ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ
Team Udayavani, Feb 10, 2021, 3:42 PM IST
ಮೂಡುಬಿದಿರೆ: ಶ್ರೀರಕ್ಷಾ ಗ್ರಾಮೀಣಾಭಿವೃದ್ಧಿ ಒಕ್ಕೂಟ ಪ್ರಾಯೋಜಕತ್ವದಲ್ಲಿ, ಫೆವರ್ಡ್ -ಕ ದಕ್ಷಿಣ ಕನ್ನಡ ಇವರ ಸಹ ಕಾರ, ಧ್ವನಿ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆ ಮೂಡುಬಿದಿರೆಯ ಐದು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು.
ಸ್ವರಾಜ್ಯ ಮೈದಾನ ಬಳಿಯ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಸರಳ ಕರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶಿವಾನಿ ಎಸ್. ಅಂಚನ್, ಪ್ರಸಾದ್, ದೀಕ್ಷಾ, ದರ್ಶನ್ ವಿ. ಪೂಜಾರಿ ಹಾಗೂ ಭೂಮಿಕಾ ಅವರಿಗೆ ಜವನೆರ್ ಬೆದ್ರ ಸಂಘಟನೆ ಅಧ್ಯಕ್ಷ ಅಮರ್ ಕೋಟೆ, ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜು ಮೋಹನ್ ಶೆಟ್ಟಿ, ಟ್ರಸ್ಟಿ ಕೃಷ್ಣ ಶೆಟ್ಟಿ ಟ್ಯಾಬ್ ವಿತರಿಸಿದರು.
ಶ್ರೀರಕ್ಷಾ ಗ್ರಾಮೀಣಾಭಿವೃದ್ಧಿ ಒಕ್ಕೂ ಟದ ಕಾರ್ಯದರ್ಶಿ ಪ್ರಶಾಂತ್ ಜೆ. ಪ್ರಾಸ್ತಾವಿಸಿದರು. ಸದಸ್ಯ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.