ಬಾಲಿವುಡ್ ಕೋಗಿಲೆ ಶ್ರೇಯಾ ಘೋಶಾಲ್ ಅವರ “ಅಂಗನಾ ಮೋರೆ”ಗೆ ಮನಸೋತ ಕೇಳುಗರು

ಕೋವಿಡ್ 19 ಈ ಹಾಡಿನ ಸೃಷ್ಟಿಗೆ ಕಾರಣವಾಯಿತು : ಶ್ರೇಯಾ ಘೋಶಾಲ್

Team Udayavani, Feb 6, 2021, 6:44 PM IST

Singer Shreya Ghoshal releases new soulful single, ‘Angana Morey’ – Watch

ಜನಪ್ರಿಯ ಗಾಯಕಿ ಶ್ರೇಯಾ ಘೋಶಾಲ್ ಅವರ ಇತ್ತೀಚಿನ ಸೋಲೋ ಸಾಂಗ್ “ಅಂಗನಾ ಮೋರೆ” ಯೂಟ್ಯೂಬ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸುಮಧುರ ಹಾಡು ಕೇಳುಗನಿಗೆ ಹಿತವಾದ ರಂಜನೆಯ ಪ್ರಭಾವವನ್ನು ಬೀರುತ್ತಿದೆ.

ಶ್ರೇಯಾ ಘೋಶಾಲ್ ಅವರ ಸಹೋದರ ಸೌಮ್ಯದೀಪ್ ಘೋಶಾಲ್ ಅವರ ಸಂಗೀತ ನಿರ್ಮಾಣದೊಂದಿಗೆ ಸ್ವತಃ ಶ್ರೇಯಾ ಬರೆದು, ಸಂಯೋಜಿಸಿ ಹಾಡಿದ್ದಾರೆ.

ನಜೀಫ್ ಮೊಹಮ್ಮದ್ ನಿರ್ದೇಶನದಲ್ಲಿ ಮೂಡಿ ಬಂದ “ಅಂಗನಾ ಮೋರೆ” ಸಮಕಾಲೀನ ನೃತ್ಯ ಪ್ರಕಾರಗಳ ಮೂಲಕ ಕಥೆ ಹೇಳುತ್ತಾ, ಶ್ರೇಯಾ ಅವರ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು, ಸೌಮ್ಯ ದೀಪ್ ಕೂಡ ತೆರೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷ.

ಆಳವಾಗಿ ಪ್ರೀತಿಸುವ ಪ್ರೇಮಿಗಳು ಒಬ್ಬರಿಗೊಬ್ಬರು ಹಾತೊರೆಯುವ ಸನ್ನಿವೇಶವನ್ನು ಕಟ್ಟಿಕೊಡುತ್ತದೆ ಈ ಹಾಡು. ದೂರವಾದ ಪ್ರೇಮದಲ್ಲಿನ ಹುಡುಕಾಟ, ಚಡಪಡಿಕೆ, ನೋವು ಎಲ್ಲವನ್ನೂ ಹೇಳುವಂತೆ ಶ್ರೇಯಾ ಭಾವನಾತ್ಮಕವಾಗಿ ಈ ಹಾಡನ್ನು ಕೇಳುಗನ ಬಾಯಲ್ಲಿ ಮತ್ತೆ ಮತ್ತೆ ಗುನುಗುವಂತೆ ರಚಿಸಿದ್ದಾರೆ.

ಕೋವಿಡ್ 19 ಈ ಹಾಡಿನ ಸೃಷ್ಟಿಗೆ ಕಾರಣವಾಯಿತು : ಶ್ರೇಯಾ ಘೋಶಾಲ್

2020 ಅನೇಕ ಥರದಲ್ಲಿ ನಮ್ಮೆಲ್ಲರನ್ನೂ ಖಿನ್ನತೆಗೆ ದೂಡಿದೆ. ಆದರೇ, ವೈಯಕ್ತಿಕ ಬೆಳವಣಿಗೆಗೆ ಇದು ತುಂಬಾ ಸಹಕಾರಿಯಾಗಿತ್ತು. ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ನಾನು  ಒಳ್ಳೆಯ ಹಾಡುಗಳ ಕೇಳುಗಳಾಗಿದ್ದೆ. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಿದ್ದೆ. ಮನೆಯ ಸ್ಟುಡಿಯೋ ದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೆ. ನನ್ನ ಅರೆಶಾಸ್ತ್ರೀಯ ಸಂಗೀತದ ಬೇರುಗಳೊಂದಿಗೆ ಪ್ರತಿಧ್ವನಿಸುವ ಹಾಡೊಂದನ್ನು ರಚಿಸಬೇಕು ಎಂದು ನನ್ನ ಹೃದಯ ಹಂಬಲಿಸುತ್ತಿದ್ದರಿಂದ “ಅಂಗನಾ ಮೋರೆ” ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ ಈ ತಲೆಮಾರಿನ ಭಾರತದ ಮೆಲೋಡಿ ಹಾಡುಗಳ ಕೋಗಿಲೆ ಶ್ರೇಯಾ ಘೋಶಾಲ್.

ಒಟ್ಟಿನಲ್ಲಿ, ಘೋಶಾಲ್ ಧ್ವನಿಗೆ ಕೇಳುಗರಂತೂ ಫುಲ್ ಖುಷಿಯಾಗಿದ್ದಾರೆ. ಶ್ರೇಯಾ ಘೋಶಾಲ್ ಆಫಿಶಿಯಲ್ ಯೂಟ್ಯೂಬ್  ಚಾನೆಲ್  ನಲ್ಲಿ ಕೇವಲ ಮೂರು ದಿನಗಳಲ್ಲಿ ಮೂರು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯಾಗಿರುವ ಬಾಲಿವುಡ್ ಕೋಗಿಲೆಯ ಈ ಹಾಡು ಕೇಳುಗರ ಮನ ತಣ್ಣಗಾಗಿಸುತ್ತಿದೆ ಎನ್ನುವುದಂತೂ ಸತ್ಯ.

 

 

 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.