Festival; “ಮಕರ ಸಂಕ್ರಮಣ’ವೆಂಬ ಮಹಾ ಪರ್ವಕಾಲ


Team Udayavani, Jan 14, 2024, 6:30 AM IST

Festival; “ಮಕರ ಸಂಕ್ರಮಣ’ವೆಂಬ ಮಹಾ ಪರ್ವಕಾಲ

ಮಕರ ಸಂಕ್ರಾಂತಿಯೆಂದರೆ ಬಹುವಿಶೇಷ. ಮಕರ ಸಂಕ್ರಮಣದಿಂದ ಉತ್ತರಾಯಣ ಪುಣ್ಯಕಾಲ ಆರಂಭ. ಈ ಬಾರಿ ಕೆಲವೆಡೆ ಜ.14 ಹಾಗೂ ಜ. 15 ರಂದು ಆಚರಿಸಲಾಗುತ್ತಿದೆ.

ಭಾರತೀಯ ಖಗೋಲ ಶಾಸ್ತ್ರವು ಪ್ರಪಂಚದಲ್ಲೇ ಅತೀ ಪುರಾತನ ಮತ್ತು ವೈಶಿಷ್ಟ್ಯ ಪೂರ್ಣವೆನಿಸಿದ್ದು “ವಿಶ್ವ ಮಾರ್ಗದರ್ಶಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಖಗೋಲ ಶಾಸ್ತ್ರದಲ್ಲಿ ವಿಶ್ವಚಕ್ಷುವಾದ ಸೂರ್ಯನ ಪಥವನ್ನು ಕ್ರಾಂತಿ ವೃತ್ತ ಎಂದು ಸ್ಪಷ್ಟಗೊಳಿಸಿ ಈ ಕ್ರಾಂತಿ ವೃತ್ತವನ್ನು ಹನ್ನೆರಡು ಸಮಭಾಗಗಳಾಗಿ ವಿಭಜಿಸಿ ದ್ವಾದಶ ರಾಶಿ ನಾಮದಿಂದ ಕರೆಯುತ್ತಾರೆ. ಒಂದೊಂದು ರಾಶಿಗೂ 30 ಡಿಗ್ರಿಯ ಪ್ರಮಾಣ ವನ್ನೂ ನಿಗದಿಗೊಳಿಸಿ 12 ರಾಶಿಗಳಿಗೆ ಒಟ್ಟು 360 ಡಿಗ್ರಿ ಪ್ರಮಾಣವನ್ನು ನಿರೂಪಿಸಲಾಗಿದೆ.

ಭೂಮಿಯು ತನ್ನ ಕಕ್ಷೆಯಲ್ಲಿ ಒಂದಾವರ್ತಿ ಸುತ್ತುವಾಗ ಈ ರಾಶಿಚಕ್ರಗಳನ್ನು ಹಾದು ಹೋಗು ತ್ತದೆ. ಅದೇ ರೀತಿ ಸೂರ್ಯನು ದಿನಕ್ಕೆ ಒಂದು ಡಿಗ್ರಿಯಷ್ಟು ಚಲಿಸಿ ಕ್ರಾಂತಿವೃತ್ತವನ್ನು 365 ಕಾಲು ದಿನಗಳಲ್ಲಿ ಪೂರ್ತಿಗೊಳಿಸುವನು. ಅಂದರೆ ಒಂದು ರಾಶಿಯನ್ನು ಪೂರ್ತಿ ದಾಟಲು ತಗಲುವ ಸಮಯ 1 ತಿಂಗಳು. ಈ ರೀತಿ ಸೂರ್ಯನು ಒಂದರಿಂದ ಮತ್ತೊಂದಕ್ಕೆ ಪ್ರವೇಶಿಸುವ ಸಂದ ರ್ಭವನ್ನು ಸಂಕ್ರಮಣ ಅಥವಾ ಸಂಕ್ರಾಂತಿ ಎನ್ನು ತ್ತಾರೆ. ಇದಕ್ಕನುಗುಣವಾಗಿ ವರ್ಷದಲ್ಲಿ 12 ಸಂಕ್ರಮಣಗಳು ರಾಶಿನಾಮದಿಂದ ಉಲ್ಲೇಖಿಸಲ್ಪಡುತ್ತವೆ.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವು ಕ್ಯಾಲೆಂಡರ್‌ ಪ್ರಕಾರ ಜನವರಿ 14 ಅಥವಾ 15 ಎಂದು ನಿಗದಿಗೊಳ್ಳುತ್ತದೆ. ಆ ದಿನವೇ “ಮಕರ ಸಂಕ್ರಮಣ’. ಇದಕ್ಕೆ ಪೌರಾಣಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ನಮ್ಮ ಪ್ರಾಚೀನ ಶಾಸ್ತ್ರಜ್ಞರು ನೀಡಿದ್ದಾರೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಬಳಿಕ 6 ತಿಂಗಳ ಕಾಲ ಅಂದರೆ ಜುಲೈ 15ರ ವರೆಗಿನ ಅವಧಿಯನ್ನು “ಉತ್ತರಾಯಣ ‘ವೆಂದೂ ತದನಂತರದ 6 ತಿಂಗಳನ್ನು ಅಂದರೆ ಪುನಃ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವವರೆಗಿನ ಅವಧಿಯನ್ನು ದಕ್ಷಿಣಾಯಣ ಎನ್ನಲಾಗುತ್ತದೆ. ಉತ್ತರಾಯಣ ಕಾಲವನ್ನು ಶ್ರೇಷ್ಠ ಕಾಲವೆಂದು ಪರಿಗಣಿಸಿ, ಸತ್ಕರ್ಮಗಳನ್ನು ನೆರವೇರಿಸುವಂತಹ ಶುಭ ಮುಹೂರ್ತಗಳು ಲಭಿಸುವ ಸಂದರ್ಭವೆಂದು ತಿಳಿಯಲಾಗಿದೆ. ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವ ಬರಲು ಉತ್ತರಾಯಣ ಪುಣ್ಯ ಕಾಲದ ಮೊದಲ ತೇದಿ ಎನ್ನುವುದೇ ಮೂಲ ಕಾರಣ.

ಈ ದಿನದಂದು ರಾಷ್ಟ್ರದ ಹಲವು ದೇವಾಲ ಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತವೆ. ಸೂರ್ಯನ ದೇಗುಲಗಳಲ್ಲಂತೂ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಕೋನಾರ್ಕದ ಸೂರ್ಯ ದೇವಾಲಯದಲ್ಲಂತೂ ಒಂದು ತಿಂಗಳ ಉತ್ಸವವಿದೆ. ಕೇರಳ ರಾಜ್ಯದ ಪ್ರಸಿದ್ಧ ಶಬರಿ ಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣದ ದಿನ “ಮಕರ ವಿಳಕ್‌R’ (ಮಕರ ಜ್ಯೋತಿ) ದರ್ಶನವಾಗುವುದು. ಪಂದಳ ಅರಮನೆಯಿಂದ ತಂದ ತಿರುವಾಭರಣಗಳನ್ನು ಸ್ವಾಮಿಗೆ ತೊಡಿಸಿ, ಆರತಿ ಬೆಳಗುವಾಗ ಪೊನ್ನಂಬಲ ಕಾಡಿನಲ್ಲಿ ಗೋಚರಿಸುವ “ಮಕರ ಜ್ಯೋತಿ’ಯನ್ನು ಕಂಡು ಭಕ್ತರು ಪುನೀತರಾಗುತ್ತಾರೆ.

ಇನ್ನು ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಈ ಕಾಲದಲ್ಲಿ ತೀರಿಕೊಂಡರೆ ಮೋಕ್ಷ ಪ್ರಾಪ್ತಿ, ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆಇದೆ.

ಉತ್ತರ ಕರ್ನಾಟಕದ ಕೆಲವೆಡೆ ಗೋವು ಮತ್ತು ರಾಸುಗಳನ್ನು ವಿಶೇಷ ವಸ್ತ್ರಾಭರಣಗಳಿಂದ ಶೃಂಗರಿಸಿ ಮೃಷ್ಟಾನ್ನಗಳನ್ನು ನೀಡಿ ಪೂಜಿಸಲಾ ಗುತ್ತದೆ. ರಾಸುಗಳ ಒಂದೊಂದು ಕೊಂಬನ್ನು ಒಂದೊಂದು ಆಯನಗಳೆಂದು ಪರಿಗಣಿಸಿ ಪೂಜಿ ಸುವ ಪದ್ಧತಿಯೂ ಇದೆ. ಕೆಂಡದ ರಾಶಿಯ ಮೇಲೆ ಜಾನುವಾರುಗಳನ್ನು ಹಾಯಿಸುವ ಪದ್ಧತಿ ಯೂ ಇದೆ. ಕೆಲವೆಡೆ ಗೂಳಿ ಕಾಳಗವೂ ಇದೆ.

ಹಲವೆಡೆ ಸುಗ್ಗಿಯ ಹಬ್ಬ. ಆಂಧ್ರಪ್ರದೇಶದಲ್ಲಿ ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಸ್ವೀಕರಿಸಿ ಕರೆತಂದ ದಿನವೆಂದು ಮನೆಯ ಮುಂದೆ ಬೆಂಕಿಯನ್ನು ಹಾಕಿ “ರಾವಣದಹನ’ವನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ “ಪೊಂಗಲ್‌’ ಎಂದೇ ಪ್ರಸಿದ್ಧಿ. ಉತ್ತರ ಭಾರತದಲ್ಲಿ ಗಾಳಿಪಟ ಉತ್ಸವಗಳಿರುತ್ತವೆ. ಪ್ರಯಾಗದಲ್ಲಿ ಈ ವೇಳೆಗೆ ಸುಪ್ರಸಿದ್ಧ ಕುಂಭಮೇಳ ಸಂಪನ್ನಗೊಳ್ಳುತ್ತದೆ.

ತುಳುನಾಡಿನ ದೈವಾರಾಧನೆ ಪದ್ಧತಿಯಲ್ಲೂ ಅಗೆಲು ಸೇವೆ, ಆಯನ ಬಲಿ, ದರ್ಶನ ಸೇವೆಗಳು ನಡೆಯುತ್ತವೆ. ಮನೆ-ಮನೆಗಳಿಗೆ ಹೋಗಿ ಎಳ್ಳು- ಬೆಲ್ಲ ನೀಡುವ ಸಂಪ್ರದಾಯವಿದೆ. ಹಬ್ಬ ಸುಖ, ಸಮೃದ್ಧಿಯ ಜತೆ ನಮ್ಮ ನಕಾರಾತ್ಮಕ ಭಾವ ದೂರವಾಗಿ ಧನಾತ್ಮಕ ಭಾವ ಉದ್ದೀಪನಗೊಳ್ಳಲಿ ಎಂಬುದೇ ಈ ಎಳ್ಳು- ಬೆಲ್ಲ ವಿನಿಮಯದ ಸಂದೇಶ. ಶ್ರೀ ಸೂರ್ಯನಾರಾಯಣ ಸಮಸ್ತ ಜೀವಿಗಳ ಬದುಕಿಗೆ ಆಧಾರ. ಶ್ರೀ ಸೂರ್ಯ ದೇವ ರನ್ನು ಭಕ್ತಿ ಶ್ರದ್ಧೆಯಿಂದ ಪೂಜಿ ಸಿ, ಅವನ ಆನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ.

-ಮೋಹನದಾಸ, ಸುರತ್ಕಲ್‌

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.