ಜಗತ್ತಿನ ಅದ್ಭುತಗಳ ನಾಚಿಸುವಂತೆ ಶ್ರೀರಾಮಮಂದಿರ ನಿರ್ಮಾಣ!

3 ಮಹಡಿ, ಮ್ಯೂಸಿಯಂ, ರಾಮಕಥೆ ಸಾರುವ ಉದ್ಯಾನ ; 27 ಮರಗಳ "ನಕ್ಷತ್ರವಾಟಿಕಾ' ಸೃಷ್ಟಿ

Team Udayavani, Jul 23, 2020, 10:34 AM IST

ಜಗತ್ತಿನ ಅದ್ಭುತಗಳ ನಾಚಿಸುವಂತೆ ಶ್ರೀರಾಮಮಂದಿರ ನಿರ್ಮಾಣ!

ಸಾಂದರ್ಭಿಕ ಚಿತ್ರ

ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಎದ್ದುನಿಲ್ಲಲಿರುವ ಭವ್ಯ ರಾಮಮಂದಿರದ ಚೆಲುವು ಜಗದ ಅದ್ಭುತಗಳನ್ನೂ ನಾಚಿಸಲಿದೆ. ಮೂರು ಮಹಡಿ, ಮ್ಯೂಸಿಯಂ, ನಕ್ಷತ್ರ ವಾಟಿಕಾ, ರಾಮ್‌ಕಥಾಪುಂಜ್‌ ಉದ್ಯಾನ! ಹೀಗೆ ಹಲವು ಸೌಂದರ್ಯರಾಶಿಗಳೊಂದಿಗೆ ಸಹಸ್ರ ಪುಣ್ಯಧಾಮ ಅಯೋಧ್ಯೆ ಮೈದಳೆಯಲಿದೆ. ಉದ್ದೇಶಿತ ರಾಮಮಂದಿರ 10 ಎಕರೆ ಪ್ರದೇಶದ ಕಲಾಸೃಷ್ಟಿಯಾಗಿದ್ದು, ಉಳಿದ 57 ಎಕರೆಯಲ್ಲಿ ರಾಮ ದೇಗುಲದ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ದೇಗುಲ
ಸಂಕೀರ್ಣದಲ್ಲಿ ರಚನೆಗೊಳ್ಳುವ “ನಕ್ಷತ್ರ ವಾಟಿಕಾ’ ಭಕ್ತಿಲೋಕವನ್ನು ಧರೆಗಿಳಿಸಲಿದೆ.

ಏನಿದು ನಕ್ಷತ್ರವಾಟಿಕಾ?: ಇದು ಹಿಂದೂಗಳು ನಂಬಿಕೆಯ 27 ನಕ್ಷತ್ರಗಳನ್ನು ಪ್ರತಿನಿಧಿಸುವ ಮರಗಳ ಸಮೂಹ. ಜನರು ತಮ್ಮ ಜನ್ಮನಕ್ಷತ್ರಗಳಿಗೆ ಅನುಗುಣವಾಗಿ ಆಯಾ ಮರದ ಕೆಳಗೆ ಕುಳಿತು ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಬಹುದು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾದ ಮರಗಳನ್ನೂ ಇದರ ಸಮೀಪವೇ ನೆಡಲು ರಾಮಜನ್ಮಭೂಮಿ ಟ್ರಸ್ಟ್‌ ಮುಂದಾಗಿದೆ.

ರಾಮಧ್ಯಾನದ ಉದ್ಯಾನ: ರಾಮ ದೇಗುಲ ಆವರಣದ ಸಮೀಪದಲ್ಲೇ ಶ್ರೀರಾಮನ ಬದುಕಿನ ಕಥೆ ಸಾರುವ ರಾಮ್‌ಕಥಾ ಕುಂಜ್‌ ಪಾರ್ಕ್‌ ರೂಪುತಳೆಯಲಿದೆ.
ಇದರ ಪಕ್ಕದಲ್ಲೇ ಉತ್ಖನನ ವೇಳೆ ದೊರೆತ ಶಿಲ್ಪಾ ಕೃತಿಗಳನ್ನು ಒಳಗೊಂಡ ಮ್ಯೂಸಿಯಂ ಸೃಷ್ಟಿಯಾಗಲಿದೆ. ಗೋಶಾಲೆ, ಧರ್ಮಶಾಲೆಯಿಂದ ರಾಮ ಜನ್ಮಭೂಮಿ ಕಳೆಗಟ್ಟಲಿದೆ. ಆಗಸ್ಟ್‌ 5ರ ಭೂಮಿಪೂಜೆಯ ನಂತರ ದೇಗುಲ ಸಂಕೀರ್ಣದಲ್ಲಿ ಶೇಷಾವತಾರ ಸನ್ನಿಧಾನವನ್ನು ತಾತ್ಕಾಲಿಕವಾಗಿ ನಿರ್ಮಿಸಲು ಟ್ರಸ್ಟ್‌ ಯೋಜಿಸಿ

ಅಡಿಪಾಯದಲ್ಲಿ ದೇಗುಲ ವಿವರ
ರಾಮಮಂದಿರದ ಭೂಮಿ ಪೂಜೆಗೆ ತಾಮ್ರಫ‌ಲಕವನ್ನು ಸಿದ್ಧಪಡಿಸಲಾಗುತ್ತಿದೆ. ದೇಗುಲದ ಹೆಸರು, ಸ್ಥಳ, ನಕ್ಷತ್ರರಾಶಿ, ಕಾಲವನ್ನು ಸಂಸ್ಕೃತ ಭಾಷೆಯಲ್ಲಿ
ತಾಮ್ರದ ಫ‌ಲಕದ ಮೇಲೆ ಬರೆದು ಅಡಿಪಾಯದಲ್ಲಿ ಸ್ಥಾಪಿಸಲಾಗುತ್ತದೆ.

ಸಿಂಘಲ್‌ ಆಶಯದಂತೆ ಸಂಗಮದ ನೀರು, ಮೃತ್ತಿಕ
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಯ ಸಂಗಮ ಕ್ಷೇತ್ರದಿಂದ ಪವಿತ್ರ ಮಣ್ಣು, ನೀರನ್ನು ರಾಮಮಂದಿರದ ಭೂಮಿಪೂಜೆಗೆ ಬಳಸಲಾಗುತ್ತದೆ. ವಿಹಿಂಪ ಮಾಜಿ ಅಧ್ಯಕ್ಷ, ದಿ. ಅಶೋಕ್‌ ಸಿಂಘಲ್‌ ಆಶಯದಂತೆ ಈ ಕಾರ್ಯ ನೆರವೇರಲಿದೆ. ಭೂಮಿ ಪೂಜೆ ದಿನದಂದು ಎಲ್ಲ ಹಿಂದೂ ಮನೆಗಳಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ವಿಹಿಂಪ ಆಯೋಜಿಸಿದೆ. ದೇಶದ ಎಲ್ಲ ದೇವಾಲಯ, ಮಠಗಳಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ ಎಂದು ವಿಹಿಂಪ ವಕ್ತಾರ ಅಶ್ವನಿ ಮಿಶ್ರಾ ಹೇಳಿದ್ದಾರೆ.

ಫಾಲ್ಗು ನದಿ ಮರಳು
ಭೂಮಿಪೂಜೆಗೆ ಬಿಹಾರದ ಫಾಲ್ಗು ನದಿಯ ಮರಳನ್ನು ಬಳಸಲು ಟ್ರಸ್ಟ್‌ ನಿರ್ಧರಿಸಿದೆ. ಫಾಲ್ಗು ಹಿಂದೂಗಳ ಪಾಲಿಗೆ ಪವಿತ್ರ ನದಿ. ಭಗವಾನ್‌ ಶ್ರೀರಾಮನು ಸೀತೆ, ಲಕ್ಷ್ಮಣರೊಂದಿಗೆ ಇದೇ ನದಿಯ ದಡದಲ್ಲಿ ದಶರಥನಿಗೆ ಪಿಂಡಪ್ರದಾನ ನೆರವೇರಿಸಿದ್ದ ಎಂದು ರಾಮಾಯಣ ಹೇಳುತ್ತದೆ. ಈಗಲೂ ಈ ತಾಣ ಪಿಂಡಪ್ರದಾನಕ್ಕೆ
ಹೆಸರುವಾಸಿ. ಅಲ್ಲದೆ, ಏಳು ಸಮುದ್ರಗಳು ಹಾಗೂ ದೇಶದ ಪ್ರಮುಖ ಧಾರ್ಮಿಕ ನದಿಗಳ ನೀರನ್ನು ಭೂಮಿಪೂಜೆಗೆ ಬಳಸಲು ನಿರ್ಧರಿಸಲಾಗಿದೆ.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.