ಸರಕಾರಕ್ಕೆ ಭೂಗಳ್ಳರನ್ನು ಹಿಡಿಯಲು ಮನಸ್ಸಿಲ್ಲವೇ?


Team Udayavani, Apr 10, 2017, 7:03 AM IST

land.jpg

ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳೆರಡರಲ್ಲೇ 60,000 ಎಕರೆಗಳಷ್ಟು ಭೂಕಬಳಿಕೆಯಾದರೆ, ಕರ್ನಾಟಕದಲ್ಲಿ ಒಟ್ಟು ಕಬಳಿಕೆಯಾದ ಭೂ ಪ್ರಮಾಣ 6 ಲಕ್ಷ ಎಕರೆಯಷ್ಟಿದೆ.

ಈ ಕಬಳಿಕೆಯ ಕಾರ್ಯದಲ್ಲಿ ಬಿಲ್ಡರ್‌ಗಳು, ಶಾಸಕರು, ರಿಯಲ್‌ ಎಸ್ಟೇಟ್‌ ಏಜೆಂಟರು, ಕಾರ್ಪೊರೇಟಿನ/ಕಂಪೆನಿಗಳ ಸದಸ್ಯರು, ಕಾಫಿ ಪ್ಲಾಂಟರ್‌ಗಳು ಎಲ್ಲರೂ ತೊಡಗಿದ್ದಾರೆ. 

ಭೂಕಬಳಿಕೆ ಬಿಬಿಎಂಪಿಯಲ್ಲಿ, ಬಿಡಿಎನಲ್ಲಿ, ಅರಣ್ಯ ಇಲಾಖೆಯಲ್ಲಿ , ಪಂಚಾಯ್ತಿಗಳಲ್ಲಿ, ಕಂದಾಯ ಇಲಾಖೆಯಲ್ಲಿ ಹೀಗೆ ಎಲ್ಲ ಇಲಾಖೆಯಲ್ಲೂ ನಡೆದಿದೆ.

ಈ ಭೂಕಬಳಿಕೆಯಲ್ಲಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಶಾಮೀಲಾಗಿದ್ದಾರೆ. ಈ ಅವ್ಯವಹಾರದಲ್ಲಿ ತೊಡಗಿಕೊಂಡ ಇವರೆಲ್ಲರ ವಿಚಾರಣೆಗಾಗಿ ಕಂದಾಯ ಭವನದಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. 

ಈ ವಿಶೇಷ ನ್ಯಾಯಾಲಯ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತ ಬಂತು. ಈ ನ್ಯಾಯಾಲಯಕ್ಕೆ ಯಾವ ಜಿಲ್ಲಾಧಿಕಾರಿಯಾಗಲಿ, ತಹಸೀಲ್ದಾರರಾಗಲಿ, ಅರಣ್ಯ ಇಲಾಖೆಯವರಾಗಲಿ ಒಂದೂ ಕೇಸು ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳ ಈ ಅಸಹಕಾರ ನೀತಿಗೆ ಬೇಸತ್ತು ವಿಶೇಷ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅವರಿಗೆಲ್ಲ ನೋಟಿಸ್‌ ಕೊಟ್ಟು ಕರೆಸಿಕೊಂಡು ಕೂಡಲೇ ಕಡತಗಳನ್ನು ಕಳಿಸಲು ತಾಕೀತು ಮಾಡಿದ್ದಾರೆ. ಅನೇಕ ಭೂಗಳ್ಳರು, ಭೂಕಬಳಿಕೆದಾರರು, ಬಿಲ್ಡರ್‌ಗಳು ಕಾಲಹರಣ ಮಾಡಲು ನ್ಯಾಯಾಧಿಲಯಗಳಿಗೆ ಅಪೀಲ್‌ ಹಾಕಿಕೊಂಡಿದ್ದಾರೆ. ಆ ಕೇಸುಗಳನ್ನೆಲ್ಲ ಅಲ್ಲಿಂದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕಾನೂನು ಸಚಿವರು ಅಡ್ವೊಕೇಟ್‌ ಜನರಲ್‌ ಮೂಲಕ ಸಂಬಂಧಪಟ್ಟ ನ್ಯಾಯಾಧಿಲಯಗಳನ್ನು ವಿನಂತಿಸಿಕೊಳ್ಳಬೇಕು. 
ಈ ಕೆಲಸ ಇದುವರೆಗೂ ಆಗಿಲ್ಲ.

ವಿಶೇಷ ನ್ಯಾಯಾಲಯ ಸರಕಾರದ ಈ ಅಧಿಕಾರಿಗಳ ಅಸಹಕಾರಕ್ಕೆ ರೋಸಿ ತಾನೇ ಕೆಲವು ಮುಖ್ಯವಾದ ಪ್ರಕರಣಗಳನ್ನು ಕೈಗೆತ್ತಿಧಿಕೊಂಡು, ಆ ಪ್ರಕರಣಗಳ ವಿಚಾಧಿರಣೆಗೆ ತೊಡಗಿದೆ. ಉದಾಹರಣೆಗೆಶ್ರೀರಂಗಧಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲ ಯಕ್ಕೆ ದಾನಿಗಳು 50-60 ವರ್ಷಗಳ ಹಿಂದೆ ದಾನವಾಗಿ ಕೊಟ್ಟ 270 ಎಕರೆ ಜಮೀನನನ್ನು ಉತುಬಿತ್ತಿ ಮಾಡುತ್ತಿದ್ದ ರೈತರು ಮಾರಿ ಹಾಕಿರುವುದಲ್ಲದೆ ಆ ಜಮೀಧಿನುಗಳು 3-4 ಸಾರಿ ಬೇರೆ ಬೇರೆಯವರಿಗೆ ಹಸ್ತಾಂತರವಾಗಿದೆ. ಅವುಗಳಲ್ಲಿ ಕೆಲವು ಎಕರೆಗಳಷ್ಟು ಜಮೀನು 10-20 ವರ್ಷ ಗಳಲ್ಲಿ ನಿವೇಶನಗಳಾಗಿ ಪರಿವರ್ತಿತವಾಗಿ ಮಾರಾಟ ಕೂಡ ಆಗಿದೆ.

ದೇವಾಲಯದ ಜಮೀನು ಒಂದೇ ಕಡೆ ಇಲ್ಲ ಎರಡು ಮೂರು ಬೇರೆ ಬೇರೆ ಹೋಬಳಿಗಳಲ್ಲಿವೆ. ಪತ್ರಿಕಾ ವರದಿಗಳ ಪ್ರಕಾರ ಈ ಜಮೀನಿಗೆ ಸಂಬಂಧಪಟ್ಟಂತೆ ಶಾಸಕರೊಬ್ಬರು ಸೇರಿದಂತೆ 52 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಗೇರಿ ಹೋಬಳಿಯ ವೆಂಕಟಾಪುರ ಗ್ರಾಮ ಒಂದು ಇನಾಂಗ್ರಾಮ. ಇನಾಂ ರದ್ದತಿಯಾದ ಮೇಲೆ ಆ ಜಮೀನು ಸರ್ಕಾರಕ್ಕೆ ಸೇರಬೇಕು. ಆದರೆ ಅದು ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿ ಈಗ ಅದು ಒಂದು ಬಿಲ್ಡರ್ಸ್‌ನವರಲ್ಲಿದೆ. ಬಸವನಗುಡಿಯಲ್ಲಿ 6000 ಮನೆಗಳ ಒಂದು ಫ್ಲಾಟ್‌ ಕಟ್ಟಿ ಈಗಾಗಲೇ ಕೊಳ್ಳುವವರಿಂದ ಮುಂಗಡವಾಗಿ ತಲಾ 2- 3 ಲಕ್ಷ ಪಡೆದಿದ್ದಾರೆ ಬಿಲ್ಡರ್ಸ್‌ಗಳು. ಈ ಮಾರಾಟಕ್ಕೆ ತಡೆ ಹಾಕಲು ಇಷ್ಟರಲ್ಲೇ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಆನೇಕಲ್‌ ತಾಲೂಕು ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿಯಲ್ಲಿ ಸರ್ವೆ ನಂ. 147ರ 103 ಎಕರೆ 33 ಗುಂಟೆ ಗೋಮಾಳದಲ್ಲಿನ ವಸತಿ ನಿರ್ಮಾಣ ಪ್ರಕರಣದಲ್ಲಿ ಶಾಸಕರೊಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರಿನ ಸ.ನಂ. 156ರಲ್ಲಿ 15 ಎಕರೆ ಸರ್ಕಾರಿ ಭೂಮಿ ಬಳಕೆ ಆಗಿರುವ ಪ್ರಕರಣದಲ್ಲಿ ಸಚಿವರೊಬ್ಬರ ಮೇಲೂ ಕೇಸ್‌ ದಾಖಲಾಗಿದೆ. ಅವರಿಗೂ, ಅವರ ಮಕ್ಕಳಿಗೂ ನೋಟೀಸ್‌ ನೀಡಲಾಗಿದೆ.

ಈವರೆಗೆ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ 348 ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ. ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿರುವ ಭೂಕಬಳಿಕೆ ಪ್ರಕರಣಗಳು 243. ಖಾಸಗಿ ದೂರಿನ ಮೇಲೆ ದಾಖಲಾಗಿರುವ ಪ್ರಕರಣಗಳು 92. ವಿವಿಧ ಸರ್ಕಾರಿ ಇಲಾಖೆಗಳಿಂದ ವರ್ಗಾವಣೆಯಾಗಿರುವ ಪ್ರಕರಣಗಳ ಸಂಖ್ಯೆ 8. ಈ ಪೈಕಿ 13 ಪ್ರಕರಣಗಳು ಈವರೆಗೆ ಇತ್ಯರ್ಥಗೊಂಡಿವೆ. 5 ಪ್ರಕರಣಗಳು ಬೇರೆ ನ್ಯಾಯಾಲಯಗಳಿಗೆ ವರ್ಗಾವಣೆಯಾಗಿವೆ. ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಕಡೆ 4000 ಭೂಗಳ್ಳರ ಪ್ರಕರಣಗಳಿವೆ. ಜಿಲ್ಲಾಧಿಕಾರಿಗಳು ಮತ್ತು ಎಸಿಗಳ ನ್ಯಾಯಾಲಯಗಳಲ್ಲೂ 3000 ಪ್ರಕರಣಗಳಿವೆ. ಇವುಗಳನ್ನು ಈ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಎಂದೋ ವರ್ಗಾಯಿಸಬೇಕಿತ್ತು.

ಇಂದಿಗೂ ಅವರು ಈ ಕೆಲಸ ಮಾಡಿಲ್ಲ. ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರು ಕಾಟಾಚಾರಕ್ಕೆ 500 ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟರು. ಆ ಕಡತದಲ್ಲಿ ಗ್ರಾಮದ ಹೆಸರು ಸನಂ. ಕಬಳಿಸಿದ ಜಮೀನಿನ ವಿಸ್ತೀರ್ಣ ಇಷ್ಟನ್ನು ಪಟ್ಟಿ ಮಾಡಿ ಕಳಿಸಿದ್ದರು. ಕಬಳಿಕೆ ಮಾಡಿದವನ ಹೆಸರು, ವಿಳಾಸ ಇಲ್ಲ, ರೆಕಾರ್ಡ್‌ ತಿದ್ದಿದ ಅಧಿಕಾರಿಯ ಹೆಸರಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಿ 4 ತಿಂಗಳೇ ಆದರೂ ಇನ್ನೂ ಈ ತಹಸೀಲ್ದಾರರು ಭೂಗಳ್ಳರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿಲ್ಲ. ಈ ಬಗ್ಗೆ ಬೇಜವಾಬ್ದಾರಿತನ ನಮ್ಮ ಜಿಲ್ಲಾಧಿಕಾರಿಗಳದು ಮತ್ತು ತಹಸೀಲ್ದಾರರದು.

ವಿಶೇಷ ನ್ಯಾಯಾಲಯ ನೋಟೀಸ್‌ ನೀಡಿದ್ದರೂ ಸ್ಪಂದಿಸಲಿಲ್ಲವಾದ್ದರಿಂದ ವಿಶೇಷ ನ್ಯಾಯಾಲಯ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರಿಗೆ ವಾರೆಂಟ್‌ ಜಾರಿ ಮಾಡಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆಯಬೇಕಾಯಿತು. ಸರ್ಕಾರ ಭೂಗಳ್ಳರಿಗೆ ರಕ್ಷಣೆ ನೀಡುವ ಇಲಾಖಾಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ. ಸರ್ಕಾರಕ್ಕೆ ಭೂಗಳ್ಳರನ್ನು ಹಿಡಿದು ಶಿಕ್ಷಿಸುವ ಮನಸ್ಸಿಲ್ಲದಿದ್ದ ಮೇಲೆ ಈ ವಿಶೇಷ ನ್ಯಾಯಾಲಯ ಆರಂಭಿಸುವ ನಾಟಕವನ್ನು ಏಕೆ ಮಾಡಬೇಕಿತ್ತು? ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ ಇದಲ್ಲವೇ?

– ಎಚ್‌.ಎಸ್‌. ದೊರೆಸ್ವಾಮಿ 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.