ಚಳಿ ಕರಗಿ ಉಷ್ಣತೆ ಕಂಡ ಜನವರಿ! ಹವಾಮಾನ ವೈಪರೀತ್ಯಕ್ಕೆ ಗುರಿಯಾದ ಭಾರತ
Team Udayavani, Feb 6, 2021, 5:50 AM IST
ಹೊಸದಿಲ್ಲಿ: ಜನವರಿ ಅಂದರೆ ಅದು ದಟ್ಟ ಚಳಿಗಾಲದ ತಿಂಗಳು. ಆದರೆ, ಈ ವರ್ಷದ ಜನವರಿಯಲ್ಲಿ ದೇಶದ ವಾಯವ್ಯ ಭಾಗ ಹೊರತುಪಡಿಸಿ ಇಡೀ ಭಾರತ “ಅಸಾಮಾನ್ಯ ಬೆಚ್ಚಗಿನ ಉಷ್ಣಾಂಶ’ಕ್ಕೆ ಸಾಕ್ಷಿಯಾಗಿದೆ!
2016, 2009, 1958 ಮತ್ತು 1931ಕ್ಕೆ ಹೋಲಿಸಿದರೆ 2021ರ ಜನವರಿ ದಾಖಲೆಯ 5ನೇ ಅತೀ ಹೆಚ್ಚು ಬೆಚ್ಚಗಿನ ಉಷ್ಣಾಂಶ ಕಂಡಿದೆ. ಹವಾಮಾನ ವೈಪರಿತ್ಯದ ಬಿಸಿ ಇಡೀ ಭಾರತವನ್ನು ತಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
“ವಾಯುವ್ಯ’ಕ್ಕೆ ಎಂದಿನಂತೆ ಚಳಿ: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ವಾಯವ್ಯ ಭಾರತದಲ್ಲಿ ಗರಿಷ್ಠ ಸರಾಸರಿ 11.75 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.22 ಡಿ.ಸೆ. ಕಡಿಮೆ), ಗರಿಷ್ಠ 17.93 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.40 ಡಿ.ಸೆ. ಕಡಿಮೆ), ಕನಿಷ್ಠ 5.57 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.04 ಕಡಿಮೆ) ದಾಖಲಾಗಿದೆ.
ಮಿಕ್ಕೆಡೆ ಭಾರೀ ಏರುಪೇರು: ವಾಯವ್ಯ ಹೊರತಾದ ಭಾರತದಲ್ಲಿ ಜನವರಿಯ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ದಕ್ಷಿಣ ಭಾರತದಲ್ಲಿ ಗರಿಷ್ಠ ಸರಾಸರಿ 26.36 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 1.07 ಡಿ.ಸೆ. ಹೆಚ್ಚು), ಕೇಂದ್ರ ಭಾರತದಲ್ಲಿ ಗರಿಷ್ಠ ಸರಾಸರಿ 21.55 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.87 ಡಿ.ಸೆ. ಹೆಚ್ಚು), ಈಶಾನ್ಯ ಭಾರತದಲ್ಲಿ ಗರಿಷ್ಠ ಸರಾಸರಿ 17.19 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.69 ಡಿ.ಸೆ. ಹೆಚ್ಚು) ದಾಖಲಾಗಿದೆ.
ಈ ಮಧ್ಯೆ, ದಕ್ಷಿಣ ಭಾರತದಲ್ಲಿ ಜನವರಿಯ ಮೊದಲ 2 ವಾರಗಳು ಮೋಡ- ಮಳೆ ವಾತಾವರಣಕ್ಕೆ ಸಾಕ್ಷಿಯಾಗಿತ್ತು ಎಂದೂ ತಿಳಿಸಿದೆ.
ಸಿಡಿಲು ಅಧ್ಯಯನಕ್ಕೆ ಸಂಶೋಧನಾ ಕೇಂದ್ರ
ಸಿಡಿಲು ಸಹಿತ ಮಳೆ ಕುರಿತಾಗಿ ದೇಶದ ಮೊದಲ ಸಂಶೋಧನ ವೇದಿಕೆಯನ್ನು ಒಡಿಶಾದ ಬಾಲಸೋರ್ ನಗರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಐಎಂಡಿ ತಿಳಿಸಿದೆ. ಸಿಡಿಲಿನಿಂದಾಗಿ ಉಂಟಾಗುವ ಸಾವು-ನೋವು ಮತ್ತು ಆಸ್ತಿ ಹಾನಿ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ವೇದಿಕೆ ಸ್ಥಾಪಿಸಲಾಗುತ್ತಿದೆ. ಐಎಂಡಿ ಇದನ್ನು ಡಿಆರ್ಡಿಒ, ಇಸ್ರೋ ಜತೆಗೂಡಿ ನಿರ್ಮಿಸುತ್ತಿದೆ. ಭೋಪಾಲ್ನಲ್ಲೂ ಇಂಥದ್ದೇ ಮಾನ್ಸೂನ್ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಐಎಂಡಿ ಪ್ರಧಾನ ನಿರ್ದೇಶಕ ಡಾ| ಮೃತ್ಯುಂಜಯ ಮೊಹಪಾತ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ