ಮೊಗವೀರಪಟ್ಣ ಸಮುದ್ರ ತೀರದಲ್ಲಿ ಅಪರೂಪದ ಕಡಲಹಂದಿ ಪತ್ತೆ!
Team Udayavani, Feb 5, 2021, 3:30 AM IST
ಉಳ್ಳಾಲ: ಇಲ್ಲಿನ ಮೊಗವೀರಪಟ್ಣ ಸಮುದ್ರ ತೀರದಲ್ಲಿ ಗುರುವಾರ ಬೃಹತ್ ಗಾತ್ರದ ಕಡಲಹಂದಿ (ಪೊರ್ಪೊಯಿಸ್)ಯ ಕಳೇಬರ ದಡಕ್ಕೆ ಬಂದಿದೆ.
ಆರಂಭದಲ್ಲಿ ಇದನ್ನು ತಿಮಿಂಗಿಲ ಎಂದು ತಿಳಿಯಲಾಗಿತ್ತಾದರೂ ಬಳಿಕ ಕೆಲವು ಹಿರಿಯ ಮೀನುಗಾರರು ಅದು ಕಡಲಹಂದಿ ಎಂದು ಗುರುತಿಸಿದರು. ಒಂದು ಟನ್ಗೂ ಅಧಿಕ ತೂಕದ ಕಳೇಬರವನ್ನು ಹೂಳಬೇಕಾದರೆ ಕ್ರೇನ್ ತರಿಸಬೇಕೆಂಬ ಕಾರಣಕ್ಕೆ ಸ್ಥಳೀಯರು ಸಮುದ್ರಕ್ಕೆ ದೂಡಿದ್ದಾರೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಿಂದಮೀನುಗಾರಿಕಾ ತಜ್ಞರು ಆಗಮಿಸುವ ಮೊದಲೇ ಮೀನು ಸಮುದ್ರ ಪಾಲಾಗಿತ್ತು. ಕೊಳೆತಿರದ ಕಾರಣ ಅದು ಒಂದೆರಡು ದಿನಗಳಿಂದೀಚೆಗೆ ಮೃತಪಟ್ಟಿರಬಹುದು ಎಂದು ಮೀನುಗಾರರು ಹೇಳಿದ್ದಾರೆ.
ಸೂಕ್ಷ್ಮ ಸಂವೇದಿ
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ| ಇಂದ್ರಾಣಿ ಕರುಣಾಸಾಗರ್ ಹೇಳುವಂತೆ, ಡಾಲ್ಫಿನ್ ಹೋಲಿಕೆಯುಳ್ಳ ಕಡಲಹಂದಿಯು ಅತ್ಯಂತ ಸೂಕ್ಷ್ಮ ಸಂವೇದಿಯಾಗಿದ್ದು, ಸಮುದ್ರದೊಳಗಿನ ಮಾಲಿನ್ಯದಿಂದಾಗಿ ಅಥವಾ ಮೀನುಗಾರಿಕೆ ಸಂದರ್ಭ ದೊಡ್ಡ ಬಲೆಗಳಿಗೆ ಸಿಲುಕಿಯೋ ಬೋಟ್ನ ಯಂತ್ರಗಳಿಗೆ ಸಿಲುಕಿಯೋ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ