ಸೇನಾಪುತ್ರರ ಫೋಟೋದೊಂದಿಗೆ ಪ್ರತಿಭಟನೆ: ಟಿಕಾಯತ್ ಕರೆ
ಆತ್ಮಹತ್ಯೆ ಪತ್ರ ಬರೆದಿಟ್ಟು, ಗಡಿಯಿಂದ 2 ಕಿ.ಮೀ. ದೂರದ ಮರವೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.
Team Udayavani, Feb 8, 2021, 10:30 AM IST
ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿದಿದ್ದು, “ದೇಶದ ಸೇನೆ ಹಾಗೂ ಪೊಲೀಸ್ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ನಿಮ್ಮ ಮಕ್ಕಳ ಫೋಟೋಗಳೊಂದಿಗೆ ಪ್ರತಿಭಟನೆಗೆ ಬನ್ನಿ’ ಎಂದು ರೈತರಿಗೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿ
ದ್ದಾರೆ.
ಸರಕಾರ ನಮ್ಮ ಬೇಡಿಕೆ ಆಲಿಸಲೇಬೇಕು. ಇಲ್ಲದಿದ್ದರೆ ಮುಂದಿನ ಹಂತವಾಗಿ ನಾವೆಲ್ಲರೂ ಸೇನೆಯಲ್ಲಿರುವ ನಮ್ಮ ಮಕ್ಕಳ ಫೋಟೋಗಳೊಂದಿಗೆ ಬಂದು
ಪ್ರತಿಭಟಿಸುತ್ತೇವೆ. ನಮ್ಮ(ರೈತ ರ) ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿದ್ದಾರೆ. ಕಾನೂನು ನೋಟಿಸ್ ಜಾರಿ ಮಾಡುವ ಮೂಲಕ ರೈತರ ಧ್ವನಿ ಹತ್ತಿಕ್ಕಬಹುದು ಎಂದು ಸರಕಾರ ಯೋಚಿಸುವುದು ಬೇಡ ಎಂದೂ ಟಿಕಾಯತ್ ಹೇಳಿದ್ದಾರೆ.
ಕಬ್ಬು, ಆಲೂ, ಹೂವು: ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್, ತಂತಿ ಬೇಲಿ, ನೆಲದಲ್ಲಿ
ಮೊಳೆ ನೆಟ್ಟ ಬೆನ್ನಲ್ಲೇ ಆ ಪ್ರದೇಶದಲ್ಲಿ ರೈತರು ಗುಲಾಬಿ ಹೂವು, ಚೆಂಡು ಹೂವು, ಕಬ್ಬು, ಆಲೂಗಡ್ಡೆ ಸೇರಿದಂತೆ ವಿವಿಧ ಸಸಿಗಳನ್ನು ನೆಟ್ಟಿದ್ದಾರೆ. ಘಾಜಿಪುರದ ನರ್ಸರಿ ಗಳಿಂದ ಈ ಸಸಿಗಳನ್ನು ತಂದು ನೆಡಲಾಗಿದೆ. ಸರಕಾರ ನಮ್ಮ ವಿರುದ್ಧ ದ್ವೇಷ ಕಾರಿದರೂ, ನಾವು ಪ್ರೀತಿಯನ್ನೇ ಹಬ್ಬುತ್ತೇವೆ ಎಂದು ರೈತರು ತಿಳಿಸಿದ್ದಾರೆ.
ಟಿಕ್ರಿ ಗಡಿಯಲ್ಲಿ ರೈತ ಆತ್ಮಹತ್ಯೆ: ದಿಲ್ಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನಕಾರ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರಿಯಾಣದ ಜಿಂದ್ ನವರಾದ
ಕರಂವೀರ್ ಸಿಂಗ್ ( 52) ಆತ್ಮಹತ್ಯೆ ಪತ್ರ ಬರೆದಿಟ್ಟು, ಗಡಿಯಿಂದ 2 ಕಿ.ಮೀ. ದೂರದ ಮರವೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.
“ಮೋದಿ ಸರಕಾರವು ಮಾತುಕತೆಗೆ ಒಂದಾದ ಮೇಲೆ ಒಂದರಂತೆ ದಿನಾಂಕ ನಿಗದಿಪಡಿಸುತ್ತಿದೆಯೇ ಹೊರತು ಈ ಕರಾಳ ಕಾನೂನುಗಳನ್ನು ರದ್ದು ಮಾಡುವುದು ಯಾವಾಗ ಎಂದು ಹೇಳುತ್ತಿಲ್ಲ’ ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ಅಧಿಕಾರಿಗಳಿಗೆ ಕೆನಡಾ ಭದ್ರತೆ ಜ.26ರಂದು ಕೆನಡಾದಲ್ಲಿ ಪ್ರಧಾನಿ ಮೋದಿ ಹಾಗೂ ಅಲ್ಲಿ ರುವ ರಾಯಭಾರ ಕಚೇರಿಗಳ ಅಧಿಕಾರಿಗಳಿಗೆ ಖಲಿ ಸ್ಥಾನ ಪರ ಗುಂಪೊಂದು ಜೀವ ಬೆದರಿಕೆ ಒಡ್ಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಎಚ್ಚೆತ್ತಿದ್ದಾರೆ. ಒಟ್ಟಾವಾ ಮತ್ತು ವ್ಯಾಂಕೋವರ್ ನಲ್ಲಿರುವ ಭಾರತದ ಉನ್ನದ ರಾಜ ತಾಂತ್ರಿಕ ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು