ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಖ್ಯಾತ ಪಾಪ್ ತಾರೆ ರಿಹಾನಾ v/s ಕಂಗನಾ ?
ರಿಹಾನಾಗೆ ನೀನು ಸುಮ್ಮನಿರು ಮೂರ್ಖಿ ಎಂದು ಜರಿದ ಕಂಗನಾ
Team Udayavani, Feb 3, 2021, 6:39 PM IST
ನವ ದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಉಗ್ರರು ಎಂದು ಬಾಲಿವುಡ್ ನಟಿ ಕಂಗನಾ ಹೇಳಿದ್ದರು.
ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ, ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ರಿಹಾನವರನ್ನು ಮೂರ್ಖಿ ಎಂದು ಕರೆದಿದ್ದರು.
ರೈತರ ಪ್ರತಿಭಟನೆಯ ಬಗ್ಗೆ ಸಿ ಎನ್ ಎನ್ ವರದಿಯನ್ನು ಉಲ್ಲೇಖಿಸಿ, ಇದರ ಬಗ್ಗೆ ನಾವು ಏಕೆ ತುಟಿ ಬಿಚ್ಚುವುದಿಲ್ಲ ಎಂದು ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದರು.
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ಓದಿ : ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ನೀಡಲು ಮಾರ್ಗಸೂಚಿ
ಆ ಬಗ್ಗೆ ಯಾರೂ ಮಾತಾಡುವುದಿಲ್ಲ ಏಕೆಂದರೇ, ಪ್ರತಿಭಟಿಸುತ್ತಿರುವವರು ರೈತರಲ್ಲ, ದೇಶವನ್ನು ವಿಭಜಿಸಲು ಪ್ರಯತ್ನ ಪಡುತ್ತಿರುವ ಭಯೋತ್ಪಾದಕರು. ನೀನು ಸುಮ್ಮನಿರು ಮೂರ್ಖಿ .. ನಾವು ನಿಮ್ಮಂತೆ ಕೈಗೊಂಬೆಗಳ ರೀತಿ ಮಾರಾಟ ಮಾಡುತ್ತಿಲ್ಲ ಎಂದು ಜರೆದಿದ್ದರು.
ಈಗ ಕಂಗನಾ ಮತ್ತೆ ಟ್ವೀಟ್ ನಲ್ಲಿ ಜರೆಯುವುದನ್ನು ಮುಂದುವರೆಸಿದ್ದಾರೆ. ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರನ್ನು ರೈತರ ಪ್ರತಿಭಟನೆಯ ಪರವಾಗಿ ಟ್ವೀಟ್ ಮಾಡಿದ್ದಕ್ಕಾಗಿ ಮೂಕ ಮತ್ತು ಸ್ಪಾಯ್ಟ್ ಬ್ರಾಟ್ ಎಂದು ಕರೆದಿದ್ದಾರೆ.
“ನಾವು ಭಾರತದ #ಫಾರ್ಮರ್ಸ್ ಪ್ರೊಟೆಸ್ಟ್ ಜೊತೆಗೆ ಇರುತ್ತೇವೆ” ಎಂದು ಗ್ರೇಟಾ ಬುಧವಾರ ಟ್ವೀಟ್ ಮಾಡಿದ ಬೆನ್ನಲ್ಲೇ ಈ ರೀತಿಯಾಗಿ ಪ್ರತಿಕ್ರಯಿಸಿದ್ದಾರೆ.
We stand in solidarity with the #FarmersProtest in India.
https://t.co/tqvR0oHgo0— Greta Thunberg (@GretaThunberg) February 2, 2021
“ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವುದರಿಂದ ಭಾರತವು ನವದೆಹಲಿಯ ಸುತ್ತ ಅಂತರ್ಜಾಲವನ್ನು ಕಡಿತಗೊಳಿಸುತ್ತದೆ” ಎಂದು ಗ್ರೇಟಾ ಸಿ ಎನ್ ಎನ್ ವೆಬ್ ಸೈಟ್ ನಲ್ಲಿನ ಸುದ್ದಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದರು.
ಓದಿ :ನಾನು ಇರುವವರೆಗೂ ಜಿ.ಟಿ.ಡಿ ಯನ್ನು ವಾಪಸ್ ಜೆಡಿಎಸ್ಗೆ ಸೇರಿಸಿಕೊಳ್ಳುವುದಿಲ್ಲ: HDK ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ