ನಿಮ್ಮ ಇಂದಿನ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು


Team Udayavani, Feb 19, 2021, 8:03 AM IST

horoscope

19-02-2021

ಮೇಷ: ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ರೀತಿಯಲ್ಲಿ ಆಸಕ್ತಿಯು ತೋರಿಬರುವುದು. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಹೆಚ್ಚು ಶ್ರಮ ಪಡಬೇಕಾದೀತು. ಉತ್ತಮ ಧನಾಗಮನವಿದ್ದರೂ ಮನಸ್ಸಿಗೆ ಸಮಾಧಾನವಿಲ್ಲ.

ವೃಷಭ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ದಬ್ಟಾಳಿಕೆಯು ಕಂಡುಬಂದು ಮನಸ್ಸು ರೋಸಿ ಹೋದೀತು. ಸಾಮಾಜಿಕವಾಗಿ ಹಲವು ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ವ್ಯವಧಾನವೇ ದೊರಕದು. ಶುಭವಿದೆ.

ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಸ್ಥಾನಮಾನ, ಗೌರವ, ಪ್ರಶಂಸೆಗೆ ಕುಂದು ಬಾರದು. ಶುಭದಿನಗಳು ಒಂದೊಂದಾಗಿ ಕಂಡುಬಂದು ಸಂತೋಷ ತರುವುದು. ತಾಳ್ಮೆಯಿಂದ ಕಾಯಿರಿ.

ಕರ್ಕ: ಪ್ರಾರಂಭಿಸಿರುವ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಕೈಗೂಡಿ ಸಮಾಧಾನ ತರಲಿದೆ. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು. ಮಿತ್ರರಿಂದ ಸಹಕಾರವು ದೊರೆಯಲಿದೆ.

ಸಿಂಹ: ಉದ್ಯೋಗಿ ಜನರಿಗೆ ಅನಿರೀಕ್ಷಿತವಾಗಿ ಮುಂಭಡ್ತಿಯ ಅವಕಾಶವು ಒದಗಿ ಬರುವುದು. ಆರ್ಥಿಕವಾಗಿ ಖರ್ಚಿನ ಅಂಶವು ಅಧಿಕವಾಗಲಿದ್ದು ಆಲೋಚನೆಗೆ ಆಸ್ಪದ ತರುವುದು. ಒಳ್ಳೆಯ ದಿನಗಳಿವೆ.

ಕನ್ಯಾ: ವ್ಯಾಪಾರಾದಿ ಉದ್ಯಮಗಳಲ್ಲಿ ಲಾಭಾಂಶವು ಹಂತಹಂತವಾಗಿ ಹೆಚ್ಚಲಿದೆ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ಉಂಟಾಗಬಹುದಾದರೂ ಸುಧಾರಿಸಿ ಕೊಂಡು ಹೋಗಬಹುದು. ಬೆಸ್ತರಿಗೆ ಸ್ವಲ್ಪ ಉತ್ತಮವಿದೆ.

ತುಲಾ:ದೇಹಾರೋಗ್ಯದ ಬಗ್ಗೆ ಗಮನಕೊಡಿರಿ. ನೂತನ ಕಾರ್ಯಾರಂಭಕ್ಕೆ ದುಡುಕದಿರಿ. ಅವಿವಾಹಿತರಿಗೆ ಇದು ಉತ್ತಮ ಕಾಲವಲ್ಲ . ತಾಳ್ಮೆ ಸಮಾಧಾನದಿಂದ ಕಾಯುವುದು ಉತ್ತಮ. ಮನಸಂಕಲ್ಪ ಉತ್ತಮವಿರಲಿ.

ವೃಶ್ಚಿಕ: ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಿದರೆ ಕಾರ್ಯದಲ್ಲಿ ಸಫ‌ಲವಾಗುವಿರಿ. ಆಗಾಗ ಅನಾರೋಗ್ಯದ ಅನುಭವವಾದರೂ ಒಟ್ಟಿನಲ್ಲಿ ಆರೋಗ್ಯವು ಉತ್ತಮವಿರುವುದು. ವೃತ್ತಿರಂಗದಲ್ಲಿ ಸ್ಥಾನಮಾನ ದೊರಕೀತು.

ಧನು: ನಿಮ್ಮ ಇಷ್ಟ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆದರೂ ನೆರವೇರಿ ಸಂತೋಷ, ಸುಖಗಳು ದೊರಕಲಿದೆ. ಗೃಹದಲ್ಲಿ ಪತ್ನಿ, ಮಕ್ಕಳಿಂದ ಸಹಕಾರ ದೊರೆತು ಸಮಾಧಾನವಾಗಲಿದೆ. ದಿನವಿಡೀ ದುಡಿತವಿದೆ.

ಮಕರ: ಕೌಟುಂಬಿಕವಾಗಿ ಸಮಾಧಾನವಿದ್ದರೂ ಮನಸ್ಸಿ ನೊಳಗೆ ಚಿಂತೆಗಳು ಕಾಡಲಿವೆ. ನೀವು ಸದಾಕಾಲ ಚಟುವಟಿಕೆಯಿಂದ ಇರುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಇದೆ.

ಕುಂಭ: ಒಮ್ಮೊಮ್ಮೆ ಮನಸ್ಸು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪೇಚಾಡಬೇಕಾದೀತು. ಆರ್ಥಿಕ ಸ್ಥಿತಿ ಒಂದು ಹಂತದಲ್ಲಿ ಅಭಿವೃದ್ಧಿಯಾಗಿ ಹೋಗುತ್ತಲೇ ಇರುತ್ತದೆ. ಆರೋಗ್ಯ ಸ್ಥಿತಿಯು ತೃಪ್ತಿಕರವಾಗಿ ಸಂತಸ.

ಮೀನ: ಯಾವುದೇ ರೀತಿಯ ತಾಪತ್ರಯಗಳಿಗೆ ಸಿಲುಕದಂತೆ ಜಾಗ್ರತೆ ವಹಿಸಿರಿ. ನಿಮ್ಮ ಹಿತಶತ್ರುಗಳು ನಿಮ್ಮನ್ನು ಸಿಲುಕಿಸಿಯಾರು. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ನಿಮ್ಮ ತಾಪತ್ರಯ ಮುಗಿಯದು.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.