38% ಮಂದಿಯಲ್ಲಿ ಜನನ ಪ್ರಮಾಣ ಪತ್ರ ಇಲ್ಲ


Team Udayavani, Jan 11, 2020, 5:01 AM IST

54

ಸಾಂದರ್ಭಿಕ ಚಿತ್ರ

ನಮ್ಮ ಪೌರತ್ವವನ್ನು ಸಾಬೀತುಪಡಿಸುವಂತಹ ದಾಖಲೆಗಳಲ್ಲಿ ಪ್ರಮುಖವಾದ ಜನನ ಪ್ರಮಾಣ ಪತ್ರಗಳು ದೇಶದ ಸುಮಾರು ಶೇ. 38ರಷ್ಟು ಮಂದಿಯಲ್ಲಿ ಇಲ್ಲ. ಜನಿಸಿದ ದಾಖಲೆಗಾಗಿ ಕೊಡಲ್ಪಡುವ ಜನನ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಜನ ಉತ್ಸುಕರಾಗಿಲ್ಲ. 2000ನೇ ಇಸವಿ ಬಳಿಕ ಕಡಿಮೆಯಾಗಿದ್ದರೂ, ಶೇ. 100ರಷ್ಟು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ನಮ್ಮ ಪೌರತ್ವ ಸಾಬೀತು ಮಾಡುವ ಸಂದರ್ಭ ಬಂದಾಗ ಮಹತ್ವದ ದಾಖಲೆಯಿಂದ ವಂಚಿತರಾಗುತ್ತಿದ್ದಾರೆ.

2015-16ರಲ್ಲಿ ಜನಿಸಿದವರ ಪೈಕಿ ಕೇವಲ 62.3ರಷ್ಟು ಮಂದಿ ಯಲ್ಲಿ ಮಾತ್ರ ಜನನ ಪ್ರಮಾಣ ಪತ್ರ ಇದೆ ಎಂದು ವರದಿಯೊಂದು ಹೇಳಿದೆ. ಅಂದರೆ 5 ಮಕ್ಕಳಲ್ಲಿ 3 ಮಕ್ಕಳು ಮಾತ್ರ ಇದನ್ನು ಪಡೆಯುತ್ತಿದ್ದಾರೆ.

ಈ ಹಿಂದಿಗಿಂತ‌ ಚೇತರಿಕೆ
ಜನನ ದಾಖಲಾತಿಗಳಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. 2000ನೇ ಇಸವಿ ಮತ್ತು 2017ರ ನಡುವೆ ಬಹುದೊಡ್ಡ ಬದಲಾವಣೆ ಆಗಿದೆ.

ದಾಖಲಾಗುತ್ತಿಲ್ಲ
ಜನನ ಮತ್ತು ಮರಣಗಳನ್ನು ದಾಖಲಾಗುವ ಸಂಖ್ಯೆಯೂ ಕಡಿಮೆಯಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆಯಾದ ಸಂದರ್ಭ ಹೆತ್ತವರು ಜನನ ಪ್ರಮಾಣ ಪತ್ರವನ್ನು ಪಡೆಯಲು ನಿರಾಸಕ್ತಿ ತೋರಿ ಸುತ್ತಿದ್ದಾರೆ. ಇನ್ನು ಮನೆಯಲ್ಲೇ ಹೆರಿಗೆಗಳಾದ ಸಂದರ್ಭವೂ ಜನನ ಪ್ರಮಾಣ ಪತ್ರಗಳತ್ತ ಜನರ ಚಿತ್ತ ಹರಿಯುತ್ತಿಲ್ಲ. ಮರಣ ಪ್ರಮಾಣ ಪತ್ರ ಮಾಡಿಸುವುದು ಕಡ್ಡಾಯವಾಗಿದೆ.

21 ದಿನಗಳು
ಮಗುವೊಂದು ಜನಿಸಿದರೆ ಅಥವಾ ವ್ಯಕ್ತಿಯೊಬ್ಬ ಮೃತಪಟ್ಟ 21 ದಿನಗಳೊಳಗೆ ಸಂಬಂಧ ಪಟ್ಟ ಪ್ರಮಾಣ ಪತ್ರವನ್ನು ಮಾಡಿ ಸುವುದು ಕಡ್ಡಾಯವಾಗಿದೆ. ಬಳಿಕವೂ ತಾಲೂಕು ಕೇಂದ್ರದಲ್ಲಿ ಮಾಡಿಸಬಹುದಾಗಿದೆ.

ಯುನಿಸೆಫ್ ವರದಿ
ಭಾರತ ಸೇರಿದಂತೆ ಕಾಂಗೋ, ಇಥಿಯೋಪಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಜನನ ನೋಂದಣಿಗಳು ಸರಿಯಾಗಿ ದಾಖಲಾಗುತ್ತಿಲ್ಲ. 5 ವರ್ಷಗಳಲ್ಲಿ ಈ ದೇಶಗಳ ಒಟ್ಟು 166 ಮಿಲಿಯನ್‌ ಮಕ್ಕಳ ಜನನ ನೋಂದಣಿಯಾಗಿಲ್ಲ ಎಂದು 2019ರ ಯುನಿಸೆಫ್ ಹೇಳಿತ್ತು.

ಎಲ್ಲಿ ಕಡಿಮೆ (ಶೇ.ಗಳಲ್ಲಿ)
ಉತ್ತರ ಪ್ರದೇಶ (61.5), ಬಿಹಾರ (73.7), ಮಧ್ಯಪ್ರದೇಶ (74.6) ಮತ್ತು ಜಮ್ಮು ಕಾಶ್ಮೀರ (78.6) ಇಲ್ಲಿ ದೇಶದ ಸರಾಸರಿ ಗಿಂತ ಕಡಿಮೆ ದರದಲ್ಲಿ ಜನನ ನೋಂದಣಿಗಳು (2017ರ ವರದಿ ಪ್ರಕಾರ) ನಡೆಯುತ್ತಿದೆ.


ಶೇ. 41.4
5ರಲ್ಲಿ 2 ಮಕ್ಕಳ ಹೆತ್ತವರು ಅನಕ್ಷರಸ್ಥರಾಗಿದ್ದು, ಅವರಲ್ಲಿ ಶೇ. 41.4ರಷ್ಟು ಮಂದಿ ಜನನ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪದವಿ ವಿದ್ಯಾಭ್ಯಾಸ ಹೊಂದಿದವರಲ್ಲಿ ಶೇ. 77.6ರಷ್ಟು ಮಂದಿ ತಮ್ಮ ಮಕ್ಕಳ ಜನನ ನೋಂದಣಿ ಮಾಡಿಸಿದ್ದಾರೆ.

ಅಸ್ಸಾಂನಲ್ಲಿ ಜನನ ಪ್ರಮಾಣ ಪತ್ರ
ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಯಲ್ಲಿ ಜನನ ಪ್ರಮಾಣ ಪತ್ರಗಳನ್ನು ಕೇಳಲಾಗಿತ್ತು. ಇದರ ಜತೆಗೆ ಆಧಾರ್‌, ವೋಟರ್‌ ಐಡಿ, ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ವಿಮಾ ದಾಖಲೆಗಳು, ಶಾಲಾ ದಾಖಲಾತಿಗಳನ್ನು ನೀಡಲಾಗಿತ್ತು. ಇವುಗಳಿಗೆ ಮೂಲವಾಗಿ ಜನನ ಪ್ರಮಾಣ ಪತ್ರವನ್ನು ಬಳಸಲಾಗಿತ್ತು.

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kargil ವಿಕ್ರಮಕ್ಕೆ 25 ವರ್ಷ; 2 ತಿಂಗಳು 3 ವಾರ 2 ದಿನಗಳ ಕಾಲದ ಹೋರಾಟದ ರೋಚಕ ಕ್ಷಣಗಳು…

Kargil ವಿಕ್ರಮಕ್ಕೆ 25 ವರ್ಷ; 2 ತಿಂಗಳು 3 ವಾರ 2 ದಿನಗಳ ಕಾಲದ ಹೋರಾಟದ ರೋಚಕ ಕ್ಷಣಗಳು…

Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

Andhra ಅಮರಾವತಿಗೆ 15000 ಕೋಟಿ; ಮಿತ್ರ ಪಕ್ಷ ಟಿಡಿಪಿ ಒತ್ತಡಕ್ಕೆ ಬಾಗಿದ ಬಿಜೆಪಿ

Andhra ಅಮರಾವತಿಗೆ 15000 ಕೋಟಿ; ಮಿತ್ರ ಪಕ್ಷ ಟಿಡಿಪಿ ಒತ್ತಡಕ್ಕೆ ಬಾಗಿದ ಬಿಜೆಪಿ

Budget 2024; paperless tax system soon

Budget 2024; ಶೀಘ್ರ ಕಾಗದ ರಹಿತ ತೆರಿಗೆ ವ್ಯವಸ್ಥೆ

Union Budget ದೇಶದಲ್ಲಿ ಬರಲಿದೆ ಹವಾಮಾನ ತೆರಿಗೆ ವ್ಯವಸ್ಥೆ!

Union Budget ದೇಶದಲ್ಲಿ ಬರಲಿದೆ ಹವಾಮಾನ ತೆರಿಗೆ ವ್ಯವಸ್ಥೆ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.