ಸಂಕ್ರಾಂತಿಗೆ ಕೃಷ್ಣನ ಹಾಡು ಅಜೇಯ್ ನಟನೆಯ ಚಿತ್ರ
Team Udayavani, Jan 12, 2021, 2:27 PM IST
ಅಜೇಯ್ ರಾವ್ ನಾಯಕರಾಗಿರುವ “ಕೃಷ್ಣ ಟಾಕೀಸ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಹಾಡೊಂದು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ.
“ಮನಮೋಹನ…’ ಹಾಡು ಬಿಡುಗಡೆಯಾಗುತ್ತಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತವಿದೆ. ಈ ಚಿತ್ರವನ್ನು ಗೋಕುಲ ಎಂಟರ್ಟೈನರ್ ಬ್ಯಾನರ್ನಲ್ಲಿ ಗೋವಿಂದರಾಜು ನಿರ್ಮಿಸಿದ್ದಾರೆ. ವಿಜಯಾನಂದ್ ಈ ಚಿತ್ರದ ನಿರ್ದೇಶಕರು. ಅಜೇಯ್ರಾವ್ ಅವರು ಈ ಚಿತ್ರದಲ್ಲಿ ಒಬ್ಬ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಚಿತ್ರಮಂದಿರವೊಂದರ ಸುತ್ತವೇ ಕಥೆ ಸಾಗುತ್ತದೆ. ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳು ಹೆಚ್ಚಿವೆ.ಚಿತ್ರದಲ್ಲಿ ಅಜೇಯ್ರಾವ್ ಜೊತೆ ಸಿಂಧು ಲೋಕನಾಥ್ ನಟಿಸಿದ್ದು, ಅವರು ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದು ಹಳ್ಳಿ ಹುಡುಗಿ ಪಾತ್ರವಿದ್ದರೂ, ಸದಾ ಸೋಶಿಯಲ್ ಮೀಡಿಯಾಗೆ ಜೋತು ಬೀಳುವ ಪಾತ್ರವಂತೆ. ಇನ್ನು, ಚಿತ್ರದ ಹಾಡೊಂದನ್ನು ರಾಜಸ್ಥಾನದ ಜೋದ್ಪುರ್ನಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲಿನ ಮರುಭೂಮಿ ಹಾಗು ಕೋಟೆ ಸುತ್ತಮುತ್ತಲ ತಾಣದಲ್ಲಿ ನಿರ್ದೇಶಕ ವಿಜಯಾನಂದ್ ಅವರೇ ಬರೆದ “ಮನಮೋಹನ…’ ಹಾಡನ್ನು ಚಿತ್ರೀಕರಿಸಲಾಗಿದೆ. ಮೂರು ದಿನಗಳ ಕಾಲ ನಡೆದ ಆ ಹಾಡಿಗೆ ಮದನ್ ಹರಿಣಿ ಅವರ ನೃತ್ಯ ನಿರ್ದೇಶನವಿದೆ. ಈ ಹಾಡಲ್ಲಿ ಅಜೇಯ್ರಾವ್ ಜೊತೆ ನಾಯಕಿ ಅಪೂರ್ವ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ:ಮಕ್ಕಳ ತಂಟೆಗೆ ಬಂದ್ರೆ ಹುಷಾರ್… ಕೋಡ್ಲು ರಾಮಕೃಷ್ಣ ಹೊಸ ಚಿತ್ರ
ಸಿನಿಮಾ ಬಗ್ಗೆ ಮಾತನಾಡುವ ನಿರ್ಮಾಪಕ ಗೋವಿಂದ ರಾಜು, ಸಿನಿಮಾ ತುಂಬಾ ಚೆನ್ನಾಗಿ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ನೋಡಿದ ನಾಯಕ ಅಜೇಯ್ ರಾವ್ ಖುಷಿಯಾಗಿದ್ದಾರೆ. ಸಿನಿಮಾಕ್ಕೇನು ಬೇಕೋ ಅದನ್ನು ನೀಡೋದು ನನ್ನ ಜವಾಬ್ದಾರಿ. ಅದನ್ನು ನೀಡಿದ್ದೇನೆ ಎನ್ನುತ್ತಾರೆ. ಅಂದಹಾಗೆ, ಚಿತ್ರ ಫೆಬ್ರವರಿಯಲ್ಲಿ ತೆರೆಕಾಣುತ್ತಿದೆ.