ಸಮಸ್ಯೆ ಇಲ್ಲೇ ಪರಿಹಾರ : ಅತೃಪ್ತರಿಗೆ ಶಾ ಖಡಕ್ ಸೂಚನೆ
Team Udayavani, Jan 18, 2021, 5:20 AM IST
ಬೆಳಗಾವಿ: ನಿಮ್ಮ ಸಮಸ್ಯೆಗಳೇನಿದ್ದರೂ ರಾಜ್ಯ ಮಟ್ಟದ ನಾಯಕರ ಜತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅಲ್ಲಿ ನಿವಾ ರಣೆಯಾಗದಿದ್ದರೆ ಅವರೇ ನಮ್ಮ ಬಳಿಗೆ ನಿಮ್ಮನ್ನು ಕರೆತರುತ್ತಾರೆ. ನೀವು ನೇರವಾಗಿ ದಿಲ್ಲಿಗೆ ಬರುವುದು ಬೇಡ…
– ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತೃಪ್ತ ಶಾಸಕರು, ಪದಾಧಿಕಾರಿಗಳಿಗೆ ನೀಡಿರುವ ಖಡಕ್ ಎಚ್ಚರಿಕೆ. ನಗರದಲ್ಲಿ ರವಿವಾರ ಜನಸೇವಕ ಸಮಾವೇಶದ ಅನಂತರ ನಡೆದ ಜಿಲ್ಲಾ ಪ್ರಮುಖ ನಾಯಕರು ಮತ್ತು ಪದಾಧಿಕಾರಿಗಳ ಸಭೆ ನಡೆಸಿದ ಅಮಿತ್ ಶಾ, ಪ್ರತಿಯೊಂದು ಸಮಸ್ಯೆಗೂ ನಮ್ಮ ಬಳಿ ಬರುವುದು ಬೇಡ ಎಂದು ಸ್ಪಷ್ಟ ಸೂಚನೆ ನೀಡಿದರು.
ನಮ್ಮದು ಭಿನ್ನ ಪಕ್ಷ. ಸಂಘಟನೆ ಯಾರಿಗೂ ಶರಣಾಗ ಬಾರದು. ಕುಟುಂಬ ರಾಜ ಕಾರಣ, ಹಣ ಮತ್ತು ತೋಳ್ಬಲ ಮೀರಿ ಸಂಘಟನೆ ಬೆಳೆಯ ಬೇಕು ಎಂದು ಶಾ ಪಕ್ಷದ ನಾಯಕರು ಮತ್ತು ಪದಾಧಿ ಕಾರಿಗಳಿಗೆ ಸಲಹೆ ನೀಡಿದರು.
ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ :
ವಿವಾದಿತ ಹೇಳಿಕೆಗಳಿಂದ ತನಗೆ, ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡುತ್ತಿರುವ ಯತ್ನಾಳ್ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಸಿಎಂ ಬಿಎಸ್ವೈ ಶನಿವಾರ ಕೋರ್ ಕಮಿಟಿ ಸಭೆಯಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇಂದು ಖಾತೆ ಹಂಚಿಕೆ ಸಾಧ್ಯತೆ :
ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆಯಾಗಲಿದ್ದು, ಕೆಲವು ಹಿರಿಯ ಸಚಿವರ ಖಾತೆಗಳು ಬದಲಾವಣೆಯಾಗುವ ಸಾಧ್ಯತೆಯಿದೆ. ಸೋಮವಾರ ಸಂಜೆಯೊಳಗೆ ಖಾತೆ ವಿವರ ಬಹಿರಂಗಗೊಳ್ಳಲಿದೆ.
ಸಿಡಿ ಮಾಹಿತಿ ಪಡೆದ ಶಾ? :
ಶನಿವಾರ ರಾತ್ರಿ ಕೋರ್ ಕಮಿಟಿ ಸಭೆ ಮುಗಿಸಿ ಸಿಎಂ ತೆರಳಿದ ಬಳಿಕ ಅಮಿತ್ ಶಾ ತಮ್ಮ ಕೊಠಡಿಯಲ್ಲಿ ಬಿ.ಎಲ್. ಸಂತೋಷ್, ಸಿ.ಟಿ. ರವಿ, ನಳಿನ್ ಮತ್ತು ಪ್ರಹ್ಲಾದ್ ಜೋಷಿ ಅವರೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿದರು. ಸಿಡಿಯು ಯಡಿಯೂರಪ್ಪ ಅವರಿಗೆ ಸಂಬಂಧಿಸಿದ್ದರಿಂದ ಅವರ ನಿರ್ಗಮನದ ಬಳಿಕ ಚರ್ಚೆ ನಡೆದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್