who is he ? : ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿರುಗೇಟು ಕೊಟ್ಟ ಅಭಿಷೇಕ್ ಅಂಬರೀಶ್
Team Udayavani, Jul 9, 2021, 4:07 PM IST
ಬೆಂಗಳೂರು : ಸುಮಲತಾ ಏಕಾಂಗಿ ಅಲ್ಲ, ಅವರ ಹಿಂದೆ ನಾವಿದ್ದೇವೆ, ಮಂಡ್ಯದ ಜನ ಇದ್ದಾರೆ ಲಕ್ಷಾಂತರ ಜನ ಅಂಬರೀಶ್ ಅವರ ಅಭಿಮಾನಿಗಳಿದ್ದಾರೆ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಇಂದು (ಜುಲೈ 09) ಖಾಸಗಿ ಮಾಧ್ಯಮವೊಂದಕ್ಕೆ ಮಂಡ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷದ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಿ, ನಾನು ಮೊದಲಿನಿಂದಲೂ ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಈ ಬಗ್ಗೆ ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಸುಮಲತಾ ಅವರು ಏಕಾಂಗಿಯಲ್ಲ, ಅವರ ಜೊತೆ ನೀವು-ನಾವು ಹೀಗೆ ಸುಮಾರ ಜನ ಇದ್ದಾರೆ ಎಂದರು.
ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತೆಗೆದುಕೊಂಡ ಹೋದ ವಿಚಾರಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ ಅಭಿ, ಪದೇ ಪದೆ ಈ ವಿಚಾರ ಮಾತನಾಡಿ ಯಾವ ಪ್ರಯೋಜನವು ಇಲ್ಲ. 2018 ನವೆಂಬರ್ 24 ರಂದು ಅಂಬರೀಶ್ ಅವರು ಮಡಿದ ದಿನದಂದು ಮಿಡಿಯಾಗಳ ಮುಂದೆ ಯಾರು ಏನೂ ಮಾತನಾಡಿದ್ದಾರೋ ಅದನ್ನಾ ನೀವೇ ಒಂದು ಸಾರಿ ನೋಡಿ, ಜನರ ಮುಂದೆ ಇಡಿ. ಮೊದಲ ಯಾರು ಮಾತಾಡಿದರು, ಏನು ಹೇಳಿದರು ಅವತ್ತು, ಯಾರು ಕರಕೊಂಡ ಹೋಗಬೇಕು ಅಂತಿದ್ದಾರೆ, ಯಾರು ತಡಿಯುತ್ತಿದ್ದಾರೆ ಎಂಬುದನ್ನೆಲ್ಲ ಅವರೇ ಮಾತಾಡಿದ್ದಾರೆ. ಆ ಬಗ್ಗೆ ನಾವು ಈಗ ಮಾತಾಡುವ ಅಗತ್ಯತೆ ಇಲ್ಲ ಎಂದರು.
ಇನ್ನು ಸುಮಲತಾ ಅವರನ್ನು ನಟೋರಿಯಸ್ ಎಂದಿರುವ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಅಭಿ, who is he ? ನನಗೆ ಯಾರವನು ? ನಟೋರಿಯಸ್ ಅಂತಾ ಹೇಳಲು ಯಾರವನು ? ಒಂದು ವೇಳೆ ಅವನಲ್ಲಿ ಸಮಸ್ಯೆ ಇದ್ರೆ ಅಸೆಂಬ್ಲಿಗೆ ಹೋಗಿ ಮಾತಾಡಲಿ. ಅಕ್ರಮ ಗಣಿಗಾರಿಕೆ ತಪ್ಪು ಎಂದು ಹೇಳಿದರು ನಟೋರಿಯಸ್ ಎನ್ನುವುದಾದರೆ ನಾವು 100% ನಟೋರಿಯಸ್ ನೋಡಿ ಎಂದು ಅಭಿ ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ