ಮೀರಾಗೆ ಕಠಿಣ ಶಿಕ್ಷೆಯಾಗಲಿ
Team Udayavani, Feb 6, 2021, 4:13 PM IST
ಮದ್ದೂರು: ವೈಜ್ಞಾನಿಕ ಸತ್ಯಹೇಳುವ ಪ್ರಗತಿಪರ ಚಿಂತಕ ಪೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದು, ವಕೀಲ ವೃತ್ತಿಯ ಘನತೆಗೆ ಧಕ್ಕೆತರುವಂತೆ ನಡೆದು ಕೊಂಡಿರುವ ವಕೀಲೆ ಮೀರಾರಾಘವೇಂದ್ರ ಎಂಬವರನ್ನು ಬಂಧಿಸಿ, ವಕೀಲ ವೃತ್ತಿಯಿಂದಲೇ ಅಮಾನತು ಮಾಡಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಸರ್ಕಾರವನ್ನು ಆಗ್ರಹಿ ಸಿದ್ದಾರೆ.
ಇದನ್ನೂ ಓದಿ :ರೈತರ ಕಷ್ಟದ ಬಗ್ಗೆ ಗಾಯಕಿ ರಿಹಾನಾ ಗೆ ಗೊತ್ತಾ? ಕಿಡಿಕಾರಿದ ಸಚಿವ ಸದಾನಂದ ಗೌಡ
ಈ ಕುರಿತು ಹೇಳಿಕೆ ನೀಡಿ, ನಾಡಿನ ಶ್ರೇಷ್ಠ ಸಾಹಿತಿ ಮತ್ತು ವೈಜ್ಞಾನಿಕ ಮನೋಭಾವದ ಸಾಹಿತಿಗಳ ಸಾಲಿನಲ್ಲಿ .ಕೆ.ಎಸ್.ಭಗವಾನ್ ಒಬ್ಬರಾಗಿದ್ದಾರೆ. ಶೋಷಿತ ಸಮು ದಾಯದ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಅತ್ಯಾ ಚಾರ, ಅನಾಚಾರ ನಡೆಯುತ್ತಿದೆ. ಅದರ ವಿರುದ್ಧ ಧ್ವನಿ ಎತ್ತದೆ ಸತ್ಯದ ಪರ ಹೋರಾಟ ಮಾಡುವ ಚಿಂತಕರ ಮೇಲೆ ಹೀನಕೃತ್ಯವೆಸಗಿದ್ದಾರೆಂದು ದೂರಿದರು.