ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!
Team Udayavani, Jan 31, 2021, 8:11 AM IST
31-01-2021
ಮೇಷ: ಅವಿವಾಹಿತರಿಗೆ ಮಂಗಲಕಾರ್ಯದ ಶುಭವಾರ್ತೆ. ವಿವಾಹಿತರಿಗೆ ಸಂತಾನ ಲಾಭದ ಸಂಭ್ರಮವಿದೆ. ಪೋಷಕರ ಆರೋಗ್ಯಕ್ಕಾಗಿ ಖರ್ಚುವೆಚ್ಚ, ಜೊತೆ ಪ್ರಯಾಣವು ಕೂಡಿ ಬರುವುದು. ದಿನಾಂತ್ಯ ಶುಭವಿದೆ.
ವೃಷಭ: ದೂರ ಪ್ರಯಾಣದಿಂದ ಆರೋಗ್ಯ ಹಾನಿಯಾದೀತು. ಗೃಹಾಲಂಕಾರ ಯಾ ಅಭಿವೃದ್ಧಿಯ ಬಗ್ಗೆ ಖರ್ಚು ತಂದೀತು. ವಿವಾಹಿತರಿಗೆ ಸಂತತಿ ಲಾಭವಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನ ಪ್ರಾಪ್ತಿಯೂ, ಭಡ್ತಿಯು ದೊರಕುವುದು.
ಮಿಥುನ: ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಾರದಂತೆ ಜಾಗ್ರತೆ ಮಾಡಿರಿ. ಕಚೇರಿಯಲ್ಲಿ ಕಾರ್ಯಭಾರದ ಹೊರೆಯಿಂದ ಬೇಸರ ಬಂದೀತು. ಸಾಹಸ ಪ್ರವೃತ್ತಿಯವರಿಗೆ ಮುಂಭಡ್ತಿ ಹಾಗೂ ಸೂಕ್ತ ಅವಕಾಶವಿದೆ.
ಕರ್ಕ: ಕೋಪಕ್ಕೆ ಎಡೆಗೊಟ್ಟು ಆಪ್ತೇಷ್ಟರ ಆತ್ಮೀಯತೆಗೆ ಕುತ್ತು ತಂದುಕೊಳ್ಳುವಿರಿ. ಪತ್ನಿಯೊಡನೆ ಮಾತಿಗೆ ಮಾತು ಬೆಳೆದು ಬೇಸರವಾದೀತು. ಆದಾಯವು ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಧೈರ್ಯವಾಗಿರಿ.
ಸಿಂಹ: ಹೊಸದಾದ ಶತ್ರು ಹುಟ್ಟಿ ನಿಮ್ಮ ಕಾರ್ಯಕ್ಕೆ ತಡೆ ತಂದಾನು. ಸಲ್ಲದ ಆರೋಪಕ್ಕೆ ಗುರಿಯಾಗದಿರಿ. ಜಾಗ್ರತೆ. ಪ್ರೇಮ ಪ್ರಕರಣಕ್ಕೆ ಎಡೆಗೊಡಬೇಡಿರಿ. ಮೇಲಾಧಿಕಾರಿಗಳಿಂದ ವಿನಾಕಾರಣ ಪೀಡೆ ಕಂಡುಬರುವುದು. ಶುಭವಿದೆ.
ಕನ್ಯಾ: ಆಶಾಭಂಗವಾಗಿ ಸ್ಥಾನಪಲ್ಲಟ ಯೋಗವೂ ಕಂಡುಬಂದೀತು. ಸಾಹಸದ ಯಾವ ಕೆಲಸಕ್ಕೂ ಕೈಹಾಕದಿರಿ. ಧನವಿನಿಯೋಗವೂ ವಿವೇಚನೆಗೆ ಒಳಗಾಗಲಿ. ಮಿತ್ರನ ಸಹಾಯ, ಬಂಧುಗಳ ಸಹಾಯದಿಂದ ಕಾರ್ಯ ಕೈಗೂಡಲಿದೆ.
ತುಲಾ: ಸ್ವತಂತ್ರ ವೃತ್ತಿಪರರಿಗೂ ಧನಚಿಂತೆ ಕಾಡಲಿದೆ. ದೀರ್ಘಕಾಲೀನ ಧನವಿನಿಯೋಗವು ಫಲ ನೀಡಲಿದೆ. ಗೃಹಕೃತ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದ ಆರೋಗ್ಯದಲ್ಲಿ ಏರುಪೇರು ಇದ್ದೀತು.
ವೃಶ್ಚಿಕ: ಹೊಸ ಉದ್ಯೋಗ ಪ್ರಾಪ್ತಿ ಸಂಭವವಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಂಭವವಿದೆ. ಅನಪೇಕ್ಷಿತ ಸಹಾಯಹಸ್ತ ಮುಂದೆ ಧರ್ಮಸಂಕಟಕ್ಕೆಡೆ ಮಾಡಲಿದೆ. ಕಾರ್ಯ ಬಾಹುಳ್ಯದಿಂದ ದೇಹಭಾದೆ ಕಾಡಲಿದೆ.
ಧನು: ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು. ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು. ಜಾಗ್ರತೆ.
ಮಕರ: ನೂತನ ಕಾರ್ಯಸಿದ್ಧಿ ಇದೆ. ಆದರೂ ಕಾರ್ಯ ವಿಳಂಬವಾದೀತು. ಆಸ್ತಿ ಯಾ ಗೃಹ ಯಾ ನಿವೇಶನ ಖರೀದಿ ಯೋಗ ಕಂಡುಬಂದೀತು. ಗುಡಿ ಕೈಗಾರಿಕೆಯವರಿಗೆ ಅಭಿವೃದ್ಧಿ ಕಂಡುಬರುವುದು. ಆದರೂ ಜಾಗ್ರತೆ ಅಗತ್ಯವಿದೆ.
ಕುಂಭ: ಪುಣ್ಯ ಕಾರ್ಯಗಳಿಗೆ ಸದಾವಕಾಶವಿದೆ. ತೀರ್ಥಯಾತ್ರೆ ಯಾ ಪ್ರವಾಸ ಯಾ ಚಾರಣವೋ ಖುಶಿ ಕೊಡಲಿದೆ. ಪದೇ ಪದೇ ಎಡತಾಕುವ ಹಿತಶತ್ರುಗಳ ಕಾಟದಿಂದ ಬೇಸತ್ತು ಜೀವನವೇ ಸಾಕೆನಿಸಲಿದೆ. ಶುಭವಿದೆ.
ಮೀನ: ಕೈ ಕೆಳಗಿನವರಲ್ಲಿ ಪರಸ್ಪರ ಸಂಘರ್ಷವೇರ್ಪಟ್ಟು ಮನೆ ಕೆಲಸ ಕಾರ್ಯದಲ್ಲಿ ಭಂಗ ಬರಲಿದೆ. ಋಣಭಾರ ಹೆಚ್ಚಾಗಿ ಮಾನ ಹೋಗುವ ಪ್ರಸಂಗ ಎದುರಾದೀತು. ಗೆಳೆಯನ ಸಕಾಲ ಸಹಾಯದಿಂದ ಪಾರಾಗುವಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ