ಅಹಲ್ಯಾ ಪುರಾಣ


Team Udayavani, Sep 25, 2018, 11:13 AM IST

ahalya.jpg

ಈ ಹುಡುಗಿ ಹೆಸರು ಅಹಲ್ಯಾ. ಅಪ್ಪಟ ಕನ್ನಡತಿ. ಒಂದಲ್ಲಾ, ಎರಡಲ್ಲಾ ಐದು ಚಿತ್ರಗಳಲ್ಲಿ ನಟಿಸಿದ್ದಾಗಿದೆ. ಆ ಪೈಕಿ ಒಂದು ತೆಲುಗು, ಇನ್ನೊಂದು ತಮಿಳು. ವಿಶೇಷವೆಂದರೆ, ಈ ಐದು ಚಿತ್ರಗಳು ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಹಲ್ಯಾ ಅಮ್ಮನಿಗೆ ಎರಡು ಗುರಿ ಇತ್ತಂತೆ. ಮಗಳು ಎಂಬಿಎ ಮಾಡಬೇಕು ಮತ್ತು ಸಿನಿಮಾ ನಾಯಕಿ ಆಗಬೇಕೆಂಬುದೇ ಆ ಎರಡು ಗುರಿ. ಅಹಲ್ಯಾ ಅಮ್ಮನ ಒಂದು ಕನಸನ್ನು ನನಸಾಗಿಸಿದ್ದಾರೆ. ಅದು ನಾಯಕಿ ಆಗಿದ್ದು. ಇನ್ನೊಂದು ಕನಸು ಮಾತ್ರ ಬಾಕಿ ಇದ್ದು, ಅದನ್ನೂ ಈಡೇರಿಸುವ ತವಕ ಅಹಲ್ಯಾ ಅವರದ್ದು.

ಅಂದಹಾಗೆ, ಅಹಲ್ಯಾ “ಆದಿ ಪುರಾಣ’ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. ಅಕ್ಟೋಬರ್‌ 5 ರಂದು ತೆರೆಗೆ ಬರುತ್ತಿರುವ “ಆದಿ ಪುರಾಣ’ದಲ್ಲಿ ಅವಕಾಶ ಸಿಕ್ಕ ಬಗ್ಗೆ ಅಹಲ್ಯಾ ಹೇಳಿದ್ದು ಹೀಗೆ. ಈ ಚಿತ್ರ ಸಿಕ್ಕಿದ್ದೇ ಫೇಸ್‌ಬುಕ್‌ನಿಂದ. ಹಲವು ಸ್ನೇಹಿತರು ಶಮಂತ್‌ ಅವರು ಚಿತ್ರಕ್ಕೆ ನಾಯಕಿ ಹುಡುಕುತ್ತಿದ್ದಾರೆ ಒಂದು ಸಲ ಪ್ರಯತ್ನ ಮಾಡು ಅಂತ ಎಲ್ಲರೂ ಮೆಸೇಜ್‌ ಕಳಿಸಿದರು. ಸಾಕಷ್ಟು ಜನರ ಮೆಸೇಜ್‌ ನೋಡಿದೆ. ಎಲ್ಲರೂ ಶಮಂತ್‌ ಚಿತ್ರವನ್ನೇ ಹೇಳಿದರು. ಕೊನೆಗೆ ಶಮಂತ್‌ ಅವರನ್ನು ಭೇಟಿ ಮಾಡಿದೆ. ನಿರ್ದೇಶಕ ಮೋಹನ್‌ ಕಾಮಾಕ್ಷಿ ಅವರು ಕಥೆ ಹೇಳಿದರು.

ಖುಷಿಯಾಯ್ತು. ಮೊದಲ ಸಲ ಒಂದು ಚಾಲೆಂಜಿಂಗ್‌ ಪಾತ್ರ ಸಿಕ್ಕಿತ್ತು. ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಲೈಫ್ ಹೇಗಿರುತ್ತೆ ಎಂಬುದನ್ನು ಹಾಸ್ಯ ಮೂಲಕ ಹೇಳುತ್ತಾ ಹೋದರು. ಅವರು ಹೇಳಿದ್ದರಲ್ಲಿ ಎಲ್ಲೂ ವಲ್ಗರ್‌ ಎನಿಸಲಿಲ್ಲ. ಒಪ್ಪಿಕೊಂಡೆ. ಚಿತ್ರೀಕರಣ ಕೂಡ ಮುಗಿಯಿತು. ಅನುಭವ ಮಾತ್ರ ಅನನ್ಯ. ನಿರ್ದೇಶಕರು ಶೂಟಿಂಗ್‌ ವೇಳೆ ಸಾಕಷ್ಟು ಕೆಲಸ ತೆಗೆದುಕೊಂಡರು. ಅಲ್ಲೊಂದು ಕಿಸ್ಸಿಂಗ್‌ ಸೀನ್‌ ಇತ್ತು. ಅವರು ಹೇಳಿದಂತೆ ಮಾಡಿದೆ. ಆದರೆ, ಅವರಿಗೇಕೋ ಸರಿ ಅನಿಸಲಿಲ್ಲ. ಕೊನೆಗೆ ಫೀಲ್‌ ತುಂಬಿ ನಟಿಸಬೇಕು.

ನೋಡಿದವರಿಗೆ ಅದು ನಟನೆ ಎನಿಸಬಾರದು ಅಂತ ಹುರಿದುಂಬಿಸಿದ್ದರಿಂದ ಕೆಲ ಕಷ್ಟದ ದೃಶ್ಯಗಳೆಲ್ಲವೂ ಸುಲಭವಾಯ್ತು. ಅದು ಬಿಟ್ಟರೆ, ಚಿತ್ರದಲ್ಲಿ ಒಂದು ಮದುವೆ ಹಾಡಿದೆ. ಅದು ಹೈಲೆಟ್‌. ಬ್ರಾಹ್ಮಣರ ಮದುವೆಯಲ್ಲಿ ಎಷ್ಟು ಶಾಸ್ತ್ರಗಳಿರುತ್ತವೋ ಎಲ್ಲವನ್ನೂ ಹಾಡಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಬೇರೆ ಯಾವುದೇ ಚಿತ್ರದ ಹಾಡಲ್ಲೂ ಅಷ್ಟೊಂದು ಶಾಸ್ತ್ರಗಳ ವಿವರ ಇದ್ದದ್ದು ಗೊತ್ತಿಲ್ಲ. ಚಿತ್ರಕ್ಕೆ ನಾನು ಡಬ್ಬಿಂಗ್‌ ಮಾಡಿಲ್ಲ. ಕಾರಣ, ಬೇರೆ ಚಿತ್ರದಲ್ಲಿ ಬಿಜಿ ಇದ್ದೆ’ ಎಂದು ಹೇಳುತ್ತಾರೆ ಅಹಲ್ಯಾ.

ಸದ್ಯಕ್ಕೆ ಕನ್ನಡದಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರ ಮಾಡಿದ್ದೇನೆ. ಪರಮೆಶ್‌ ನಿರ್ದೇಶಕರು. ಅದೊಂದು ಹೊಸಬಗೆಯ ಚಿತ್ರ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿದೆ. ಇನ್ನು, “ಲುಂಗಿ’ ಎಂಬ ಹೊಸಬರ ಚಿತ್ರ ಮಾಡಿದ್ದೇನೆ. ಅದು ಪೂರ್ಣ ಮಂಗಳೂರು ಸೊಗಡಿನ ಚಿತ್ರ. ಅದರಲ್ಲಿ ಕ್ರಿಶ್ಚಿಯನ್‌ ಹುಡುಗಿ ಪಾತ್ರ ಮಾಡಿದ್ದೇನೆ. ಅದು ಬಿಟ್ಟರೆ, ತೆಲುಗಿನಲ್ಲಿ ಸ್ಟುಡೆಂಟ್‌ ಬೇಸ್ಡ್ ಚಿತ್ರದಲ್ಲಿ ನಟಿಸಿದ್ದೇನೆ. ಆ ಚಿತ್ರಕ್ಕೆ ಕುಮಾರ್‌ ನಿರ್ದೇಶಕರು. ಸಂಜಯ್‌ ವರ್ಮ ಮತ್ತು ಶ್ರೀನಾಥ್‌ ನಾಯಕರು. ವಿಶೇಷವೆಂದರೆ, ಆ ಚಿತ್ರಕ್ಕೆ ನಾನೇ ಡಬ್‌ ಮಾಡಿದ್ದೇನೆ.

ಅದರೊಂದಿಗೆ ತಮಿಳಿನ “ವೆನ್ನಲ ಕಬ್ಬಡಿ ಕುಳು 2′ ಚಿತ್ರ ಮಾಡಿದ್ದೇನೆ. ಅದೂ ಸಹ ಮುಂದಿನ ತಿಂಗಳು ರಿಲೀಸ್‌ ಆಗಲಿದೆ. ನಾನು ಮಾಡಿರುವ ಐದು ಚಿತ್ರಗಳು ಇದೇ ವರ್ಷ ತೆರೆಗೆ ಬರುತ್ತಿವೆ ಎಂಬ ಖುಷಿ ಇದೆ ಎನ್ನುತ್ತಾರೆ ಅಹಲ್ಯಾ. ನನಗೆ ನಾಯಕನಷ್ಟೇ ಸರಿಸಮ ಇರುವ ಪಾತ್ರ ಬೇಕು. ಸುಮ್ಮನೆ ಹಾಡಲ್ಲಿ ಕುಣಿಯೋದು, ಹಾಗೆ ಬಂದು ಹೋಗುವ ಪಾತ್ರ ಬೇಕಿಲ್ಲ ಎನ್ನುವ ಅಹಲ್ಯಾ, ನಾನು ರಿಯಲ್‌ ಲೈಫ‌ಲ್ಲಿ ಹತ್ತು ಜನ ನಿಂತ ಜಾಗದಲ್ಲಿ ಹೋಗಲ್ಲ. ಅಷ್ಟು ಜನ ನನಗೆ ನೂರು ಜನರಂತೆ ಕಾಣುತ್ತಾರೆ.

ಶೂಟಿಂಗ್‌ ವೇಳೆ ನನಗೆ ಭಯವಾಗುತ್ತಿತ್ತು. “ಆದಿ ಪುರಾಣ’ ಮೂಲಕ ಆ ಭಯ ಮಾಯವಾಗಿದೆ. “ಆದಿ ಪುರಾಣ’ ನನಗೊಂದು ಹೊಸ ಇಮೇಜ್‌ ಕಲ್ಪಿಸುವ ಚಿತ್ರವಾಗುತ್ತೆ ಎಂಬ ನಂಬಿಕೆ ನನಗಿದೆ. ಚಿಕ್ಕಂದಿನಲ್ಲಿ ಭರತನಾಟ್ಯ ಕಲಿಯೋ ಆಸೆ ಇತ್ತು. ಆಗಲಿಲ್ಲ. ಕೊನೆಗೆ ಭರತನಾಟ್ಯ ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುವ ಆಸೆಯೂ ಬಂತು. ಅದೂ ಆಗಲಿಲ್ಲ. “ಆದಿ ಪುರಾಣ’ದಲ್ಲಿ ಭರತನಾಟ್ಯ ಡ್ಯಾನ್ಸರ್‌ ಆಗಿಯೇ ನಟಿಸಿದ್ದು ಖುಷಿ ಕೊಟ್ಟಿದೆ’ ಎಂಬುದು ಅಹಲ್ಯಾ ಮಾತು.

ಟಾಪ್ ನ್ಯೂಸ್

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.