ರಥಬೀದಿ: ಧರೆಗುರುಳಿತು ಬೃಹತ್‌ ಅಶ್ವತ್ಥ ಮರ


Team Udayavani, Jan 25, 2021, 5:00 AM IST

ರಥಬೀದಿ: ಧರೆಗುರುಳಿತು ಬೃಹತ್‌ ಅಶ್ವತ್ಥ ಮರ

ಮಹಾನಗರ: ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದ ಬೃಹತ್‌ ಅಶ್ವತ್ಥಮರ (ಅರಳೀಮರ) ರವಿವಾರ ಬೆಳಗ್ಗೆ ಧರೆಗುರುಳಿತು. ಪವಾಡವೆಂಬಂತೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸುಮಾರು 300 ವರ್ಷಗಳಿಗೂ ಅಧಿಕ ಹಳೆಯದಾದ ಮರ ರವಿವಾರ ಬೆಳಗ್ಗೆ 8.10ರ ಸುಮಾರಿಗೆ ಬುಡದಿಂದ ಸ್ವಲ್ಪ ಮೇಲ್ಭಾಗದಲ್ಲಿ ಮುರಿದು ಬಿತ್ತು. ಈ ವೇಳೆ ಮರದಡಿ ಇದ್ದ ಒಂದು ಜೆಸಿಬಿ, ಒಂದು ನೀರಿನ ಟ್ಯಾಂಕರ್‌ಗೆ ಹಾನಿಯಾಗಿದೆ. ಇನ್ನೊಂದು ಕಾರಿಗೆ ಕೊಂಬೆಗಳು ತಾಗಿವೆ ಯಾದರೂ ಯಾವುದೇ ಹಾನಿಯಾಗಿಲ್ಲ.

ಸುರಕ್ಷಿತವಾಗಿ ಬಿತ್ತು ! :

ದೇವಸ್ಥಾನದಿಂದ ಮುಂಭಾಗ ಸುಮಾರು ಮೂರು ಮೀಟರ್‌ ದೂರದಲ್ಲಿರುವ ಈ ಮರ ದೇವಸ್ಥಾನದ ಎದುರು ಇರುವ ಖಾಲಿ ಜಾಗಕ್ಕೆ ಬಿದ್ದಿದೆ. ದೇವಸ್ಥಾನದ ಮೇಲೆಯಾಗಲಿ ಅಥವಾ ಅಕ್ಕಪಕ್ಕದ ಕಟ್ಟಡಗಳ ಮೇಲಾಗಲಿ ಬೀಳದೆ ಖಾಲಿ ಜಾಗಕ್ಕೆ ಬಿದ್ದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ದೇವರ ಪವಾಡವಲ್ಲದೆ ಬೇರೇನೂ ಅಲ್ಲ ಎಂದು ಸ್ಥಳದಲ್ಲಿ ಸೇರಿದ್ದ ಭಕ್ತರು ಮಾತನಾಡುತ್ತಿರುವುದು ಕಂಡುಬಂತು.

ಭಾರೀ ಅನಾಹುತ ತಪ್ಪಿತು :

ಅಶ್ವತ್ಥ ಮರದ ಅಕ್ಕಪಕ್ಕ ಸಾಮಾನ್ಯವಾಗಿ ಜನ ಮತ್ತು ವಾಹನ ದಟ್ಟಣೆ ಇರುತ್ತದೆ. ಶನಿವಾರ ಮುಂಜಾನೆ ಅಶ್ವತ್ಥ ಮರದ ಪ್ರದಕ್ಷಿಣೆಗೆ ನೂರಾರು ಮಂದಿ ಬರುತ್ತಾರೆ. ಒಂದು ವೇಳೆ ಆಗ ಉರುಳಿ ಬಿದ್ದಿದ್ದರೆ ಅನಾಹುತವಾಗುತ್ತಿತ್ತು. ಅಲ್ಲದೆ ರವಿವಾರ ಕೂಡ 8.30 ಅನಂತರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚು. ವಾಹನಗಳ ಸಂಖ್ಯೆ ಹೆಚ್ಚಾದಾಗ ಕೆಲವರು ಮರದಡಿ ನಿಲ್ಲಿಸುವ ಸಾಧ್ಯತೆಯೂ ಇತ್ತು. ಆಗಲೂ ಅಪಾಯವಾಗುತ್ತಿತು. ಅಲ್ಲದೆ ಇಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳ ನಿಲುಗಡೆಗೆ ನಿರ್ಬಂಧವೂ ಇತ್ತು. ಅದರಿಂದಾಗಿಯೂ ಇಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಮರ ಬಿದ್ದ ರೀತಿಗೆ ಅಶ್ವತ್ಥ ಕಟ್ಟೆಗೂ ಹಾನಿಯಾಗಿಲ್ಲ. ದೇಗುಲದ ರಥೋತ್ಸವ ಅಥವಾ ಇತರ ಕಾರ್ಯಕ್ರಮಗಳಿದ್ದಾಗ ಘಟನೆ ನಡೆದಿದ್ದರೂ ಅಪಾಯವಿತ್ತು. ಒಟ್ಟಿನಲ್ಲಿ ಯಾರಿಗೂ ದೊಡ್ಡ ಹಾನಿಯನ್ನುಂಟು ಮಾಡದೆ ಮರ ಉರುಳಿದೆ ಎನ್ನುತ್ತಾರೆ ದೇಗುಲದವರು.

ತನ್ನಷ್ಟಕ್ಕೇ ನೆಲಕ್ಕಪ್ಪಳಿಸಿತು :

ರವಿವಾರ ಬೆಳಗ್ಗೆ ಬಲವಾದ ಗಾಳಿ ಇರಲಿಲ್ಲ. ಮರ ತನ್ನಷ್ಟಕ್ಕೇ ನಿಧಾನವಾಗಿ ಟಕ್‌ ಟಕ್‌ ಸದ್ದು ಮಾಡುತ್ತಾ ನೆಲಕ್ಕಪ್ಪಳಿಸಿತು. ಒಂದು ವೇಳೆ ಪಶ್ಚಿಮದಿಂದ ಬಲವಾದ ಗಾಳಿ ಬೀಸಿದ್ದರೆ ಮರ ಬಹುತೇಕ ದೇವಸ್ಥಾನ ಅಥವಾ ಪಕ್ಕದ ಕಟ್ಟಡಗಳ ಮೇಲೆ ಉರುಳಿಬೀಳುವ ಅಪಾಯವೂ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

“10 ವರ್ಷಗಳ ಹಿಂದೆ ಅಂದಾಜಿಸಿದ್ದೆವು’ಮರದ ಸ್ಥಿತಿಗತಿಯನ್ನು ಅವಲೋಕಿಸಿ 8-10 ವರ್ಷಗಳ ಹಿಂದೆಯೇ ದೇಗುಲದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಪ್ರದಕ್ಷಿಣೆಗೆ ಹಳೆಯ ಕಟ್ಟೆಯ ಬದಲು ಹೊಸ ಅಶ್ವತ್ಥ ಕಟ್ಟೆಯನ್ನು ಬಳಕೆ ಮಾಡಲು ಮುಂದಾಗಿದ್ದೆವು. ಆದರೆ ಇದಕ್ಕೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ದೇಗುಲಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿಗಳಿಗೆ ಇದನ್ನೇ ಬಳಕೆ ಮಾಡಲಾಗುತ್ತಿತ್ತು ಎನ್ನುತ್ತಾರೆ ದೇಗುಲದವರು.

ಈ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಅಂದಿನಿಂದಲೂ ಈ ಮರವಿದೆ. ಹಾಗಾಗಿ ಈ ಮರಕ್ಕೆ 300ಕ್ಕೂ ಅಧಿಕ ವರ್ಷಗಳಾಗಿವೆ. ಉರುಳಿ ಬಿದ್ದಿರುವ ಅಶ್ವತ್ಥ ಮರದ ಪಕ್ಕದಲ್ಲೇ ಇನ್ನೊಂದು ಅಶ್ವತ್ಥ ಮರ ಇದೆ. ಹಾಗಾಗಿ ದೇವಸ್ಥಾನಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ತೊಂದರೆಯಾಗದು. ಈಗ ಉರುಳಿಬಿದ್ದಿರುವ ಅಶ್ವತ್ಥ ಮರವಿದ್ದ ಕಟ್ಟೆಯನ್ನು ಏನು ಮಾಡಬೇಕು ಎಂಬ ಬಗ್ಗೆ ಮಠಾಧೀಶರ ಮಾರ್ಗದರ್ಶನದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು.-ಸಿ.ಎಲ್‌. ಶೆಣೈ,  ಆಡಳಿತ ಮೊಕ್ತೇಸರರು, ಶ್ರೀ ವೆಂಕಟರಮಣ ದೇವಸ್ಥಾನ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.