ಮೂರನೇ ಬಾರಿ ಗುಂಡು ಹೊಡೆದದ್ದು ನಾನು!


Team Udayavani, Feb 20, 2021, 6:32 AM IST

ಮೂರನೇ ಬಾರಿ ಗುಂಡು ಹೊಡೆದದ್ದು ನಾನು!

ಸಾಂದರ್ಭಿಕ ಚಿತ್ರ

ಮುಲ್ಲಾ ನಾಸಿರುದ್ದೀನ್‌ ತಮ್ಮ ಶಿಷ್ಯರೊಂದಿಗೆ ಉತ್ಸವವೊಂದಕ್ಕೆ ಹೊರ ಟಿದ್ದರು. ಬಹಳ ದೊಡ್ಡ ಉತ್ಸವ. ರಾಟೆ ತೊಟ್ಟಿಲು, ಉಯ್ನಾಲೆ- ಹೀಗೆ ಬಗೆಬಗೆಯ ಆಟಗಳು, ಸರ್ಕಸ್‌, ಮಣಿಸರಕಿನ ಅಂಗಡಿಗಳು ಎಲ್ಲವೂ ಅಲ್ಲಿದ್ದವು. ಎಲ್ಲವನ್ನೂ ನೋಡುತ್ತ ನಾಸಿರುದ್ದೀನ್‌ ಮುಂದೆ ಮುಂದೆ… ಶಿಷ್ಯರು ಅವರ ಹಿಂದೆ ಹಿಂದೆ…

ಒಂದು ಕಡೆಯಲ್ಲಿ ಆಟಿಕೆ ಬಂದೂಕಿನಿಂದ ಗುರಿಗೆ ಗುಂಡು ಹೊಡೆಯುವ ಆಟ ಇತ್ತು. ಗೆದ್ದವರಿಗೆ ಒಂದು ವರಹ ಬಹುಮಾನ. ಸುತ್ತಲೂ ಕುತೂಹಲಿಗಳ ದೊಡ್ಡ ಗುಂಪು ನೆರೆದಿತ್ತು.

ಮುಲ್ಲಾ ನಾಸಿ ರುದ್ದೀನ್‌ ಶಿಷ್ಯರ ಜತೆಗೆ ಅಲ್ಲಿಗೆ ತಲುಪಿದರು. “ಇಲ್ಲಿಗೆ ಬನ್ನಿ, ಈ ಆಟದಿಂದ ನಾವು ತುಂಬಾ ಕಲಿಯುವುದಕ್ಕಿದೆ’ ಎಂದರು ಶಿಷ್ಯರನ್ನು ಉದ್ದೇಶಿಸಿ. ಸೂಫಿ ಗುರುಗಳು ಶಿಷ್ಯರಿಗೆ ದೊಡ್ಡ ದೊಡ್ಡ ತಣ್ತೀಗಳನ್ನು ಪಾಠ ಮಾಡುವುದು ಹೀಗೆಯೇ, ಪ್ರತ್ಯಕ್ಷ ಘಟನೆಗಳ ಮೂಲಕ. ನಾಸಿರುದ್ದೀನ್‌ ಬಂದೂಕನ್ನು ಕೈಯಲ್ಲೆತ್ತಿಕೊಂಡು ಗುರಿ ಹಿಡಿದರು.

ಸುತ್ತ ಸೇರಿದ್ದ ಜನರ ಉತ್ಸಾಹ ಹೆಚ್ಚಿತು. ಒಬ್ಬರು ಸೂಫಿ ಗುರುಗಳು ಮತ್ತವರ ಶಿಷ್ಯರು! ಈಗೇನೋ ನಡೆಯುವುದಕ್ಕಿದೆ! ಗುಲ್ಲು ಜೋರಾಯಿತು. ಅಷ್ಟರಲ್ಲಿ ಮುಲ್ಲಾ ನಾಸಿರುದ್ದೀನ್‌ ಹೊಡೆದ ಗುಂಡು ಗುರಿಯಿಂದ ಕೊಂಚ ಕೆಳಗೆ ನಾಟಿತು.

ಗುಂಪು ಗಹಗಹಿಸಿ ನಗಲು ಆರಂಭಿಸಿತು. “ಶ್‌Ï… ಸುಮ್ಮನಿರಿ, ಮೂರ್ಖರಂತೆ ಆಡಬೇಡಿ. ಇದು ಕೀಳರಿಮೆ ಹೊಂದಿರುವ ವ್ಯಕ್ತಿಗೆ ಉದಾಹರಣೆ. ಕೀಳರಿಮೆ ಹೊಂದಿರು ವಾತ ತಾನು ಸಮರ್ಥನಿದ್ದರೂ ಅಂಜಿ ಅಳುಕಿ ಪ್ರಯತ್ನಿಸುತ್ತಾನೆ. ಆದ್ದರಿಂದ ಗುರಿ ತಲುಪಲು ವಿಫ‌ಲನಾಗುತ್ತಾನೆ…’ ಎಂದರು ಮುಲ್ಲಾ ನಾಸಿರುದ್ದೀನ್‌.

ಗುಂಪು ಮೌನವಾಯಿತು. ಎಂಥ ಸತ್ಯವಾದ ಮಾತು ಎಂದುಕೊಂಡರು ಎಲ್ಲರೂ.

ಈಗ ಮುಲ್ಲಾ ನಾಸಿರುದ್ದೀನ್‌ ಇನ್ನೊಂದು ಬಾರಿ ಬಂದೂಕು ಎತ್ತಿದರು. ಈಗ ಹೊಡೆದ ಗುಂಡು ಗುರಿಯಿಂದ ಕೊಂಚ ಮೇಲಕ್ಕೆ ನಾಟಿತು. ಜನರು ಮತ್ತೆ ಗಹಗಹಿಸಿ ನಕ್ಕರು.

“ಮೂರ್ಖರೆ, ಸುಮ್ಮನಿರಿ. ಇದು ಮೇಲರಿಮೆ ಹೊಂದಿರುವ ವ್ಯಕ್ತಿಗೆ ಉದಾಹರಣೆ. ಆತ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾನೆ, ತನ್ನಿಂದ ಎಲ್ಲವೂ ಸಾಧ್ಯ ಎಂದುಕೊಳ್ಳುತ್ತಾನೆ. ಹಾಗಾಗಿ ಸೋಲುತ್ತಾನೆ…’

ನಿಜ, ನಿಜ ಅಂದುಕೊಂಡಿತು ಜನರ ಗುಂಪು.

ಮುಲ್ಲಾ ನಾಸಿ ರುದ್ದೀನ್‌ ಮೂರನೇ ಬಾರಿ ಬಂದೂಕು ಎತ್ತಿ ಕೊಂಡು ಗುರಿ ಹಿಡಿದರು. ಈ ಬಾರಿ ಗುಂಡು ಗುರಿಯನ್ನು ಸೇರಿತು. ಗುಂಪು ಮೌನವಾಗಿ ನಿರೀಕ್ಷಿಸಿತು, ಈಗ ಮುಲ್ಲಾ ನಾಸಿರುದ್ದೀನ್‌ ಹೇಳುವ ಪಾಠವೇನು?

ಆದರೆ ಮುಲ್ಲಾ ನಾಸಿರುದ್ದೀನ್‌ ಏನೂ ಹೇಳದೆ ಆಟದ ಯಜಮಾನನ ಬಳಿ ಬಹುಮಾನ ಕೊಡಯ್ನಾ ಎಂದು ಕೇಳಿದರು. “ಆದರೆ ಬಹುಮಾನ ಕೊಡುವುದು ಹೇಗೆ ಸಾಧ್ಯ? ಎರಡು ಬಾರಿಯ ಪ್ರಯತ್ನ ವಿಫ‌ಲವಾಗಿದೆಯಲ್ಲ’ ಎಂದ ಆತ.

ಮುಲ್ಲಾ ನಾಸಿರುದ್ದೀನ್‌, “ಅದು ಹೇಗಾಗುತ್ತದೆ? ಮೊದಲ ಬಾರಿ ಕೀಳರಿಮೆಯ ವ್ಯಕ್ತಿ ಗುಂಡು ಹೊಡೆದದ್ದು. ಎರಡನೆಯ ಬಾರಿ ಗುಂಡಿಕ್ಕಿದ್ದು ಮೇಲರಿಮೆ ಹೊಂದಿದಾತ. ಈಗ ಮೂರನೇ ಬಾರಿ ಗುಂಡು ಹಾರಿಸಿದ್ದು ಮಾತ್ರ ನಾನು, ಮುಲ್ಲಾ ನಾಸಿರುದ್ದೀನ್‌…’ ಎಂದು ವಾದಿಸಿದರು!

ನಮ್ಮೆಲ್ಲರ ಆಲೋಚನ ಕ್ರಮ, ವಾದಿಸುವ ಕ್ರಮ ಹೀಗೆಯೇ! ಪ್ರತೀ ಸನ್ನಿವೇಶದಲ್ಲಿಯೂ ಸೋಲು ಎದುರಾ ದಾಗ ವಿಧಿ, ದೇವರು, ಸಮಾಜ, ಸನ್ನಿವೇಶ… ಹೀಗೆ ತಪ್ಪನ್ನು, ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಗೆಲುವು ಎದುರಾದಾಗ ಮಾತ್ರ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ಸೋಲಿನ ಹೊಣೆ ಹೊತ್ತುಕೊಳ್ಳಲು ನಮ್ಮ ಅಹಂ ಸಿದ್ಧವಿಲ್ಲ.

ಅಹಂಗೆ ಆಹಾರ ಕೊಡುವುದನ್ನು ನಿಲ್ಲಿಸಿ. ಅದನ್ನು ಸುಮ್ಮನೆ ಗಮನಿಸಿ. ಆಹಾರ ಕೊಡದೆ ಇದ್ದರೆ ಅದು ನಿಧಾನವಾಗಿ ಸತ್ತುಹೋಗುತ್ತದೆ.

( ಸಾರ ಸಂಗ್ರಹ)

ಟಾಪ್ ನ್ಯೂಸ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.