ಒಳ್ಳೆಯ ಕಾರ್ಯಕ್ಕಾಗಿ ರಸ್ತೆಗಿಳಿದ ನಟ ಸತೀಶ್ ನೀನಾಸಂ
Team Udayavani, May 25, 2021, 2:30 PM IST
ಬೆಂಗಳೂರು : ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಚಂದನವನದ ಮಂದಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಉಪೇಂದ್ರ ಅವರು ಹಲವು ಬಗೆಯ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಇದೀಗ ಸತೀಶ್ ನೀನಾಸಂ ಅವರು ಮುಂದೆ ಬಂದಿದ್ದಾರೆ.
ನಟ ಸತೀಶ್ ನೀನಾಸಂ ಅವರೂ ಸಹ ಒಂದೊಳ್ಳೆ ಕೆಲಸಕ್ಕಾಗಿ ಬೀದಿಗೆ ಇಳಿದಿದ್ದಾರೆ. ದಿನಕ್ಕೆ ಸಾವಿರ ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ ಈ ನಟ.
ಒಂದು ಕಡೆ ಕೊರೋನಾ ಸೋಂಕು ಮತ್ತೊಂದು ಕಡೆ ಲಾಕ್ಡೌನ್ನಿಂದ ಜನರ ಬದುಕನ್ದಾನು ದುಸ್ಥರಗೊಳಿಸಿದೆ. ಲಾಕ್ಡೌನ್ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ನಟ ಸತೀಶ್ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.