ರಥೋತ್ಸವದೊಂದಿಗೆ ಸುತ್ತೂರು ಜಾತ್ರೆಗೆ ತೆರೆ
Team Udayavani, Feb 11, 2021, 3:51 PM IST
ನಂಜನಗೂಡು: ಗ್ರಾಮೀಣ ಸೊಗಡಿನ ಸಂಸ್ಕೃತಿಯ ಜೊತೆಗೆ ಆಧುನಿಕತೆಯ ಅವಿ ಷ್ಕಾರಗಳನ್ನೂ ಪ್ರದರ್ಶಿಸುತ್ತಾ ವಾರಗಳ ಕಾಲ ಲಕ್ಷಾಂತರ ಜನರ ಆಕರ್ಷಣೆ ಕೇಂದ್ರ ವಾಗುತ್ತಿದ್ದ ಸುತ್ತೂರು ಜಾತ್ರೆ ಈ ಬಾರಿ ಒಂದೇ ದಿನಕ್ಕೆ ಧಾರ್ಮಿಕ ಆಚÃ ಣೆಗೆ ಸೀಮಿತವಾಗಿ ಸಂಪನ್ನಗೊಂಡಿದೆ.
ವರ್ಷದಿಂದ ವರ್ಷಕ್ಕೆ ಬಸವತತ್ವ ಹಾಗೂ ದಾಸೋಹವನ್ನು ಹೆಚ್ಚಿಸುತ್ತಲೇ ಬಂದಿದ್ದ ಇಲ್ಲಿನ ಆದಿಗುರು ಶಿವರಾತ್ರೀಶ್ವರ ಜಾತ್ರಾ ಮಹೋñವ Õ ಈ ವರ್ಷ ಕೊರೊನಾ ಹಿನ್ನೆಲೆ ಯಲ್ಲಿ ಸಾಂಪ್ರ ದಾಯಕ ವಾಗಿ ಜರುಗಿತು. ಮಂಗಳವಾರ ಸಂಜೆಯಿ ಂದ ಜಾತ್ರೆ ಆರಂಭ ಗೊಂಡು ಬುಧವಾರ ಉತ್ಸವ ಮೂರ್ತಿ ಯನ್ನು ಮೂಲ ಮಠಕ್ಕೆ ತರುವುದರೊಂದಿಗೆ ಪೂರ್ಣ ಗೊಳಿಸಲಾಯಿತು.
ಬುಧವಾರ ಮುಂಜಾನೆ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಆದಿ ಜಗದ್ಗು ರು ಗಳ ಉತ್ಸವ ಮೂರ್ತಿಗೆ ಧಾರ್ಮಿಕ ಪೂಜೆ ನೆರವೇರಿಸ ಲಾ ಯಿತು. ನಂತರ 10.30ಕ್ಕೆ ಸರಿಯಾಗಿ ಉತ್ಸವ ಮೂರ್ತಿಯನ್ನು ಗದ್ದುಗೆ ಮುಂಭಾಗದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಿ, ಗದ್ದುಗೆ ಆವರಣಕ್ಕೆ ಸಿಮಿತ ವಾಗಿಸಿ ರಥೋತ್ಸವ ನಡೆಸಲಾಯಿತು. ಸಂಜೆ ಶ್ರೀಯವರ ಮೂರ್ತಿಯನ್ನು ಮಠದ ಬಿರುದು ಬಾವಲಿಗ ಳೊಂದಿಗೆ ಮೂಲ ಮಠಕ್ಕೆ ವಾಪಸ್ ಕರೆ ತರುವುದ ರೊಂದಿಗೆ 2021ನೇ ಸಾಲಿನ ಸುತ್ತೂರು ಜಾತ್ರೆಗೆ ಮಂಗಳ ಹಾಡಲಾಯಿತು.
ಇದನ್ನೂ ಓದಿ:ಮದ್ದೂರು ಪುರಸಭೆ ಸದಸ್ಯೆ ಏಕಾಂಗಿ ಪ್ರತಿಭಟನೆ
ಪ್ರತಿ ವರ್ಷ ಬರೋಬ್ಬರಿ ಒಂದು ವಾರಗಳ ಕಾಲ ಅಕ್ಷರದ ಉತ್ಸವದೊಂದಿಗೆ ಆಧುನಿಕ ವಿಜ್ಞಾನದ ಆವಿಷ್ಕಾರಗಳ ಜೊತೆ ಕೃಷಿ, ನಾಟಕ, ದೇಸಿ ಆಟಗಳನ್ನು ನಡೆಸ ಲಾಗುತ್ತಿತ್ತು. ಹತ್ತೂರಿನ ಜಾತ್ರೆಗಿಂತ ಸುತ್ತೂ ರಿನ ಜಾತ್ರೆಯೇ ಲೇಸು ಎಂಬಂತಿದ್ದ ಜಾತ್ರೆ ಈ ಬಾರಿ ಕೇವಲ ಧಾರ್ಮಿಕ ಸಂಪ್ರ ದಾಯಕ ಆಚರಣೆಗೆ ಸೀಮಿತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!