ಬಾಲಿವುಡ್ ಕೋಗಿಲೆ ಶ್ರೇಯಾ ಘೋಶಾಲ್ ಅವರ “ಅಂಗನಾ ಮೋರೆ”ಗೆ ಮನಸೋತ ಕೇಳುಗರು
ಕೋವಿಡ್ 19 ಈ ಹಾಡಿನ ಸೃಷ್ಟಿಗೆ ಕಾರಣವಾಯಿತು : ಶ್ರೇಯಾ ಘೋಶಾಲ್
Team Udayavani, Feb 6, 2021, 6:44 PM IST
ಜನಪ್ರಿಯ ಗಾಯಕಿ ಶ್ರೇಯಾ ಘೋಶಾಲ್ ಅವರ ಇತ್ತೀಚಿನ ಸೋಲೋ ಸಾಂಗ್ “ಅಂಗನಾ ಮೋರೆ” ಯೂಟ್ಯೂಬ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸುಮಧುರ ಹಾಡು ಕೇಳುಗನಿಗೆ ಹಿತವಾದ ರಂಜನೆಯ ಪ್ರಭಾವವನ್ನು ಬೀರುತ್ತಿದೆ.
ಶ್ರೇಯಾ ಘೋಶಾಲ್ ಅವರ ಸಹೋದರ ಸೌಮ್ಯದೀಪ್ ಘೋಶಾಲ್ ಅವರ ಸಂಗೀತ ನಿರ್ಮಾಣದೊಂದಿಗೆ ಸ್ವತಃ ಶ್ರೇಯಾ ಬರೆದು, ಸಂಯೋಜಿಸಿ ಹಾಡಿದ್ದಾರೆ.
ನಜೀಫ್ ಮೊಹಮ್ಮದ್ ನಿರ್ದೇಶನದಲ್ಲಿ ಮೂಡಿ ಬಂದ “ಅಂಗನಾ ಮೋರೆ” ಸಮಕಾಲೀನ ನೃತ್ಯ ಪ್ರಕಾರಗಳ ಮೂಲಕ ಕಥೆ ಹೇಳುತ್ತಾ, ಶ್ರೇಯಾ ಅವರ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು, ಸೌಮ್ಯ ದೀಪ್ ಕೂಡ ತೆರೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷ.
ಆಳವಾಗಿ ಪ್ರೀತಿಸುವ ಪ್ರೇಮಿಗಳು ಒಬ್ಬರಿಗೊಬ್ಬರು ಹಾತೊರೆಯುವ ಸನ್ನಿವೇಶವನ್ನು ಕಟ್ಟಿಕೊಡುತ್ತದೆ ಈ ಹಾಡು. ದೂರವಾದ ಪ್ರೇಮದಲ್ಲಿನ ಹುಡುಕಾಟ, ಚಡಪಡಿಕೆ, ನೋವು ಎಲ್ಲವನ್ನೂ ಹೇಳುವಂತೆ ಶ್ರೇಯಾ ಭಾವನಾತ್ಮಕವಾಗಿ ಈ ಹಾಡನ್ನು ಕೇಳುಗನ ಬಾಯಲ್ಲಿ ಮತ್ತೆ ಮತ್ತೆ ಗುನುಗುವಂತೆ ರಚಿಸಿದ್ದಾರೆ.
ಕೋವಿಡ್ 19 ಈ ಹಾಡಿನ ಸೃಷ್ಟಿಗೆ ಕಾರಣವಾಯಿತು : ಶ್ರೇಯಾ ಘೋಶಾಲ್
2020 ಅನೇಕ ಥರದಲ್ಲಿ ನಮ್ಮೆಲ್ಲರನ್ನೂ ಖಿನ್ನತೆಗೆ ದೂಡಿದೆ. ಆದರೇ, ವೈಯಕ್ತಿಕ ಬೆಳವಣಿಗೆಗೆ ಇದು ತುಂಬಾ ಸಹಕಾರಿಯಾಗಿತ್ತು. ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ನಾನು ಒಳ್ಳೆಯ ಹಾಡುಗಳ ಕೇಳುಗಳಾಗಿದ್ದೆ. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಿದ್ದೆ. ಮನೆಯ ಸ್ಟುಡಿಯೋ ದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೆ. ನನ್ನ ಅರೆಶಾಸ್ತ್ರೀಯ ಸಂಗೀತದ ಬೇರುಗಳೊಂದಿಗೆ ಪ್ರತಿಧ್ವನಿಸುವ ಹಾಡೊಂದನ್ನು ರಚಿಸಬೇಕು ಎಂದು ನನ್ನ ಹೃದಯ ಹಂಬಲಿಸುತ್ತಿದ್ದರಿಂದ “ಅಂಗನಾ ಮೋರೆ” ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ ಈ ತಲೆಮಾರಿನ ಭಾರತದ ಮೆಲೋಡಿ ಹಾಡುಗಳ ಕೋಗಿಲೆ ಶ್ರೇಯಾ ಘೋಶಾಲ್.
And its yours now!#AnganaMorey – Out now
An electro pop bandish in collaboration with @soumghoshal Hope you enjoy this audio visual treat!https://t.co/KtQtItb2dl pic.twitter.com/vUdezG8qS2— Shreya Ghoshal (@shreyaghoshal) February 3, 2021
ಒಟ್ಟಿನಲ್ಲಿ, ಘೋಶಾಲ್ ಧ್ವನಿಗೆ ಕೇಳುಗರಂತೂ ಫುಲ್ ಖುಷಿಯಾಗಿದ್ದಾರೆ. ಶ್ರೇಯಾ ಘೋಶಾಲ್ ಆಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಕೇವಲ ಮೂರು ದಿನಗಳಲ್ಲಿ ಮೂರು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯಾಗಿರುವ ಬಾಲಿವುಡ್ ಕೋಗಿಲೆಯ ಈ ಹಾಡು ಕೇಳುಗರ ಮನ ತಣ್ಣಗಾಗಿಸುತ್ತಿದೆ ಎನ್ನುವುದಂತೂ ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ