ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಪೃಥ್ವಿ ಶಾ ಶತಕ; ಮುಂಬಯಿಗೆ ಸುಲಭ ಜಯ
Team Udayavani, Feb 21, 2021, 11:35 PM IST
ಜೈಪುರ: ಬಿಗಿಯಾದ ಬೌಲಿಂಗ್ ಹಾಗೂ ಆರಂಭಕಾರ ಪೃಥ್ವಿ ಶಾ ಅವರ ಶತಕ ಸಾಹಸದಿಂದ ಈ ಬಾರಿಯ “ವಿಜಯ್ ಹಜಾರೆ ಟ್ರೋಫಿ’ ಕೂಟ ವನ್ನು ಮುಂಬಯಿ ಗೆಲುವಿನೊಂದಿಗೆ ಆರಂಭಿಸಿದೆ. ರವಿವಾರ ಜೈಪುರದಲ್ಲಿ ನಡೆದ ದಿಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬಯಿ 7 ವಿಕೆಟ್ಗಳ ಸುಲಭ ಜಯ ಗಳಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ದಿಲ್ಲಿಗೆ 50 ಓವರ್ಗಳಲ್ಲಿ ಗಳಿಸಲು ಸಾಧ್ಯವಾದದ್ದು 7ಕ್ಕೆ 211 ರನ್ ಮಾತ್ರ. ಮುಂಬಯಿ ಕೇವಲ 31.5 ಓವರ್ಗಳಲ್ಲಿ 3 ವಿಕೆಟಿಗೆ 216 ರನ್ ಹೊಡೆದು ಗೆದ್ದು ಬಂದಿತು. ಪೃಥ್ವಿ ಶಾ 89 ಎಸೆತಗಳಿಂದ ಅಜೇಯ 105 ರನ್ (15 ಬೌಂಡರಿ, 2 ಸಿಕ್ಸರ್), ಭಾರತದ ಟಿ20 ತಂಡಕ್ಕೆ ಆಯ್ಕೆಯಾದ ಸೂರ್ಯಕುಮಾರ್ ಯಾದವ್ 33 ಎಸೆತಗಳಿಂದ 50 ರನ್ (6 ಬೌಂಡರಿ, 2 ಸಿಕ್ಸರ್), ನಾಯಕ ಶ್ರೇಯಸ್ ಅಯ್ಯರ್ 39 ರನ್ ಹೊಡೆದರು.
ದಿಲ್ಲಿ ಆರಂಭ ಅತ್ಯಂತ ಶೋಚನೀಯವಾಗಿತ್ತು. ಆರಂಭಿಕರಾದ ಶಿಖರ್ ಧವನ್ ಮತ್ತು ಅನುಜ್ ರಾವತ್ ಖಾತೆ ತೆರೆಯದೆ ರನೌಟ್ ಆದರು. 32 ರನ್ ಆಗುವಷ್ಟರಲ್ಲಿ 6 ವಿಕೆಟ್ ಹಾರಿ ಹೋಯಿತು. ಆದರೆ ವನ್ಡೌನ್ ಬ್ಯಾಟ್ಸ್ಮನ್ ಹಿಮ್ಮತ್ ಸಿಂಗ್ ಅಜೇಯ 106 ರನ್ ಬಾರಿಸಿದ್ದರಿಂದ (145 ಎಸೆತ, 6 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಕೆಳ ಕ್ರಮಾಂಕದಲ್ಲಿ ಶಿವಾಂಕ್ ವಶಿಷ್ಠ 55 ರನ್ ಮಾಡಿ ಹಿಮ್ಮತ್ ಸಾಹಸದಲ್ಲಿ ಕೈ ಜೋಡಿಸಿದರು.
ಮುಂಬಯಿ ಪರ ಧವಳ್ ಕುಲಕರ್ಣಿ 3, ಶಮ್ಸ್ ಮುಲಾನಿ 2 ವಿಕೆಟ್ ಕಿತ್ತರು.
ಉಳಿದ ಪಂದ್ಯಗಳ ಫಲಿತಾಂಶ
– ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರಕ್ಕೆ 3 ವಿಕೆಟ್ ಜಯ
– ಸರ್ವೀಸಸ್ ವಿರುದ್ಧ ಬಂಗಾಲಕ್ಕೆ 70 ರನ್ ಜಯ
– ಹರ್ಯಾಣ ವಿರುದ್ಧ ಚಂಡೀಗಢಕ್ಕೆ 3 ವಿಕೆಟ್ ಜಯ
– ಹಿಮಾಚಲ ವಿರುದ್ಧ ಮಹಾರಾಷ್ಟ್ರಕ್ಕೆ 59 ರನ್ ಜಯ
– ಪುದುಚೆರಿ ವಿರುದ್ಧ ರಾಜಸ್ಥಾನಕ್ಕೆ 6 ವಿಕೆಟ್ ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ