ಮುಂಬಯಿ: ಚರ್ಮ ದಾನದಲ್ಲಿ ಶೇ. 90ರಷ್ಟು ಇಳಿಕೆ
Team Udayavani, Dec 30, 2020, 7:41 PM IST
ಮುಂಬಯಿ, ಡಿ. 29: ಕಳೆದ ವರ್ಷಕ್ಕೆ ಹೋಲಿ ಸಿದರೆ ಕಳೆದ ಒಂಬತ್ತು ತಿಂಗಳಲ್ಲಿ ಮುಂಬಯಿಯಲ್ಲಿ ಚರ್ಮ ದಾನವು ಶೇ. 90ರಷ್ಟು ಕಡಿಮೆಯಾಗಿದೆ. ಕೋವಿಡ್ ಸೋಂಕು ಜತೆಗೆ ಚರ್ಮ ದಾನದ ಬಗ್ಗೆ ಅರಿವಿನ ಕೊರತೆ ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ತೀವ್ರ ವಾದ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕು ಪ್ರಾರಂಭವಾಗುವ ಮೊದಲು ತಿಂಗಳಿಗೆ ಸುಮಾರು 20 ಚರ್ಮ ದಾನಗಳನ್ನು ಪಡೆಯುತ್ತಿದ್ದೆವು, ಆದರೆ ಈಗ ಅದು 4ಕ್ಕೆ ಇಳಿದಿದೆ ಎಂದು ನ್ಯಾಶನಲ್ ಬರ್ನ್ಸ್ ಸೆಂಟರ್ನ ವೈದ್ಯಕೀಯ ನಿರ್ದೇಶಕ ಡಾ| ಸುನೀಲ್ ಕೆಸ್ವಾನಿ ಹೇಳಿದ್ದಾರೆ.
ನಗರವು ಮೊದಲ ಕೋವಿಡ್ ಪ್ರಕರಣವನ್ನು ವರದಿ ಮಾಡಿದಾಗ ಕೇಂದ್ರವು ಒಂಬತ್ತು ಚರ್ಮ ದಾನಗಳನ್ನು ಪಡೆದಿತ್ತು. ಎಪ್ರಿಲ್ ಮತ್ತು ಆಗಸ್ಟ್ ನಡುವೆ ಚರ್ಮ ಬ್ಯಾಂಕ್ನಲ್ಲಿ ಒಂದೇ ಒಂದು ದಾನವನ್ನು ದಾಖಲಿಸಲಾಗಿಲ್ಲ. ಸೆಪ್ಟಂಬರ್ನಲ್ಲಿ ಐದು ದಾನಗಳನ್ನು ಮಾತ್ರ ದಾಖಲಿಸಲಾಗಿದ್ದು, ಅಕ್ಟೋಬರ್ನಲ್ಲಿ ಮೂರು ಮತ್ತು ನವೆಂಬರ್ನಲ್ಲಿ ಐದು ಚರ್ಮ ದಾನಗಳನ್ನು ಪಡೆಯಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಜನರಲ್ಲಿ ತಪ್ಪು ಕಲ್ಪನೆ ಮತ್ತು ಚರ್ಮ ದಾನದ ಅಗತ್ಯತೆ ಬಗ್ಗೆ ಅರಿವಿನ ಕೊರತೆ ಸಹಿತ ಹಲವಾರು ಅಂಶಗಳಿಂದಾಗಿ ಮುಂಬಯಿಯಾದ್ಯಂತ ಚರ್ಮದ ದಾನ ಕಡಿಮೆಯಾಗಿದೆ. ನಾಗರಿಕರು ತಾವು ಸೋಂಕಿಗೆ ಒಳಗಾಗಬಹುದೆಂಬ ಭಯ ದಿಂದ ತಮ್ಮ ಪ್ರೀತಿಪಾತ್ರರ ಸಾವಿನ ಬಳಿಕ ಚರ್ಮ ವನ್ನು ದಾನ ಮಾಡಲು ಹಿಂಜರಿಯುತ್ತಿ ದ್ದಾರೆ ಎಂದು ಡಾ| ಕೇಸ್ವಾನಿ ಹೇಳಿದ್ದಾರೆ.
ಚರ್ಮ ದಾನವು ತೀವ್ರವಾಗಿ ಸುಟ್ಟ ರೋಗಿ ಗಳ ಚಿಕಿತ್ಸೆ ಯಲ್ಲಿ ಸಹಾಯ ಮಾಡುತ್ತದೆ. ತೀವ್ರ ವಾದ ಸುಟ್ಟ ಗಾಯಗಳ ರೋಗಿಗಳಿಗೆ ಅಲೋ ಗ್ರಾಫ್ಟ್ ಚಿಕಿತ್ಸೆ ಯೊಂದಿಗೆ ಗಾಯವನ್ನು ಮುಚ್ಚಲು ಅಂಗ ದಾನಿಗಳಿಂದ ಪಡೆದ ಚರ್ಮವು ಅಗತ್ಯವಾಗಿರುತ್ತದೆ.
ಚರ್ಮವು ಸೋಂಕನ್ನು ತಡೆಗಟ್ಟಲು, ನೋವು ಕಡಿಮೆ ಮಾಡಲು ಮತ್ತು ರಕ್ಷಣೆ ಯನ್ನು ಒದಗಿಸಲು ಮತ್ತು ವೇಗವಾಗಿ ಚೇತ ರಿಕೆ ಹೊಂದಲು ಸಹಾಯ ಮಾಡುತ್ತದೆ. ಸುಟ್ಟ ಜಾಗ ವನ್ನು ತತ್ಕ್ಷಣ ದಾನ ಮಾಡಿದ ಚರ್ಮದಿಂದ ಮುಚ್ಚದಿದ್ದರೆ, ರೋಗಿಗಳು ಸೋಂಕಿಗೆ ಗುರಿಯಾಗಬಹುದು. ಇದು ಅವರ ಸಾವಿಗೆ ಕಾರಣವಾಗಬಹುದು.
ಭಾರತದಲ್ಲಿ 13 ಚರ್ಮ ಬ್ಯಾಂಕ್ಗಳಿದ್ದು, ಅವುಗಳಲ್ಲಿ ಮೂರು ಮುಂಬಯಿ ಮಹಾನಗರ ಪ್ರದೇಶದ ಎನ್ಬಿಸಿ ಐರೋಲಿ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆ, ಸಯಾನ್ ಮತ್ತು ಮಸಿನಾ ಆಸ್ಪತ್ರೆಯಲ್ಲಿವೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ
ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ
ಅಲ್ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ