ಗ್ರಾಮ ನೈರ್ಮಲ್ಯದಿಂದ ರೋಗ ಮುಕ್ತ
Team Udayavani, Feb 19, 2021, 6:34 PM IST
ಪಾತಪಾಳ್ಯ: ಗ್ರಾಮ ನೈರ್ಮಲ್ಯ ಕಾಪಾಡುವುದರಿಂದ ರೋಗಗಳಿಂದ ಮುಕ್ತರಾಗಬಹುದು ಎಂದು ಪಿಡಿಒ ಎಂ.ವೆಂಕಟರವಣಪ್ಪ ತಿಳಿಸಿದರು.
ತೋಳ್ಳಪಲ್ಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ನಿರ್ಮಿಸುತ್ತಿದ್ದ ಚರಂಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಮಲೀನ ನೀರು ರಸ್ತೆಗೆ ಹರಿಯುವುದರಿಂದ ರಸ್ತೆ ಹಾಳಾಗುತ್ತದೆ. ಉತ್ಪತ್ತಿಯಾದ ಸೊಳ್ಳೆಗಳು ಕಚ್ಚುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಗ್ರಾಮೀಣರು ಮಲೀನ ನೀರು ರಸ್ತೆಗೆ ಹರಿಯದಂತೆ ಎಚ್ಚರಿಕೆ ವಹಿಸಬೇಕು. ನರೇಗಾ ಯೋಜನೆಯಲ್ಲಿ ಮನೆಗೊಂದು ಶೌಚಾಲಯ, ಇಂಗುಗುಂಡಿ ನಿರ್ಮಿಸಿಕೊಳ್ಳಲು ಅನುಕೂಲವಿದ್ದು, ಪ್ರತಿಯೊಬ್ಬರೂ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮದ ಸ್ವತ್ಛತೆ ಕಾಪಾಡಬೇಕೆಂದು ತಿಳಿಸಿದರು.
ಕರವಸೂಲಿಗಾರ ಟಿ.ಎಸ್.ಕೃಷ್ಣಪ್ಪ, ಡಿ.ಇ.ಒ. ಜಿ.ಲಲಿತಮ್ಮ, ಗುಮಾಸ್ತ ಟಿ.ಸಿ.ಚಂದ್ರಶೇಖರರೆಡ್ಡಿ, ಸಿಬ್ಬಂದಿ ಸಿ.ಎ.ನರಸಿಂಮೂರ್ತಿ, ಎ.ಎನ್. ವೆಂಕಟರಾಮ ಹಾಗೂ ಕೂಲಿ ಕಾರ್ಮಿಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್