನ್ನು ವರದಿ ಮಾಡಿದಾಗ ಕೇಂದ್ರವು ಒಂಬತ್ತು ಚರ್ಮ ದಾನಗಳನ್ನು ಪಡೆದಿತ್ತು. ಎಪ್ರಿಲ್ ಮತ್ತು ಆಗಸ್ಟ್ ನಡುವೆ ಚರ್ಮ ಬ್ಯಾಂಕ್ನಲ್ಲಿ ಒಂದೇ ಒಂದು ದಾನವನ್ನು ದಾಖಲಿಸಲಾಗಿಲ್ಲ. ಸೆಪ್ಟಂಬರ್ನಲ್ಲಿ ಐದು ದಾನಗಳನ್ನು ಮಾತ್ರ ದಾಖಲಿಸಲಾಗಿದ್ದು, ಅಕ್ಟೋಬರ್ನಲ್ಲಿ ಮೂರು ಮತ್ತು ನವೆಂಬರ್ನಲ್ಲಿ ಐದು ಚರ್ಮ ದಾನಗಳನ್ನು ಪಡೆಯಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಜನರಲ್ಲಿ ತಪ್ಪು ಕಲ್ಪನೆ ಮತ್ತು ಚರ್ಮ ದಾನದ ಅಗತ್ಯತೆ ಬಗ್ಗೆ ಅರಿವಿನ ಕೊರತೆ ಸಹಿತ ಹಲವಾರು ಅಂಶಗಳಿಂದಾಗಿ ಮುಂಬಯಿಯಾದ್ಯಂತ ಚರ್ಮದ ದಾನ ಕಡಿಮೆಯಾಗಿದೆ. ನಾಗರಿಕರು ತಾವು ಸೋಂಕಿಗೆ ಒಳಗಾಗಬಹುದೆಂಬ ಭಯ ದಿಂದ ತಮ್ಮ ಪ್ರೀತಿಪಾತ್ರರ ಸಾವಿನ ಬಳಿಕ ಚರ್ಮ ವನ್ನು ದಾನ ಮಾಡಲು ಹಿಂಜರಿಯುತ್ತಿ ದ್ದಾರೆ ಎಂದು ಡಾ| ಕೇಸ್ವಾನಿ ಹೇಳಿದ್ದಾರೆ.
ಚರ್ಮ ದಾನವು ತೀವ್ರವಾಗಿ ಸುಟ್ಟ ರೋಗಿ ಗಳ ಚಿಕಿತ್ಸೆ ಯಲ್ಲಿ ಸಹಾಯ ಮಾಡುತ್ತದೆ. ತೀವ್ರ ವಾದ ಸುಟ್ಟ ಗಾಯಗಳ ರೋಗಿಗಳಿಗೆ ಅಲೋ ಗ್ರಾಫ್ಟ್ ಚಿಕಿತ್ಸೆ ಯೊಂದಿಗೆ ಗಾಯವನ್ನು ಮುಚ್ಚಲು ಅಂಗ ದಾನಿಗಳಿಂದ ಪಡೆದ ಚರ್ಮವು ಅಗತ್ಯವಾಗಿರುತ್ತದೆ.
ಚರ್ಮವು ಸೋಂಕನ್ನು ತಡೆಗಟ್ಟಲು, ನೋವು ಕಡಿಮೆ ಮಾಡಲು ಮತ್ತು ರಕ್ಷಣೆ ಯನ್ನು ಒದಗಿಸಲು ಮತ್ತು ವೇಗವಾಗಿ ಚೇತ ರಿಕೆ ಹೊಂದಲು ಸಹಾಯ ಮಾಡುತ್ತದೆ. ಸುಟ್ಟ ಜಾಗ ವನ್ನು ತತ್ಕ್ಷಣ ದಾನ ಮಾಡಿದ ಚರ್ಮದಿಂದ ಮುಚ್ಚದಿದ್ದರೆ, ರೋಗಿಗಳು ಸೋಂಕಿಗೆ ಗುರಿಯಾಗಬಹುದು. ಇದು ಅವರ ಸಾವಿಗೆ ಕಾರಣವಾಗಬಹುದು.
ಭಾರತದಲ್ಲಿ 13 ಚರ್ಮ ಬ್ಯಾಂಕ್ಗಳಿದ್ದು, ಅವುಗಳಲ್ಲಿ ಮೂರು ಮುಂಬಯಿ ಮಹಾನಗರ ಪ್ರದೇಶದ ಎನ್ಬಿಸಿ ಐರೋಲಿ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆ, ಸಯಾನ್ ಮತ್ತು ಮಸಿನಾ ಆಸ್ಪತ್ರೆಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ