ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ
Team Udayavani, Feb 6, 2021, 2:42 PM IST
ಬಂಗಾರಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ಸಾತ್ವಿಕ ದೇಣಿಗೆ ನೀಡುವಂತೆ ಸಮಸ್ತ ಸಮಾಜ ಬಾಂಧವರಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ತೀರ್ಥಕ್ಷೇತ್ರ ವಿನ್ಯಾಸವು ವಿನಂತಿಸುತ್ತಿದೆ ಎಂದು ಜಿಪಂ ಸದಸ್ಯ ಬಿ.ವಿ.ಮಹೇಶ್ ಹೇಳಿದರು.
ದೇಶಿಹಳ್ಳಿ ವಾರ್ಡ್ನಲ್ಲಿ ಮನೆ ಮನೆಗೂ ತೆರಳಿ ದೇಣಿಗೆ ಸ್ವೀಕರಿಸಿ ಮಾತನಾಡಿದ ಅವರು,ಪಕ್ಷಭೇದ ಮರೆತು ಭಕ್ತರು ದೇಣಿಗೆ ಸಮರ್ಪಣೆ ಮಾಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ :13ರಿಂದ ಸಂತ ಸೇವಾಲಾಲ್ ಜಯಂತಿ
ಪ್ರತಿಯೊಬ್ಬ ಭಕ್ತಾದಿಗಳು ತಮ್ಮ ಕೈಲಾದಷ್ಟು ಹಣ ರೂಪದಲ್ಲಾದರೂ ಸರಿ ಅಥವಾ ಇತರೆ ರೂಪದಲ್ಲಾದರೂ ಸಹಾ ಮಂದಿರಕ್ಕೆ ಸಮರ್ಪಣೆ ಮಾಡಿ. ಆದರೆ ಇದು ಕಡ್ಡಾಯವಾಗಿರುವುದಿಲ್ಲ. ತಮ್ಮ ಸ್ವಯಂ ಇಚ್ಚೆಯಿಂದ ಯಾರು ಬೇಕಾದರೂ ದೇಣಿಗೆ ನೀಡಬಹುದು. ಪುರಸಭೆ ಸದಸ್ಯೆ ಸೌಂದರ್ಯ ಪ್ರಭಾಕರರಾವ್, ಮುಖಂಡರಾದ ಡಿ.ರಾಮಚಂದ್ರ, ಮೇಸ್ತ್ರಿ ರವಿ, ಬಿ.ನಾರಾಯಣ್, ಎಸ್.ಮಂಜುನಾಥ್, ಜೆ.ಜಯಪ್ರಕಾಶ್, ಬಿ.ದಯಾನಂದ್, ಶ್ರೀನಾಥ್, ಮಹೇಂದ್ರ, ಆರ್.ಎಸ್.ಮಂಜುನಾಥ್, ವೆಂಕಟರಾಮ್, ಶಿವು, ಚಂದ್ರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ