“ಟೆಸ್ಟ್ ಶತಕ’ದ ಹಾದಿಯಲ್ಲಿ ಜೋ ರೂಟ್
Team Udayavani, Feb 2, 2021, 1:59 AM IST
ಚೆನ್ನೈ: ಇಂಗ್ಲೆಂಡಿನ ಇನ್ಫಾರ್ಮ್ ನಾಯಕ ಜೋ ರೂಟ್ ಚೆನ್ನೈನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೈಲುಗಲ್ಲೊಂದನ್ನು ನೆಡಲಿದ್ದಾರೆ. ಇದು ಅವರ 100ನೇ ಟೆಸ್ಟ್ ಪಂದ್ಯವೆಂಬುದು ವಿಶೇಷ.
ಸ್ವಾರಸ್ಯವೆಂದರೆ, ಜೋ ರೂಟ್ ಟೆಸ್ಟ್ ಪದಾರ್ಪಣೆಗೈದದ್ದು, 50ನೇ ಟೆಸ್ಟ್ ಆಡಿದ್ದು… ಎಲ್ಲವೂ ಭಾರತದಲ್ಲೇ. ಇದೀಗ 100ನೇ ಟೆಸ್ಟ್ ಪಂದ್ಯವನ್ನೂ ಭಾರತದಲ್ಲೇ ಆಡುತ್ತಿರುವುದು ಕಾಕತಾಳೀಯ!
ಜೋ ರೂಟ್ 2012ರ ಪ್ರವಾಸದ ವೇಳೆ ನಾಗ್ಪುರದಲ್ಲಿ ಟೆಸ್ಟ್ಕ್ಯಾಪ್ ಧರಿಸಿದ್ದರು. 4 ವರ್ಷಗಳ ಬಳಿಕ ವಿಶಾಖಪಟ್ಟಣದಲ್ಲಿ 50ನೇ ಟೆಸ್ಟ್ ಆಡಿದರು.
ಇಂಗ್ಲೆಂಡಿನ 15ನೇ ಕ್ರಿಕೆಟಿಗ
ರೂಟ್ 100 ಟೆಸ್ಟ್ ಆಡಿದ ಇಂಗ್ಲೆಂಡಿನ 15ನೇ ಕ್ರಿಕೆಟಿಗನೆನಿಸಲಿದ್ದಾರೆ. ಈ ಯಾದಿಯಲ್ಲಿ ಮುಂದಿರುವವರು ಮಾಜಿ ನಾಯಕ ಅಲಸ್ಟೇರ್ ಕುಕ್. ಅವರು 161 ಟೆಸ್ಟ್ ಆಡಿದ್ದಾರೆ. ವೇಗಿ ಜೇಮ್ಸ್ ಆ್ಯಂಡರ್ಸನ್ (157), ಸ್ಟುವರ್ಟ್ ಬ್ರಾಡ್ (144), ಅಲೆಕ್ ಸ್ಟುವರ್ಟ್ (133), ಇಯಾನ್ ಬೆಲ್ (118) ಅನಂತರದ ಸ್ಥಾನದಲ್ಲಿದ್ದಾರೆ.
ಹಾಲಿ ಸಹಾಯಕ ಕೋಚ್ ಗ್ರಹಾಂ ಥೋಪೆì, ಮಾಜಿ ನಾಯಕ ಆ್ಯಂಡ್ರೂ ಸ್ಟ್ರಾಸ್ ಭರ್ತಿ 100 ಟೆಸ್ಟ್ ಆಡಿದ ಆಂಗ್ಲರು.
ಒಂದು ವೃತ್ತ ಪೂರ್ತಿ
ಈ ಕುರಿತು ಪ್ರತಿಕ್ರಿಯಿಸಿದ ಜೋ ರೂಟ್, “ಭಾರತಕ್ಕೆ ಬಂದು ನೂರನೇ ಟೆಸ್ಟ್ ಆಡುವುದರೊಂದಿಗೆ ನನ್ನ ಕ್ರಿಕೆಟ್ ಬದುಕಿನ ವೃತ್ತವೊಂದು ಪೂರ್ತಿಗೊಳ್ಳಲಿದೆ. 2012ರ ಭಾರತ ಪ್ರವಾಸದ ವೇಳೆ ನನಗೆ ಟೆಸ್ಟ್ ಕ್ಯಾಪ್ ಧರಿಸುವ ಅದೃಷ್ಟ ಲಭಿಸಿತ್ತು. ಮೊದಲ ಸರಣಿಯಲ್ಲೇ ನಾನು ಕಲಿತ ಪಾಠ ಅಪಾರ. ಏಶ್ಯದಲ್ಲಿ ಆಡುವುದು, ಸ್ಪಿನ್ ದಾಳಿಯನ್ನು ನಿಭಾಯಿಸುವುದೆಲ್ಲ ದೊಡ್ಡ ಸವಾಲಾಗಿತ್ತು. ಇದೀಗ ಭಾರತದಲ್ಲೇ ನೂರನೇ ಟೆಸ್ಟ್ ಆಡುವ ಯೋಗ ಲಭಿಸಿದೆ. ಈ ಕ್ಷಣಕ್ಕಾಗಿ ಕಾತರಗೊಂಡಿದ್ದೇನೆ’ ಎಂದಿದ್ದಾರೆ.
ಭಾರತದಲ್ಲಿ ಈ ವರೆಗೆ 16 ಟೆಸ್ಟ್ ಆಡಿರುವ ಜೋ ರೂಟ್ 56.84ರ ಸರಾಸರಿಯಲ್ಲಿ 1,421 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 9 ಅರ್ಧ ಶತಕ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ