‘4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಹೀಗೊಂದು ಕನ್ನಡ ಸಿನಿಮಾ


Team Udayavani, Jan 31, 2023, 2:41 PM IST

‘4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಹೀಗೊಂದು ಕನ್ನಡ ಸಿನಿಮಾ

ಕೆಲವೊಂದು ಸಿನಿಮಾಗಳು ತನ್ನ ಸ್ಟಾರ್‌ ಕಾಸ್ಟಿಂಗ್‌ ಮತ್ತು ಸಬ್ಜೆಕ್ಟ್ ನಿಂದ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತನ್ನ ಟೈಟಲ್‌ನಿಂದಲೇ ಗಮನ ಸೆಳೆಯುತ್ತವೆ. ಈಗ ಅಂಥದ್ದೇ ಒಂದು ಟೈಟಲ್‌ನಿಂದ ಗಮನ ಸೆಳೆಯುತ್ತಿರುವ ಸಿನಿಮಾ “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’. ಇದೇನು ಸಿನಿಮಾದ ಟೈಟಲ್‌ ಈ ಥರ ಇದೆಯಲ್ಲ? ಎಂಬ ಪ್ರಶ್ನೆಗೆ ಚಿತ್ರತಂಡದ ಉತ್ತರ ಹೀಗಿದೆ, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಮದುವೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಸಿನಿಮಾ. ಮದುವೆ ಮುಹೂರ್ತದ ಸಮಯದಲ್ಲಿ ಮದುವೆಯಾಗಬೇಕಾದ ನಾಲ್ಕು ಜನ ನಾಪತ್ತೆಯಾಗುತ್ತಾರೆ. ಇದ್ದಕ್ಕಿದ್ದಂತೆ ಹೀಗೆ ನಾಪತ್ತೆಯಾಗಲು ಕಾರಣವೇನು? ನಾಪತ್ತೆಯಾದವರು ಏನಾದರು? ಎಂಬುದೇ ಸಿನಿಮಾದ ಕಥಾಹಂದರ’ ಎಂದು ವಿವರಣೆ ಕೊಡುತ್ತದೆ ಚಿತ್ರತಂಡ.

“90ರ ದಶಕದಲ್ಲಿ ನಡೆಯುವ ರೆಟ್ರೊ ಕಥೆಯು ಕಲ್ಯಾಣ ಮಂಟಪದಲ್ಲಿ ಒಂದು ದಿನದಲ್ಲಿ ನಡೆಯುವ ಘಟನೆಗಳನ್ನು ಹಾಸ್ಯದ ಮೂಲಕ ಈ ಸಿನಿಮಾದಲ್ಲಿ ತೆರೆಮೇಲೆ ತರಲಾಗುತ್ತಿದೆ. ವಿವಾಹಕ್ಕೆ ಹೋದ ಸಂದರ್ಭದಲ್ಲಿ ನೋಡಿದಂತ ನೈಜ ಅಂಶಗಳನ್ನು ಚಿತ್ರಣ ಸಿನಿಮಾದಲ್ಲಿದೆ. ಮದುವೆ ಅಂದರೆ ಎಷ್ಟೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತದೆ. ವರದಕ್ಷಿಣೆ, ಕುಡಿದು ಬಂದು ಗಲಾಟೆ ಮಾಡುವುದು, ಅಡುಗೆ ಸರಿಯಿಲ್ಲವೆಂದು ಮೂಗು ತೂರಿಸುವುದು. ಹೆಣ್ಣು ಓಡಿ ಹೋಗುವುದು, ಮತ್ತೂಂದು ಕಡೆ ಗಂಡು ವಿರೋಧ ವ್ಯಕ್ತಪಡಿಸುವುದು… ಇನ್ನು ಮುಂತಾದವು ಆ ಜಾಗದಲ್ಲಿ ನಡೆಯುತ್ತದೆ. ಅಂತಿಮವಾಗಿ ಶುಭ ಮುಹೂರ್ತ ನಡೆಯುತ್ತದಾ? ಇಲ್ಲವಾ? ಎಂಬುದು ಕಥೆಯ ಒಂದು ಎಳೆಯಾಗಿದೆ’ ಎನ್ನುತ್ತದೆ ಚಿತ್ರತಂಡ.

ಇನ್ನು “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಸಿನಿಮಾದಲ್ಲಿ “ರಥಾವರ’ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ಪುತ್ರ ಗೋವಿಂದ್‌ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಾನ್ವಿ ಶರ್ಮ, ಸುರಕ್ಷಿತಾ ನಾಯಕಿಯರಾಗಿದ್ದು ಉಳಿದಂತೆ ಬಲರಾಜವಾಡಿ, ಬ್ಯಾಂಕ್‌ ಜನಾರ್ಧನ್‌, ಟೆನ್ನಿಸ್‌ ಕೃಷ್ಣ, ಕಮಲಾ, ತನುಜಾ, ಮಮತಾ, ಸವಿತಾ, ಅರವಿಂದ್‌, ಸುಜಿತ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪೂವೈ ಸುರೇಶ್‌ ಮತ್ತು ಶಿವರಾಜ್‌ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. “ನೀಲಕಂಠ ಫಿಲಿಂಸ್‌’ ಬ್ಯಾನರಿನಲ್ಲಿ ಡಿ. ಯೋಗರಾಜ್‌ – ಮಹೇಂದ್ರನ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಗ್ನಿ ಗಣೇಶ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಇತ್ತೀಚೆಗೆ “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಚಿತ್ರದ ಮುಹೂರ್ತ ನಡೆಸಿರುವ ಚಿತ್ರತಂಡ ಚನ್ನಪಟ್ಟಣ, ಮಂಡ್ಯ, ಚಿಕ್ಕಮಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಯೋಚನೆಯಲ್ಲಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ ಎಂಬುದು ಚಿತ್ರತಂಡದ ಮಾಹಿತಿ.

ಟಾಪ್ ನ್ಯೂಸ್

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ

ಬಿಲ್ಕಿಸ್‌ಬಾನು ಪ್ರಕರಣ: ಮಾ.27ಕ್ಕೆ ವಿಚಾರಣೆ

ಬಿಲ್ಕಿಸ್‌ಬಾನು ಪ್ರಕರಣ: ಮಾ.27ಕ್ಕೆ ವಿಚಾರಣೆ

ಕೇರಳದ ಹಳ್ಳಿಯ ಹೆಸರೇ ಕಥಕ್ಕಳಿ ಗ್ರಾಮಂ; 12 ವರ್ಷಗಳ ಹೋರಾಟಕ್ಕೆ ಸಂದ ಜಯ

ಕೇರಳದ ಹಳ್ಳಿಯ ಹೆಸರೇ ಕಥಕ್ಕಳಿ ಗ್ರಾಮಂ; 12 ವರ್ಷಗಳ ಹೋರಾಟಕ್ಕೆ ಸಂದ ಜಯ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malegaala Bantu Saniha song from pranayam movie

‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’

Prajwal devraj’s veeram movie trailer

‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್‌ ದೇವರಾಜ್ ಅಬ್ಬರ

ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’

ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’

sanjana das

ಜೋಗಪ್ಪನ ಅರಮನೆಯಲ್ಲಿ ಸಂಜನಾ ದಾಸ್‌

ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜತೆಯಾದ ಕರಾವಳಿ ಕುವರಿ

ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜತೆಯಾದ ಕರಾವಳಿ ಕುವರಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ

ಬಿಲ್ಕಿಸ್‌ಬಾನು ಪ್ರಕರಣ: ಮಾ.27ಕ್ಕೆ ವಿಚಾರಣೆ

ಬಿಲ್ಕಿಸ್‌ಬಾನು ಪ್ರಕರಣ: ಮಾ.27ಕ್ಕೆ ವಿಚಾರಣೆ

ಕೇರಳದ ಹಳ್ಳಿಯ ಹೆಸರೇ ಕಥಕ್ಕಳಿ ಗ್ರಾಮಂ; 12 ವರ್ಷಗಳ ಹೋರಾಟಕ್ಕೆ ಸಂದ ಜಯ

ಕೇರಳದ ಹಳ್ಳಿಯ ಹೆಸರೇ ಕಥಕ್ಕಳಿ ಗ್ರಾಮಂ; 12 ವರ್ಷಗಳ ಹೋರಾಟಕ್ಕೆ ಸಂದ ಜಯ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.